ಬೆಂಗಳೂರಿನಿoದ ಗೋಕರ್ಣಕ್ಕೆ ಹೊರಟಿದ್ದ ಭಟ್ಕಳದ ರಶ್ಮೀ ಮಹಾಲೆ ಅವರು ಬಸ್ ಅಪಘಾತದಲ್ಲಿ ಅಗ್ನಿಗೆ ಆಹುತಿಯಾಗಿದ್ದಾರೆ. ವೇ2ನ್ಯೂಸ್ ಮಾಧ್ಯಮ ಇದನ್ನು ದೃಢಪಡಿಸಿದೆ.
ಬೆಂಗಳೂರಿನ ಡೇಲಾಯ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಶ್ಮೀ ಮಹಾಲೆ ಅವರು ಕ್ರಿಸ್ ಮಸ್ ಅಂಗವಾಗಿ ಊರಿಗೆ ಹೊರಟಿದ್ದರು. ತಮ್ಮ ಇಬ್ಬರು ಸ್ನೇಹಿತೆಯರಾದ ಗಗನಾ ಮತ್ತು ರಕ್ಷಿತಾ ಜೊತೆ ಅವರು ಸೀಬರ್ಡ ಬಸ್ ಬುಕ್ ಮಾಡಿದ್ದರು. ಗೆಳತಿಯರ ಜೊತೆ ಗೋಕರ್ಣಕ್ಕೆ ಬಂದು ನಂತರ ಊರಿಗೆ ಮರಳಲು ಅವರು ನಿರ್ಧರಿಸಿದ್ದರು. ಇದಕ್ಕಾಗಿ ಕೆಲಸಕ್ಕೆ ನಾಲ್ಕು ದಿನಗಳ ರಜೆ ಹಾಕಿದ್ದರು.
ಬುಧವಾರ ರಾತ್ರಿ ಬೆಂಗಳೂರಿನಿAದ ಹೊರಟ ಬಸ್ಸು ಚಿತ್ರದುರ್ಗದ ಬಳಿ ಅಪಘಾತಕ್ಕೀಡಾಗಿದ್ದು, ಅದರಲ್ಲಿ ರಶ್ಮೀ ಅವರು ಪ್ರಯಾಣಿಸುತ್ತಿದ್ದರು. ಅವರ ಇಬ್ಬರು ಸ್ನೇಹಿತೆಯರು ಬಸ್ ಅಪಘಾತದ ನಂತರ ಕಿಟಕಿಯಿಂದ ಹಾರಿ ಬಚಾವಾಗಿದ್ದು, ರಶ್ಮೀ ಅವರ ಸುಳಿವು ಸಿಕ್ಕಿರಲಿಲ್ಲ. `ಮೊದಲು ರಶ್ಮೀ ಅವರು ಸುರಕ್ಷಿತವಾಗಿದ್ದಾರೆ’ ಎಂಬ ಮಾಹಿತಿ ಬಂದಿತ್ತು. ಅದಾದ ನಂತರ ಅವರು ನಾಪತ್ತೆಯಾಗಿದ್ದಾರೆ ಎಂಬ ವಿಷಯ ಗೊತ್ತಾಗಿತ್ತು. ಸದ್ಯದ ಮಾಹಿತಿ ಪ್ರಕಾರ ರಶ್ಮೀ ಅವರು ಇನ್ನಿಲ್ಲ ಎಂದು ವೇ2ನ್ಯೂಸ್ ಮಾಧ್ಯಮ ದೃಢಪಡಿಸಿದೆ.
ಮಗಳ ಹುಡುಕಿ ಹೊರಟ ತಂದೆ
ರಶ್ಮೀ ಅವರ ಬಗ್ಗೆ ಸರಿಯಾದ ಮಾಹಿತಿ ಸಿಗದ ಕಾರಣ ಭಟ್ಕಳದ ಶಿರಾಲಿಯಲ್ಲಿದ್ದ ಅವರ ತಂದೆ ದೇವಿದಾಸ ಮಹಾಲೆ ಅವರು ಚಿತ್ರದುರ್ಗದ ಕಡೆ ಹೊರಟಿದ್ದಾರೆ. ರಶ್ಮಿ ಅವರ ತಾಯಿ ಸಾವಿತ್ರಿ ಅವರನ್ನು ಸಂಬAಧಿಕರ ಮನೆಯಲ್ಲಿ ಬಿಟ್ಟು ಮನೆಗೆ ಬೀಗ ಹಾಕಿ ದೇವಿದಾಸ್ ಅವರು ಮಗಳ ಹುಡುಕಾಟಕ್ಕೆ ಹೊರಟಿದ್ದಾರೆ. ಗಗನಾ ಮತ್ತು ರಕ್ಷಿತಾ ಅವರು ಸಹ ರಶ್ಮೀ ಅವರ ಬಗ್ಗೆ ಖಚಿತ ಮಾಹಿತಿ ನೀಡದ ಕಾರಣ ದೇವಿದಾಸ ಅವರು ಚಿತ್ರದುರ್ಗದ ಕಡೆ ಪ್ರಯಾಣ ಬೆಳೆಸಿದ್ದಾರೆ.