`ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕು’ ಎಂದು ಆಗ್ರಹಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಈ ದಿನ ಹಕ್ಕೋತ್ತಾಯ ಮಾಡಿದ್ದಾರೆ. ಶಿರಸಿ ಮಾರಿಕಾಂಬ ದೇವಾಲಯದ ಏದುರು ಮೆರವಣಿಗೆ ಶುರು ಮಾಡಿದ ಹೋರಾಟಗಾರರು ನಗರಸಭೆ ರಂಗ ಮಂದಿರದಲ್ಲಿ ಸಭೆ ಮೂಲಕ ತಮ್ಮ ಬೇಡಿಕೆ ಮಂಡಿಸಿದ್ದಾರೆ.
`ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ 567 ಹಳ್ಳಿಗಳನ್ನ ಅತೀ ಸೂಕ್ಷö ಪ್ರದೇಶವೆಂದು ಗುರುತಿಸಿದಲ್ಲಿ ಜನ ಜೀವನಕ್ಕೆ ಮಾರಕವಾಗಲಿದೆ. ಹೀಗಾಗಿ ಆ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು. ಜೊತೆಗೆ ಸೂಕ್ಷ ಪ್ರದೇಶದ ಅಧ್ಯಯನಕ್ಕೆ ಸಮಿತಿ ರಚಿಸಿ ಕೇಂದ್ರ ಸರ್ಕಾರಕ್ಕೆ ತಾಂತ್ರಿಕ ಹಿನ್ನಲೆಯಲ್ಲಿ ಆಕ್ಷೇಪ ಸಲ್ಲಿಸಬೇಕು’ ಎಂದು ಈ ಸಭೆ ಒತ್ತಾಯಿಸಿದೆ. `ಕೇಂದ್ರ ಪರಿಸರ ಇಲಾಖೆಯು ಪ್ರಕಟಿಸಿದ ಸೂಕ್ಷ ಪ್ರದೇಶದ ಅಧಿಸೂಚನೆಯು ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರದಿಂದ ಪ್ರಭಲವಾಗಿ ವೈಜ್ಞಾನಿಕ, ತಾಂತ್ರಿಕ, ಜನ ಜೀವನಕ್ಕೆ ಮಾರಕ ಹಾಗೂ ಅರಣ್ಯವಾಸಿಗಳ ಅಭದ್ರತೆ ಉಂಟಾಗುವ ಅಂಶಗಳನ್ನು ಒಳಗೊಂಡoತೆ ವೈಜ್ಞಾನಿಕ ಮತ್ತು ವರದಿ ಅವೈಜ್ಞಾನಿಕ ದಾಖಲಿಸುವ ಅಂಶದೊAದಿಗೆ ಆಕ್ಷೇಪ ಸಲ್ಲಿಸಬೇಕು’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಆಗ್ರಹಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ ಅಮಿತ್ ಚೌಹಾಣ, ನಗರಸಭೆ ಆಯುಕ್ತರಾದ ಪ್ರಕಾಶ ಅವರು ಹೋರಾಟಗಾರರು ಸಲ್ಲಿಸಿದ ಆಕ್ಷೇಪ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಿ ಪಿ ಐ ಸಂಪತ್ ಕುಮಾರ್ ಉಪಸ್ಥಿತರಿದ್ದರು. ಮಹಾಭಲೇಶ್ವರ ನಾಯ್ಕ ಬೇಡ್ಕಣಿ, ಶೋಭಾ ನಾಯ್ಕ, ಎಸ್ ಎನ್ ಹೆಗಡೆ , ರಾಘು ಗುಡ್ನಾಪುರ, ಶ್ರೀಧರ ಹೆಗಡೆ, ನಾಗಪತಿ ಗೌಡ ಹುಕ್ಕಳ್ಳಿ ಕಿರಣ ಮರಾಠಿ ದೇವನಳ್ಳಿ, ಇಬ್ರಾಹೀಂ ಗೌಡಳ್ಳೀ, ಶಿವಾನಂದ ಜೋಗಿ, ಕೆ ಟಿ ನಾಯ್ಕ, ರಾಜು ನರೇಬೈಲ್, ಅಣ್ಣಪ್ಪ ನಾಯ್ಕ ಕಣ್ಣಿಗೇರಿ, ಆರ್ ಟಿ ನಾಯ್ಕ ವಾಜಗೋಡ, ಸ್ವಾತಿ ಜೈನ್, ಮಲ್ಲೇಶಿ, ಸತೀಶ್ ನಾಯ್ಕ ತ್ಯಾಗಲಿ, ಲಕ್ಷಣ ನಾಯ್ಕ, ಕಲ್ಪನಾ ನರೇಬೈಲ್, ಯಶೋಧಾ ನೌಟೂರು ಮುಂತಾದವರು ಹೋರಾಟದಲ್ಲಿ ಕಾಣಿಸಿಕೊಂಡರು.