ತೆಂಕಣಗೇರಿಯ ರೇವತಿ ನಾಯ್ಕ ಅವರು ನರದೌರ್ಬಲ್ಯದಿಂದಾಗಿ ನೆಲಕ್ಕೆ ಬಿದ್ದಿದ್ದು, ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನಪ್ಪಿದ್ದಾರೆ.
ಅಂಕೋಲಾದ ತೆಂಕಣಗೇರಿಯಲ್ಲಿ ರೇವತಿ ಪ್ರಕಾಶ ನಾಯ್ಕ ಅವರು ವಾಸವಾಗಿದ್ದರು. 58ವರ್ಷದ ಅವರು ಕಳೆದ 15 ವರ್ಷದಿಂದ ನರ ದೌರ್ಬಲ್ಯ ಸಮಸ್ಯೆ ಅನುಭವಿಸುತ್ತಿದ್ದರು. ಸಾಕಷ್ಟು ಕಡೆ ಚಿಕಿತ್ಸೆ ಮಾಡಿದರೂ ಅವರ ಸಮಸ್ಯೆ ಕಡಿಮೆಯಾಗಿರಲಿಲ್ಲ. ಅಗಸ್ಟ 10ರ ರಾತ್ರಿ ಮನೆಯಲ್ಲಿ ಖುರ್ಚಿ ಮೇಲೆ ಕುತಿದ್ದ ಅವರು ಮೇಲೆಳುವಾಗ ಅಲ್ಲಿದ್ದ ಟಿಪಾಯಿ ಬಡಿಯಿತು. ಪರಿಣಾಮ ನೆಲಕ್ಕೆ ಬಿದ್ದ ಅವರು ನೋವು ಮಾಡಿಕೊಂಡರು.
ರೇವತಿ ನಾಯ್ಕ ಅವರನ್ನು ಮೊದಲು ಅಂಕೋಲಾದ ಆರ್ಯ ಮೆಡಿಕಲ್’ಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ರೇವತಿ ನಾಯ್ಕ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಅಗಸ್ಟ 17ರಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದರು. ಶಿಕ್ಷಕಿಯಾಗಿರುವ ಸ್ಮಿತಾ ವಿಘ್ನೇಶ ನಾಯ್ಕ ಅವರು ತಾಯಿ ಸಾವಿನ ಬಗ್ಗೆ ಮಾಹಿತಿ ನೀಡಿ, ಪೊಲೀಸ್ ಪ್ರಕರಣ ದಾಖಲಿಸಿದರು.