ಪಾರ್ಶವಾಯು ಪೀಡಿತ ವ್ಯಕ್ತಿಯೊಬ್ಬರ ಬಗ್ಗೆ ಅರಿತ ಜಿಲ್ಲಾ ಆರೋಗ್ಯಾಧಿಕಾರಿ ಡಾ ನೀರಜ್ ಅವರು ರೋಗಿ ಮನೆಗೆ ಸರ್ಕಾರಿ ಸಿಬ್ಬಂದಿ ಕಳುಹಿಸಿ ಪ್ರಮಾಣ ಪತ್ರ ದೊರಕಿಸುವ ಪ್ರಯತ್ನ ಮಾಡಿದ್ದಾರೆ.
Advertisement. Scroll to continue reading.
ಕುಮಟಾದ ಚಿತ್ರಿಗಿಯಲ್ಲಿ ರಮೇಶ ನಾಯ್ಕ ಅವರು ವಾಸವಾಗಿದ್ದು, ಅವರು ಎರಡು ವರ್ಷದ ಹಿಂದೆ ಪಾರ್ಶವಾಯುವಿಗೆ ತುತ್ತಾಗಿದ್ದರು. ಪರಿಣಾಮ ರಮೇಶ ನಾಯ್ಕ ಅವರಿಗೆ ದೇಹದ ಒಂದು ಭಾಗ ಚಲನೆಯಲ್ಲಿರಲಿಲ್ಲ. ಅಂಗವೈಕಲ್ಯದಿAದ ಬಳಲುತ್ತಿದ್ದರೂ ರಮೇಶ ನಾಯ್ಕ ಅವರಿಗೆ ಅಂಗವಿಕಲ ಪ್ರಮಾಣ ಪತ್ರ ಸಿಕ್ಕಿರಲಿಲ್ಲ.
ರಮೇಶ ನಾಯ್ಕ ಅವರ ಪತ್ನಿ ನೂತನ ನಾಯ್ಕ ಅವರು ಈ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಆಗ್ನೇಲ್ ರೋಡ್ರಿಗಸ್ ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ ನೀರಜ್ ಅವರಿಗೆ ಫೋನ್ ಮಾಡಿದರು. ಸಮಸ್ಯೆ ಅರಿತ ಡಾ ನೀರಜ್ ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಅಂಗವಿಕಲರ ಅಧಿಕಾರಿ ರಕ್ಷತ್ ಅವರನ್ನು ಸ್ಥಳಕ್ಕೆ ಕಳುಹಿಸಿದರು. ಸ್ಥಳ ಪರಿಶೀಲನೆ ನಡೆಸಿದ ರಕ್ಷಿತ್ ಅವರು ವಿವಿಧ ದಾಖಲೆ ಸಂಗ್ರಹಿಸಿ ಸಂತ್ರಸ್ತರಿಗೆ ಅಂಗವಿಕಲ ಪ್ರಮಾಣ ಪತ್ರ ಕೊಡುವ ಬಗ್ಗೆ ಶಿಫಾರಸ್ಸು ಮಾಡಿದ್ದಾರೆ.
`ರಮೇಶ ನಾಯ್ಕ ಅವರು ಎರಡು ವರ್ಷದಿಂದ ಅಂಗವಿಕಲರಾಗಿ ಸಮಸ್ಯೆ ಅನುಭವಿಸುತ್ತಿದ್ದರೂ ಯಾರೂ ಗಮನಿಸಿರಲಿಲ್ಲ. ಆರೋಗ್ಯ ಅಧಿಕಾರಿಗಳು ಆಸ್ಪತ್ರೆಗೆ ಬರಲು ತ್ರಾಣವಿಲ್ಲದ ವ್ಯಕ್ತಿಯ ಮನೆಗೆ ಸರ್ಕಾರಿ ಸಿಬ್ಬಂದಿ ಕಳುಹಿಸಿ ಅವರ ಸಮಸ್ಯೆ ಆಲಿಸಿದ್ದಾರೆ. ಶೀಘ್ರದಲ್ಲಿಯೇ ಅಂಗವಿಕಲ ಪ್ರಮಾಣ ಪತ್ರ ಸಿಗಲಿದ್ದು, ಅವರಿಗೆ ಅದು ನೆರವಾಗಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಹಾಗೂ ರಾಜೇಶ ನಾಯ್ಕ ಅವರು ಪ್ರತಿಕ್ರಿಯಿಸಿದರು.