ಕಾರವಾರದ ಆರ್ ಟಿ ಓ ಕಚೇರಿ ಬಳಿ ಗುರುವಾರ ರಾತ್ರಿ ನಡೆದ ಅಪಘಾತದಲ್ಲಿ ಯಲ್ಲಾಪುರದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಸ್ಕೂಟಿ ಹಾಗೂ ಬೈಕ್ ನಡುವೆ ಈ ಅಪಘಾತ ನಡೆದಿದೆ.
Advertisement. Scroll to continue reading.
ಮಾಹಿತಿಗಳ ಪ್ರಕಾರ, ಯಲ್ಲಾಪುರದ ಇಡಗುಂದಿಯ ಚಿರಂಜೀವ್ ಬೃಹ್ಮಾನಂದ ಕುಂಜಿ ಹಾಗೂ ಅವರ ತಾಯಿ ಮಾಜಾಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಲ್ಲಿಂದ ಅವರು ಕಾರವಾರಕ್ಕೆ ಬರುವಾಗ ಅವಘಡ ನಡೆದಿದೆ.
ಚಿರಂಜೀವ್ ಬೃಹ್ಮಾನಂದ ಕುಂಜಿ (15) ಅವರು ತಮ್ಮ ತಾಯಿ ಜೊತೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದರು. ಮಾಜಾಳಿಯಿಂದ ಕಾರವಾರದ ಕಡೆ ಬರುವಾಗ ಆರ್ಟಿಓ ಕಚೇರಿ ಬಳಿ ಅವರ ಸ್ಕೂಟಿಗೆ ಬೈಕ್ ಡಿಕ್ಕಿಯಾಗಿತು. ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬರ ಬುಲೆಟ್ ಬೈಕ್ ಗುದ್ದಿದ ರಭಸಕ್ಕೆ ಚಿರಂಜೀವ್ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದರು.
ಈ ಅಪಘಾತ ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಅಪಘಾತದಲ್ಲಿ ಚಿರಂಜೀವ್ ಅವರ ತಾಯಿ ಗಾಯಗೊಂಡಿದ್ದು, ಆಂಬುಲೆನ್ಸ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಶವವನ್ನು ಶವಾಗಾರಕ್ಕೆ ಕಳುಹಿಸಲಾಯಿತು. ಮೆಡಿಕಲ್ ಕಾಲೇಜು ವಿದ್ಯಾರ್ಥಿಗೂ ಅಪಘಾತದಲ್ಲಿ ಪೆಟ್ಟಾಗಿದೆ. ಅವರನ್ನು ಗೋವಾದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
`ಸುರಕ್ಷಿತವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’