ಉತ್ತರ ಕನ್ನಡ ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಪರಿಶಿಷ್ಟ ಪಂಗಡ ಹಿತರಕ್ಷಣಾ ಸಂಘದ ಜಿಲ್ಲಾಧ್ಯಕ್ಷರಾಗಿ ನಾಗರಾಜ ತಳವಾರ್ ಅವರು ಪುನರಾಯ್ಕೆ ಆಗಿದ್ದಾರೆ.
ನಾಗರಾಜ ತಳವಾರ್ ಅವರು ಗುತ್ತಿಗೆದಾರರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅದರ ಜೊತೆ ವಿವಿಧ ಸಂಘ-ಸAಸ್ಥೆಗಳಲ್ಲಿ ಅವರು ಸಕ್ರೀಯರಾಗಿದ್ದಾರೆ. ಸಮುದಾಯ ಸಂಕಷ್ಟಕ್ಕೆ ಸಿಲುಕಿದಾಗ ಗಟ್ಟಿ ಧ್ವನಿಯಾಗುವ ಅವರು ಸಂಘಟನೆ ವಿಷಯದಲ್ಲಿ ಚುರುಕಾಗಿ ಕೆಲಸ ಮಾಡಿಕೊಂಡಿದ್ದಾರೆ. ಈ ಎಲ್ಲಾ ಹಿನ್ನಲೆ ಸಂಘಟನೆಯ ಜಿಲ್ಲಾಧ್ಯಕ್ಷರನ್ನಾಗಿ ಅವರನ್ನು ಮತ್ತೆ ಆಯ್ಕೆ ಮಾಡಲಾಗಿದೆ.
ಪ್ರಗತಿಪರ ಚಿಂತಕರಾಗಿರುವ ನಾಗರಾಜ ತಳವಾರ್ ಅವರು ನ್ಯಾಯದ ಪರ ಹೋರಾಟ ನಡೆಸಿದ್ದಾರೆ. ಅನ್ಯಾಯಕ್ಕೆ ಒಳಗಾದವರನ್ನು ಸಂತೈಸಿ ಅವರ ಪರ ನಿಲ್ಲುವ ವೈಚಾರಿಕ ಪ್ರಜ್ಞೆ ಹೊಂದಿದವರಾಗಿದ್ದಾರೆ. ಅವರ ಈ ಎಲ್ಲಾ ಸಮಾಜಮುಖಿ ಸೇವೆಯನ್ನು ಮಹರ್ಷಿ ವಾಲ್ಮೀಕಿ ನಾಯಕ ಪರಿಶಿಷ್ಟ ಪಂಗಡ ಹಿತರಕ್ಷಣಾ ಸಂಘದವರು ಗೌರವಿಸಿದ್ದಾರೆ.
`ಜನಪರ ನಿಲುವು ಹೊಂದಿರುವ ನಾಗರಾಜ ತಳವಾರ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕಿರುವುದು ಖುಷಿಯ ವಿಚಾರ. ಅವರ ಆಡಳಿತ ಅವಧಿಯಲ್ಲಿ ಸಂಘಟನೆ ಕೆಲಸ ಇನ್ನಷ್ಟು ಹೆಚ್ಚಾಗಲಿ’ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ನೌಕರರ ಬೆಳಗಾವಿ ವಿಭಾಗದ ವಿಭಾಗಿಯ ಅಧ್ಯಕ್ಷ ಪರಸಪ್ಪ ನಾಯಕ ಹಾಗೂ ಸಂಘಟನೆಯ ಕಾರವಾರ ಜಿಲ್ಲಾ ಅಧ್ಯಕ್ಷರಾದ ಗಣೇಶ ಬೀಷ್ಠಣ್ಣನವರ್ ಅವರು ಹಾರೈಸಿದ್ದಾರೆ.