ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮನದ ನಿರೀಕ್ಷೆ ಹಿನ್ನಲೆ ಶಿರಸಿಯ ರಸ್ತೆಗಳಿಗೆ ದಿಢೀರ್ ದುರಸ್ಥಿ ಭಾಗ್ಯ ಸಿಕ್ಕಿದೆ. ಕುಮಾರಸ್ವಾಮಿ ಅವರು ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಬದಲಾವಣೆಯಾದ ಕಾರಣ ಅವರು ಶಿರಸಿ ಪ್ರಯಾಣ ಮೊಟಕುಗೊಳಿಸಿದ್ದು, ಅವರು ಬಾರದಿದ್ದರೂ ಇಲ್ಲಿನ ರಸ್ತೆ ದುರಸ್ಥಿ ಸಾರ್ವಜನಿಕರಿಗೆ ಸಹಾಯ ಮಾಡಿದೆ!
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಅವರ ಪುತ್ರಿ ರಾಜಲಕ್ಷಿö್ಮÃ ಅವರು ಬಾಲಚಂದ್ರ ಅವರನ್ನು ಮದುವೆ ಆಗಿದ್ದಾರೆ. ಈ ಹಿನ್ನಲೆ ಕಾಗೇರಿ ಕುಟುಂಬದವರು ಶನಿವಾರ ಸತ್ಕಾರ ಸಮಾರಂಭ ಆಯೋಜಿಸಿದ್ದರು. ಈ ಸಮಾರಂಭಕ್ಕೆ ಕೇಂದ್ರ ಎಚ್ ಡಿ ಕುಮಾರಸ್ವಾಮಿ ಹಾಗೂ ವಿ ಸೋಮಣ್ಣ ಆಗಮಿಸುವ ನಿರೀಕ್ಷೆ ಹಿನ್ನಲೆ ಅವರ ಆಗಮನದ ಅನುಕೂಲಕ್ಕಾಗಿ ರಸ್ತೆಗಳನ್ನು ಸರ್ಕಾರ ಸರಿಪಡಿಸಿತು. ಆದರೆ, ಕುಮಾರಸ್ವಾಮಿ ಅವರು ಶನಿವಾರ ಶಿರಸಿಗೆ ಕಾಲಿಡಲಿಲ್ಲ. ವಿ ಸೋಮಣ್ಣ ಅವರು ಮದುವೆ ಕಾರ್ಯಕ್ರಮವನ್ನು ಮರೆಯಲಿಲ್ಲ.
ಇನ್ನೂ ಶಿರಸಿಯ ಸಾಕಷ್ಟು ರಸ್ತೆಗಳು ಗುಂಡಿಗಳಿAದ ಕೂಡಿದ್ದವು. ಅನೇಕರು ಈ ಬಗ್ಗೆ ವ್ಯಾಪಕ ಆಕ್ರೋಶವ್ಯಕ್ತಪಡಿಸಿದ್ದರು. ರಸ್ತೆ ಗುಂಡಿ ಮುಚ್ಚುವಂತೆ ಪ್ರತಿಭಟನೆಗಳು ನಡೆದಿದ್ದವು. ರಸ್ತೆ ದೂಳಿನಿಂದ ಜನರ ಆರೋಗ್ಯ ಸಮಸ್ಯೆ ಹೆಚ್ಚಾದ ಬಗ್ಗೆ ವಕೀಲರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಅದಾಗಿಯೂ ಸರ್ಕಾರ, ಸರಿಯಾದ ರಸ್ತೆ ನಿರ್ಮಿಸಲು ಆಸಕ್ತಿವಹಿಸಿರಲಿಲ್ಲ.
ಶಿರಸಿಯ ಅಶ್ವಿನಿ ಸರ್ಕಲ್ ಹಾಗೂ ಇನ್ನಿತರ ಭಾಗದ ರಸ್ತೆ ಸಮಸ್ಯೆಯ ಬಗ್ಗೆ ಕಳೆದ ಮೂರು ತಿಂಗಳಿನಿAದ ಭೀಮಗರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ತಂಡದವರು ಹೋರಾಟ ನಡೆಸಿದ್ದರು. ರಸ್ತೆ ಗುಂಡಿಗಳಿAದ ಜನರಿಗೆ ಆಗುವ ಸಮಸ್ಯೆ ಬಗ್ಗೆ ಅವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದರು. ಮೂರು ತಿಂಗಳ ಪ್ರತಿಭಟನೆ, ಹೋರಾಟಕ್ಕೂ ಮಣಿಯದ ಸರ್ಕಾರ ಇದೀಗ ಮೂರೇ ದಿನದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ನಿಂತು ರಸ್ತೆ ಗುಂಡಿಗೆ ಡಾಂಬರ್ ಹಾಕಿಸುವ ಕೆಲಸ ಮಾಡಿದ್ದಾರೆ.
`ಶಿರಸಿಗೆ ಆಗಾಗ ಗಣ್ಯರು ಬರುತ್ತಿರಬೇಕು. ಆಗ ಮಾತ್ರ ಇಲ್ಲಿನ ರಸ್ತೆಗಳು ಸುಸ್ಥಿತಿಯಲ್ಲಿರಲು ಸಾಧ್ಯ’ ಎಂದು ಅಲ್ಲಿನವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಹ ಇದೇ ಬಗೆಯ ಚರ್ಚೆ ಶುರುವಾಗಿದೆ.