ಅಂಕೋಲಾದ ಬೇಲೆಕೇರಿ-ಮಂಜಗುಣಿ-ತದಡಿ-ಗೋಕರ್ಣ ರಾಜ್ಯ ಹೆದ್ದಾರಿ-304ರಲ್ಲಿರುವ ಪೂಜಗೇರಿ ಸೇತುವೆ ಶಿಥಿಲಗೊಂಡಿದೆ. ಈ ಹಿನ್ನಲೆ ಆ ಸೇತುವೆ ಮಾರ್ಗವಾಗಿ ಭಾರೀ ವಾಹನ ಓಡಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಯಿಂದ ಈ ನಿರ್ಣಯ ಮಾಡಲಾಗಿದೆ. `ಅಂಕೋಲಾ ವ್ಯಾಪ್ತಿಯ ಬೇಲೆಕೇರಿ- ಮಂಜಗುಣಿ- ತದಡಿ-ಗೋಕರ್ಣ ರಾಜ್ಯ ಹೆದ್ದಾರಿ-304ರಲ್ಲಿರುವ ಪೂಜಗೇರಿ ಸೇತುವೆಯಲ್ಲಿ ಭಾರೀ ವಾಹನಗಳ ಸಂಚಾರ ಮಾಡುವ ಹಾಗಿಲ್ಲ’ ಎಂದು
ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಹೇಳಿದ್ದಾರೆ. ಮುಂದಿನ ಆದೇಶದವರೆಗೆ ಸೇತುವೆ ಸಂಚಾರ ನಿರ್ಭಂದಿಸಲಾಗಿದ್ದು, ಈ ಮಾರ್ಗವಾಗಿ ಓಡಾಡುವವರಿಗೆ ಪರ್ಯಾಯ ಪಥದ ಬಗ್ಗೆ ಮಾಹಿತಿ ನೀಡಲಾಗಿದೆ.
ಈ ರಸ್ತೆಗೆ ಪರ್ಯಾಯ ಮಾರ್ಗವಾಗಿ ಶೇಟಗೇರಿ ಕ್ರಾಸ್ನಿಂದ ಬಾಸಗೋಡ ಕ್ರಾಸ್ಗೆ ಕೂಡುವ ಸುಮಾರು 03 ಕಿ.ಮೀ ಅಂತರದಲ್ಲಿರುವ ಮಾರ್ಗದಿಂದ (ಶೇಟಗೇರಿ ಕ್ರಾಸ್ ರಸ್ತೆಯಿಂದ) ಭಾರೀ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿದೆ. ಲೋಕೋಪಯೋಗಿ ಇಲಾಖೆಯಿಂದ ಸದರಿ ರಾಜ್ಯ ಹೆದ್ದಾರಿ-304 ರಸ್ತೆಯ ಮೇಲೆ ಭಾರೀ ವಾಹನಗಳು ಓಡಾಡದಂತೆ ಹೈಟ್ ಬ್ಯಾರಿಯರ್ (ಂಟಿgಟe ಃಚಿಡಿಡಿieಡಿ) ಗಳನ್ನು ಸೇತುವೆಯ ಎರಡು ಬದಿಯಲ್ಲಿ ಅಳವಡಿಸಲಾಗುತ್ತದೆ. ಜೊತೆಗೆ ಸೇತುವೆಯ ಎರಡು ಬದಿಗಳಲ್ಲಿ ಭಾರೀ ವಾಹನ ನಿಷೇಧದ ಬಗ್ಗೆ ಸ್ಪಷ್ಟವಾಗಿ ಗೋಚರಿಸುವಂತಹ ಎಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ.
ಪೊಲೀಸ್ ಇಲಾಖೆಯಿಂದ ಅವಶ್ಯವಿರುವ ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಕಡ್ಡಾಯವಾಗಿ ಅಳವಡಿಸಲಿದೆ. ಸಂಚಾರ ದಟ್ಟಣೆ ಆಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಅದರೊಂದಿಗೆ ಪೊಲೀಸರು ಎಲ್ಲಾ ವಾಹನಗಳ ಚಲನ-ವಲನಗಳ ಬಗ್ಗೆ ಸರಿಯಾಗಿ ನಿಗಾವಹಿಸಲಿದ್ದು, ನಿಷೇಧದ ಆದೇಶ ಉಲ್ಲಂಘಿಸಿದರೆ ಕ್ರಮ ಜರುಗಿಸಲಿದ್ದಾರೆ.