ಹೊನ್ನಾವರದ ಅಳಂಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ
ಕಾಲೇಜಿನ ಪ್ರಾಂಶುಪಾಲ ಕಿಶೋರ ನಾಯ್ಕ ಅವರು ಧ್ವಜಾರೋಹಣ ನೆರವೇರಿಸಿದ್ದು, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಚಂದ್ರಕಾoತ ಕೋಚರೇಕರ್ ಅವರು `ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಷ್ಟೇ ಮುಖ್ಯ’ ಎಂದು ಹೇಳಿದ್ದಾರೆ.
`ಭ್ರಷ್ಟಾಚಾರ ಎಂಬುದು ದೇಶದ ಅತಿ ದೊಡ್ಡ ಪಿಡುಗಾಗಿದೆ. ಅದರ ನಿರ್ಮೂಲನೆಗೆ ಎಲ್ಲರೂ ಪಣ ತೊಡಬೇಕಿದೆ. ವಿದ್ಯಾರ್ಥಿಗಳೇ ಈ ದೇಶದ ಆಸ್ತಿಯಾಗಿದ್ದು, ಶಿಸ್ತು-ಪ್ರಾಮಾಣಿಕತೆ ಹಾಗೂ ದೇಶಭಕ್ತಿಯಿಂದ ಜೀವನ ರೂಪಿಸಿಕೊಳ್ಳಬೇಕು. ಶಿಕ್ಷಣದ ಜೊತೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು’ ಎಂದವರು ಕರೆ ನೀಡಿದ್ದಾರೆ. `ಪ್ರತಿಯೊಬ್ಬರು ಮತದಾನದ ಪಾವಿತ್ರ್ಯವನ್ನು ಕಾಪಾಡುವ ಮೂಲಕ ನಮ್ಮಿಂದಲೇ ದೇಶದ ಸುಧಾರಣೆಗೆ ಮೊದಲ ಹೆಜ್ಜೆಯಿಡಬೇಕು’ ಎಂದು ಹೇಳಿದ್ದಾರೆ.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಜಿ ಟಿ ಹಳ್ಳೇರ, ಕಾಲೇಜಿನ ಪ್ರಾಂಶುಪಾಲ ಕಿಶೋರ ನಾಯ್ಕ ಅವರು ಆಚಾರ-ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದೇಶಭಕ್ತಿ ಗೀತೆ, ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದರು. ಈ ವೇಳೆ ಗಿಡ ನೆಡುವ ಕಾರ್ಯಕ್ರಮವೂ ನಡೆಯಿತು. ಪ್ರಮುಖರಾದ ಜಾಫರ್ ಸಾಬ, ಮಂಜುನಾಥ ನಾಯ್ಕ, ಶೇಖರ ನಾಯ್ಕ, ರೇಷ್ಮಾ ನಾಯ್ಕ, ಅರ್ಚನಾ ನಾಯ್ಕ, ವ್ರಂದಾ ಹೆಗಡೆ, ಸತೀಶ ನಾಯ್ಕ ಮತ್ತಿತರರು ಇದ್ದರು. ಸಮಿಯಾ ಭಾನು ಸ್ವಾಗತಿಸಿದರು. ಪದ್ಮಾವತಿ ನಾಯ್ಕ ವಂದಿಸಿದರು. ಸ್ವಾತಿ ಮೇಸ್ತ ಅವರು ನಿರ್ವಹಿಸಿದರು.