ಶಿರಸಿಯ ಅಬ್ದುಲ್ ಬ್ಯಾರಿ ಅವರು ಪರಮೇಶ್ವರ ಕೋಣನ್ನವರ್ ಅವರಿಗೆ 45 ಸಾವಿರ ರೂ ಕೊಡಬೇಕಿದೆ. ಆ ಹಣ ಕೇಳಿದಕ್ಕಾಗಿ ಅಬ್ದುಲ್ ಬ್ಯಾರಿ ಅವರು ಪರಮೇಶ್ವರ್ ಕೋಣನ್ನನವರ್ ಅವರ ಉದ್ಯೋಗಕ್ಕೂ ಸಮಸ್ಯೆ ಮಾಡುತ್ತಿದ್ದಾರೆ.
ಶಿರಸಿಯ ಚೌಡಿಕಟ್ಟೆ ಕಸ್ತೂರಿಬಾ ನಗರದ 11ನೇ ಕ್ರಾಸಿನಲ್ಲಿ ಪರಮೇಶ್ವರ ಶಿವರುದ್ರಪ್ಪ ಕೋಣನ್ನವರ್ ಅವರು ವಾಸವಾಗಿದ್ದಾರೆ. ಚಾಲಕರಾಗಿ ಬದುಕು ಕಟ್ಟಿಕೊಂಡಿರುವ ಅವರು ಟಿಪ್ಪರ್ ಮೂಲಕ ಕಲ್ಲು ಸಾಗಾಟ ಮಾಡುತ್ತಿದ್ದಾರೆ. ಆದರೆ, ಗೌಡಳ್ಳಿಯ ಅಬ್ದುಲ್ ಬ್ಯಾರಿ ಮಹಮದ್ ಶೇಖ್ ಇಸಾಕ್ ಅವರು ಕಲ್ಲು ಸಾಕಾಣಿಕೆ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ.
`ನನ್ನ ಏರಿಯಾದಲ್ಲಿ ನೀನು ಜಲ್ಲಿ ಕಲ್ಲು ಖಾಲಿ ಮಾಡುವ ಹಾಗಿಲ್ಲ’ ಎಂದು ಅಬ್ದುಲ್ ಬ್ಯಾರಿ ಅವರು ಪರಮೇಶ್ವರ ಕೋಣನ್ನವರ್ ಅವರಿಗೆ ಬೆದರಿಸುತ್ತಿದ್ದಾರೆ. ಪರಮೇಶ್ವರ ಕೋಣನ್ನನವರಿಗೆ ಅಬ್ದುಲ್ ಬ್ಯಾರಿ ಅವರು 45 ಸಾವಿರ ರೂ ಹಣವನ್ನು ಕೊಡಬೇಕಿದ್ದು, ಅದನ್ನು ಮರಳಿಸುವಂತೆ ಕೇಳಿದ ಕಾರಣ ಇನ್ನಷ್ಟು ತೊಂದರೆ ಮಾಡುತ್ತಿದ್ದಾರೆ. ನವೆಂಬರ್ 29ರಂದು ಸಹ ಪರಮೇಶ್ವರ್ ಕೋಣನ್ನವರ್ ಅವರು ಗೌಡಳ್ಳಿಗೆ ಟಿಪ್ಪರ್ ತೆಗೆದುಕೊಂಡು ಹೋಗಿದ್ದು, ಆ ವೇಳೆ ಅಬ್ದುಲ್ ಬ್ಯಾರಿ ಅವರು ಅದನ್ನು ಅಡ್ಡಗಟ್ಟಿದ್ದಾರೆ.
ಈ ವಿಷಯದ ಬಗ್ಗೆ ಪರಮೇಶ್ವರ ಕೋಣನ್ನವರ್ ಅವರು ಪೊಲೀಸರಿಗೆ ಹೇಳಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಅಬ್ದುಲ್ ಬ್ಯಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.