ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂಪಡೆದು ಯಾಮಾರಿಸಿದ್ದ ವಂಚಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Advertisement. Scroll to continue reading.
ಹೊನ್ನಾವರ ಕಾಸರಕೋಡಿನ ಪ್ರತೋಷ ಹೊಸಪಟ್ಟಣ ಅವರು ಅಕ್ಕನ ಮಗನಿಗೆ ಸರ್ಕಾರಿ ನೌಕರಿ ಕೊಡಿಸುವುದಕ್ಕಾಗಿ 15 ಲಕ್ಷ ರೂ ವೆಚ್ಚ ಮಾಡಿದ್ದರು. ಅವರು 2019ರಲ್ಲಿ ಬೆಂಗಳೂರಿಗೆ ಹೋದಾಗ ಪರಿಚಯವಾದ ಕಾರ್ಕಳದ ವಿಜಯಕುಮಾರ ಮಡಿವಾಳ ಅವರಿಗೆ ಹಣ ನೀಡಿದ್ದರು. `ತನಗೆ ಸರ್ಕಾರಿ ಅಧಿಕಾರಿಗಳ ಪರಿಚಯವಿದ್ದು, ಸರ್ಕಾರಿ ಕೆಲಸ ಕೊಡಿಸುವೆ’ ಎಂದು ನಂಬಿಸಿ ವಿಜಯಕುಮಾರ ಮಡಿವಾಳ ಅವರು ಹಂತ ಹಂತವಾಗಿ ಈ ಹಣಪಡೆದಿದ್ದರು.
ಆದರೆ, ಸರ್ಕಾರಿ ನೌಕರಿ ಕೊಡಿಸದೇ ಮೋಸ ಮಾಡಿದ ಬಗ್ಗೆ ಹಾಗೂ ಹಣ ಮರಳಿಸುವಂತೆ ಕೇಳಿದಾಗ ಬೆದರಿಕೆ ಒಡ್ಡಿದ ಬಗ್ಗೆ ಪ್ರತೋಷ ಹೊಸಪಟ್ಟಣ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಕ್ಯಾಂಟಿನ್ ನಡೆಸುವ ವಿಜಯಕುಮಾರ ಮಡಿವಾಳ ಹಾಗೂ ಪುಡ್ ಡಿಲೆವರಿ ಕೆಲಸ ಮಾಡುವ ಬೆಂಗಳೂರಿನ ವಿಜಯ ಚಲುವರಂಗಯ್ಯ ಅವರನ್ನು ಬಂಧಿಸಿದ್ದಾರೆ. ಬಂಧಿತರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದು, ಪೊಲೀಸರು ಅವರನ್ನು ಜೈಲಿಗೆ ಕಳುಹಿಸಿದ್ದಾರೆ.