ಮೊಬೈಲ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಸಿದ್ದಾಪುರದ ಸಿಂದೂರ ಹೆಗಡೆ ಅವರು ಓಡಿಸುತ್ತಿದ್ದ ಬೈಕು ಸರಕುಳಿಯ ಗಿರೀಶ ಗೌಡ ಅವರ ಬೈಕಿಗೆ ಡಿಕ್ಕಿಯಾಗಿದೆ. ಈ ಡಿಕ್ಕಿ ರಭಸಕ್ಕೆ ಸಿಂದೂರ ಹೆಗಡೆ ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಸಿದ್ದಾಪುರದ ಕೋಡ್ಸರದ ಮುಟ್ಟಳ್ಳಿಯಲ್ಲಿ ಸಿಂದೂರ ಸದಾನಂದ ಹೆಗಡೆ ಅವರು ವಾಸವಾಗಿದ್ದರು. 21 ವರ್ಷದ ಅವರು ಮೊಬೈಲ್ ರಿಪೇರಿಯಲ್ಲಿ ಪರಿಣಿತಿಪಡೆದಿದ್ದು, ಅದನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದರು. ಜುಲೈ 24ರಂದು ಸಿಂದೂರ ಹೆಗಡೆ ಅವರು ಶಿರಸಿಗೆ ಹೋಗಿದ್ದರು. ರಾತ್ರಿ 9.45ರ ವೇಳೆಗೆ ಅವರು ಶಿರಸಿಯಿಂದ ಸಿದ್ದಾಪುರದ ಕಡೆ ಹೊರಟಿದ್ದರು. ಬೇಗ ಮನೆ ಸೇರುವುದಕ್ಕಾಗಿ ಅವರು ಜೋರಾಗಿ ಬೈಕ್ ಓಡಿಸಿದ್ದು, ಆ ವೇಗದ ಬೈಕ್ ಚಾಲನೆಯೇ ಅವರ ಮರಣಕ್ಕೆ ಕಾರಣವಾಯಿತು.
ಆ ರಾತ್ರಿ ಸಿದ್ದಾಪುರ ಸರಕುಳಿಯ ಗಿರೀಶ ರಾಮಾ ಗೌಡ (26) ಅವರು ಚೈತ್ರಾ ಎಂಬಾತರ ಜೊತೆ ಶಿರಸಿಯಿಂದ ಸಿದ್ದಾಪುರದ ಕಡೆ ಹೊರಟಿದ್ದರು. ಅವರು ಅಜ್ಜಿಬಳ ತಲುಪಿದಾಗ ಸಿಂದೂರ ಹೆಗಡೆ ಅವರ ಬೈಕು ಡಿಕ್ಕಿಯಾಯಿತು. ಆ ಡಿಕ್ಕಿ ರಭಸಕ್ಕೆ ಎರಡು ಬೈಕಿನಲ್ಲಿದ್ದ ಮೂವರು ನೆಲಕ್ಕೆ ಅಪ್ಪಳಿಸಿದರು. ಸಿಂದೂರ ಹೆಗಡೆ ಅವರು ಅಲ್ಲಿಯೇ ಸಾವನಪ್ಪಿದ್ದು, ಗಿರೀಶ ಗೌಡ ಹಾಗೂ ಚೈತ್ರಾ ಅವರು ಆಸ್ಪತ್ರೆ ಸೇರಿದರು. ಗಿರೀಶ ಗೌಡ ಅವರು ಸಹ ಬೈಕನ್ನು ವೇಗವಾಗಿಯೇ ಓಡಿಸುತ್ತಿದ್ದು, ಅಪಘಾತದಲ್ಲಿ ಅವರ ಪಾತ್ರವೂ ಅಷ್ಟೇ ದೊಡ್ಡದಾದ ಕಾರಣ ಕೊಡ್ಸರದ ಮಹೇಶ ವೆಂಕಟ್ರಮಣ ಹೆಗಡೆ ಅವರು ಗಿರೀಶ ಗೌಡ ಅವರ ಹೆಸರು ಸೇರಿಸಿ ದೂರು ನೀಡಿದರು.
`ಹೆಲ್ಮೆಟ್ ಧರಿಸಿಯೇ ಬೈಕ್ ಓಡಿಸಿ’