`ಅಂಕೋಲಾದ ಕೇಣಿಯಲ್ಲಿ ಬಂದರು ಆಗಬೇಕು ಎನ್ನುವುದು ಬಹುತೇಕರ ಆಸೆ’ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಹೇಳಿದ್ದಾರೆ. `ಸ್ಥಳೀಯರು ಯೋಜನೆಗೆ ವಿರೋಧವ್ಯಕ್ತಪಡಿಸುತ್ತಿರುವ ಕಾರಣ ಅನುಕೂಲ-ಅನಾನುಕೂಲದ ಬಗ್ಗೆ ಸಂಶೋಧನೆ ನಡೆಯುತ್ತಿದೆ’ ಎಂದವರು ವಿವರಿಸಿದ್ದಾರೆ.
Advertisement. Scroll to continue reading.
`ಕೇಣಿ ಬಂದರು ಯೋಜನೆ ಕುರಿತು ಜನರ ಅಹವಾಲು ಆಲಿಸಲು ಮುಖ್ಯಮಂತ್ರಿ ಸ್ಥಳಕ್ಕೆ ಬರಬೇಕು ಎಂಬ ಬೇಡಿಕೆ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಬೇಡಿಕೆ ಇದ್ದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ’ ಎಂದು ಮಂಕಾಳು ವೈದ್ಯ ಅವರು ಹೇಳಿದ್ದಾರೆ. `ಅಗತ್ಯವಿದ್ದರೆ ಸೀಎಂ ಅವರನ್ನು ಕರೆಯಿಸಿ ಸಮಸ್ಯೆ ಬಗೆಹರಿಸಬೇಕು. ಆದರೆ, ಇಲ್ಲಿ ಯೋಜನೆ ಬರುವುದೇ ಸ್ಥಳೀಯರ ಸಮಸ್ಯೆಯಾಗಿದೆ’ ಎಂದವರು ಹೇಳಿದರು.
`ಕೇಣಿ ಬಂದರು ಯೋಜನೆ ಆಗಬೇಕು ಎನ್ನುವುದು ಬಹುತೇಕರ ಆಸೆ. ಆದರೆ ಸ್ಥಳೀಯರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸಾಧಕ-ಬಾದಕ ಸಂಶೋಧನೆ ನಡೆಯುತ್ತಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದವರು ಹೇಳಿದರು. `ಸ್ಥಳೀಯರಿಗೆ, ಮೀನುಗಾರರಿಗೆ ಅಥವಾ ಜಿಲ್ಲೆಗೆ ತೊಂದರೆ ಉಂಟಾದರೆ ಅಂಥ ಯೋಜನೆ ಕೈ ಬಿಡಲು ಸರ್ಕಾರ ಹಿಂಜರಿಯುವುದಿಲ್ಲ’ ಎಂದವರು ಸ್ಪಷ್ಟಪಡಿಸಿದರು.
`ಕರಾವಳಿಯಲ್ಲಿ 13 ಬಂದರು ಇದೆ. ಮಲ್ಪೆಯಲ್ಲಿ ಔಟರ್ ಹಾರ್ಬರ್ ಮಾಡಲು 1800 ಕೋಟಿ ರೂ ವೆಚ್ಚದ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಲಾಗಿದೆ. ಮುದಗಾ ಮಂದರಿನಲ್ಲಿ ಹೂಳು ತುಂಬಿದ ಹಿನ್ನೆಲೆ ಹೂಳು ತೆಗೆಯಲು ಯೋಜನೆ ರೂಪಿಸುತ್ತೇವೆ’ ಎಂದರು.