ಆಧುನಿಕ ಕೃಷಿ ಪದ್ಧತಿ ಬಗ್ಗೆ ಆಳವಾದ ಅಧ್ಯಯನ, ಯಂತ್ರ ಬಳಕೆ ಬಗ್ಗೆ ಕಾರ್ಯಾಗಾರ, ಮನೆ ಮನೆಗೆ ತೆರಳಿ ವೈಜ್ಞಾನಿಕ ಮಾಹಿತಿ ಹಾಗೂ ಕೃಷಿ ಯಂತ್ರೋಪಕರಣಗಳ ಸುರಕ್ಷತ ಬಳಕೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು `ಸುರಕ್ಷಾ ಅಗ್ರೋ ಟೆಕ್’ ಶ್ರಮಿಸುತ್ತಿದೆ. ಹುಬ್ಬಳ್ಳಿ ಹಾಗೂ ಬಾಗಲಕೋಟೆಯಲ್ಲಿ ಕೃಷಿ ಯಂತ್ರೋಪಕರಣ ಸೇವೆ ನೀಡುತ್ತಿರುವ ಸುರಕ್ಷಾ ಅಗ್ರೋ ಟೆಕ್ ಯಲ್ಲಾಪುರದಲ್ಲಿಯೂ ತನ್ನ ಶಾಖೆ ತೆರೆದಿದೆ.
Advertisement. Scroll to continue reading.
ADVERTISEMENT
`ಸುರಕ್ಷಾ ಅಗ್ರೋ ಟೆಕ್’ನಲ್ಲಿ ಖರೀದಿಸುವ ಯಂತ್ರೋಪಕರಣಗಳಿಗೆ ಸರ್ಕಾರದ ಸಬ್ಸಿಡಿ ಸಿಗುತ್ತದೆ. ಸುರಕ್ಷಾ ಅಗ್ರೋ ಟೆಕ್ ಸ್ವತಃ ಯಂತ್ರೋಪಕರಣಗಳನ್ನು ಉತ್ಪಾದಿಸುವ ಘಟಕವನ್ನು ಹೊಂದಿದ್ದು, ಗುಣಮಟ್ಟದ ವಿಷಯದಲ್ಲಿ ಎಂದಿಗೂ ಇಲ್ಲಿ ರಾಜಿ ಇಲ್ಲ. ಕೃಷಿ ಕಾಯಕಕ್ಕೆ ಅನುಕೂಲವಾಗುವ ಅನೇಕ ಯಂತ್ರೋಪಕರಣಗಳು ಇಲ್ಲಿ ಸಿಗುತ್ತದೆ. ಯಂತ್ರೋಪಕರಣಗಳ ಮಾರಾಟದ ಜೊತೆ ಅದರ ದುರಸ್ಥಿಗೂ ಸಹ ಇಲ್ಲಿ ನುರಿತ ಕೆಲಸಗಾರರಿದ್ದಾರೆ.
Advertisement. Scroll to continue reading.
ಕೃಷಿ ಕುಟುಂಬದವರಾಗಿರುವ ಮಂಜುನಾಥ ಎನ್ ಎಚ್ ಅವರು 15 ವರ್ಷಗಳ ಹಿಂದೆ `ಸುರಕ್ಷಾ ಅಗ್ರೋ ಟೆಕ್’ ಎಂಬ ಕಂಪನಿ ಕಟ್ಟಿದರು. ರೈತರ ಹೊಲಗಳಿಗೆ ತೆರಳಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡುವುದನ್ನು ಅವರು ರೂಡಿಸಿಕೊಂಡರು. ಮನೆ ಬಾಗಿಲಿನಲ್ಲಿ ಯಂತ್ರಗಳನ್ನು ತೆಗೆದುಕೊಂಡು ಹೋಗಿ ಅದರ ಬಳಕೆಯ ವಿಧಾನಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದರು. ಯಂತ್ರಗಳ ಸುರಕ್ಷಿತ ಬಳಕೆ, ಅವುಗಳ ನಿರ್ವಹಣೆ ಹಾಗೂ ಆಧುನಿಕ ಕೃಷಿ ಪದ್ಧತಿ ಮೂಲಕ ಕಡಿಮೆ ಬೆಲೆಯಲ್ಲಿ ಅತ್ಯಧಿಕ ಆದಾಯಪಡೆಯುವ ವಿಧಾನಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಕೃಷಿ ಸೇವಾ ಮಳಿಗೆಯಲ್ಲಿ ದುಡಿಯುವುದರ ಜೊತೆ ಇನ್ನಷ್ಟು ಜನರಿಗೆ ತಮ್ಮ ಕಂಪನಿ ಮೂಲಕ ಉದ್ಯೋಗವನ್ನು ನೀಡಿದರು.
Advertisement. Scroll to continue reading.
ADVERTISEMENT
ಈ ಶ್ರಮದ ಫಲವಾಗಿ ರೈತರು `ಸುರಕ್ಷಾ ಅಗ್ರೋ ಟೆಕ್’ ಮೇಲೆ ಅಪಾರ ವಿಶ್ವಾಸವಿಟ್ಟರು. ಆ ವಿಶ್ವಾಸಕ್ಕೆ ಎಂದಿಗೂ ಧಕ್ಕೆ ಬಾರದಂತೆ ಕಂಪನಿ ನೌಕರರು ನಡೆದುಕೊಂಡರು. ಈ ನಡುವೆ ಯಂತ್ರೋಪಕರಣ ಖರೀದಿಸಿದ ಕೆಲವರು ಸರ್ಕಾರದಿಂದ ಜಮಾ ಆಗಬೇಕಾದ ಸಬ್ಸಿಡಿಗೆ ಅಲೆದಾಡುತಿರುವುದು ಅಲ್ಲಿನವರ ಗಮನಕ್ಕೆ ಬಂದಿತು. ಆಗ, ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ನೇರ ಸಬ್ಸಿಡಿ ಜಮಾ ಆಗುವ ಹೊಣೆಯನ್ನು ಸುರಕ್ಷಾ ಅಗ್ರೋ ಟೆಕ್ ಸಿಬ್ಬಂದಿವಹಿಸಿಕೊoಡರು. ರೈತರು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಯೋಜನೆ ರೂಪಿಸಿದರು. ರೈತರ ಮೂಲಕ ಅಗತ್ಯ ದಾಖಲೆಪಡೆದು ಬಾಂಕ್ ಖಾತೆಗೆ ಸಬ್ಸಿಡಿ ಹಣ ಜಮಾ ಆಗುವಂತೆ ಮಾಡಿದರು. ಇದರೊಂದಿಗೆ ರೈತರ ಮನೆಗೆ ಕೃಷಿ ಯಂತ್ರೋಪಕರಣಗಳನ್ನು ತಲುಪಿಸಿದರು.
ರೈತರ ದಾಖಲೆಗಳನ್ನು ಕ್ರಮಬದ್ಧವಾಗಿ ಜೋಡಿಸುವುದರ ಜೊತೆ ಅವರಿಗೆ ಸಬ್ಸಿಡಿ ದೊರೆಯುವಂತೆ ಮಾಡುವ ಕೆಲಸದಲ್ಲಿ ಸುರಕ್ಷಾ ಅಗ್ರೋ ಟೆಕ್ ಸಿಬ್ಬಂದಿ ನೆರವಾಗಿರುವುದು ಸರ್ಕಾರಿ ಅಧಿಕಾರಿಗಳ ಒತ್ತಡವನ್ನು ಕಡಿಮೆ ಮಾಡಿತು. ಹೀಗಾಗಿ ಕೃಷಿ ವಲಯದಲ್ಲಿ ಸುರಕ್ಷಾ ಅಗ್ರೋ ಟೆಕ್ ಸಾಕಷ್ಟು ಜನಪ್ರಿಯತೆಯನ್ನುಪಡೆಯಿತು. ಸದ್ಯ ಆರು ಬಗೆಯ ಕೃಷಿ ಉಪಕಾರಿ ಯಂತ್ರಗಳು ಸುರಕ್ಷಾ ಅಗ್ರೋ ಟೆಕ್ ಕಂಪನಿಯಲ್ಲಿದೆ. ಕರ್ನಾಟಕದಲ್ಲಿಯೇ ಮೊದಲ ಬಾರಿ ಸುರಕ್ಷಾ ಅಗ್ರೋ ಟೆಕ್ ಸಿದ್ಧಪಡಿಸಿದ ಕಳೆ ತೆಗೆಯುವ ಯಂತ್ರ (ಮಿನಿ ಟಾಕ್ಟರ್) ಅತ್ಯಂತ ಪ್ರಸಿದ್ಧಿಪಡೆದಿದೆ. 1ಎಕರೆ ಕ್ಷೇತ್ರದಲ್ಲಿನ ಕಳೆ ತೆಗೆಯಲು 3 ಸಾವಿರ ರೂ ವೆಚ್ಚ ಮಾಡುತ್ತಿರುವ ಜನರ ನಡುವೆ ಈ ಯಂತ್ರ ಬರೇ 100ರೂ ವೆಚ್ಚದಲ್ಲಿ 1 ಎಕರೆಯ ಕಳೆ ತೆಗೆಯುತ್ತದೆ.
ADVERTISEMENT
ಇಲ್ಲಿ ಭೇಟಿ ನೀಡಿ ಸುರಕ್ಷಾ ಆಗ್ರೋ ಟೆಕ್ ಉದ್ಯಮ ನಗರ, ಯಲ್ಲಾಪುರ