• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The wicked ones who killed the cow and stole the meat!

ಆಕಳ ಕೊಂದು ಮಾಂಸ ಕದ್ದ ದುಷ್ಟರು!

March 23, 2026
Private resort on government land A good start!

ಸರ್ಕಾರಿ ಜಾಗದಲ್ಲಿ ಖಾಸಗಿ ರೆಸಾರ್ಟು: ಶುಭಾರಂಭ!

March 23, 2026
Manjuguni Chariot Festival Come on everyone!

ಮಂಜುಗುಣಿ ರಥೋತ್ಸವ: ಎಲ್ಲರೂ ಬನ್ನಿ!

March 23, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The wicked ones who killed the cow and stole the meat!

ಆಕಳ ಕೊಂದು ಮಾಂಸ ಕದ್ದ ದುಷ್ಟರು!

March 23, 2026
Private resort on government land A good start!

ಸರ್ಕಾರಿ ಜಾಗದಲ್ಲಿ ಖಾಸಗಿ ರೆಸಾರ್ಟು: ಶುಭಾರಂಭ!

March 23, 2026
Manjuguni Chariot Festival Come on everyone!

ಮಂಜುಗುಣಿ ರಥೋತ್ಸವ: ಎಲ್ಲರೂ ಬನ್ನಿ!

March 23, 2026
  • Home
  • Janamata
Thursday, March 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊಡೆದಾಟ: ಸೇಫ್ ಸ್ಟಾರ್ ಅಧ್ಯಕ್ಷರಿಗೆ ಬಿಜೆಪಿ ಬೆಂಬಲ!

Achyutkumar by Achyutkumar
December 27, 2025
Fight BJP supports Safe Star president!
930
VIEWS
Share on FacebookShare on WhatsappShare on Twitter
ADVERTISEMENT

ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಅವರ ವಿರುದ್ಧ ದಾಖಲಾದ ಕೊಲೆ ಯತ್ನ ಪ್ರಕರಣ ರಾಜಕೀಯ ತಿರುವುಪಡೆದಿದೆ. ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಅವರು ಜಿ ಜಿ ಶಂಕರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಬ್ಬರು ಸೇರಿ `ರಾಜಕೀಯ ಕಾರಣಕ್ಕಾಗಿ ಬಿಜೆಪಿ ಮುಖಂಡ ಜಿ ಜಿ ಶಂಕರ್ ಅವರ ವಿರುದ್ಧ ಕಾಂಗ್ರೆಸ್ ಸರ್ಕಾರ ಪ್ರಕರಣ ದಾಖಲಿಸಿದೆ’ ಎಂದು ದೂರಿದ್ದಾರೆ.

ADVERTISEMENT

`ನಾನು ನನ್ನ ಉದ್ಯಮ ನಡೆಸಿ ಬಂದವನು. ಇಸ್ಪೀಟ್, ಓಸಿ, ಕೋಳಿ ಅಂಕ, ಜೂಜು ನಡೆಸುವವನಲ್ಲ. ಅದಾಗಿಯೂ ನನ್ನ ಹತ್ತಿಕ್ಕುವ ಪ್ರಯತ್ನ ನಡೆದಿದೆ’ ಎಂದು ಬಿಜೆಪಿ ಮುಖಂಡರೂ ಆಗಿರುವ ಜಿ ಜಿ ಶಂಕರ್ ಅವರು ಅಳಲು ತೋಡಿಕೊಂಡಿದ್ದಾರೆ. `ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಬಿಜೆಪಿಗರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ. ಜಾಗದ ವಿಷಯವಾಗಿ ನಡೆದ ಗಲಾಟೆಯನ್ನು ತಿರುಚಿ ಜಿ ಜಿ ಶಂಕರ್ ಅವರ ವಿರುದ್ಧ ರಾಜಕೀಯ ದ್ವೇಷದಿಂದ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ’ ಎಂದು ದಿನಕರ ಶೆಟ್ಟಿ ಹಾಗೂ ಸುನೀಲ ನಾಯ್ಕ ಅವರು ಒಮ್ಮತದಿಂದ ಮಾತನಾಡಿದ್ದಾರೆ. `ಅದರಲ್ಲಿಯೂ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಉಸಿರುಗಟ್ಟಿಸುವ ವಾತಾವರಣವಿದೆ. ಜಿ ಜಿ ಶಂಕರ್ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಸಚಿವರ ಸಂಚಿದೆ’ ಎಂದು ಸುನೀಲ ನಾಯ್ಕ ಅವರು ಹೇಳಿದ್ದಾರೆ.

`ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗುಂಡಾಗಿರಿಗೆ ಅವಕಾಶ ನೀಡುವುದಿಲ್ಲ. ಅಮಾಯಕ ಉದ್ಯಮಿಗಳು ಮತ್ತು ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. `ಹಿಂದಿನ ಶಾಸಕರಾದ ಶಿವಾನಂದ ನಾಯ್ಕ ಅಥವಾ ಜೆ. ಡಿ ನಾಯ್ಕ ಅವರ ಕಾಲದಲ್ಲಿ ಇಂಥ ದ್ವೇಷದ ರಾಜಕಾರಣ ನಡೆದಿರಲಿಲ್ಲ. ಮಂಕಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಜನರು ಅಹಂಕಾರದ ರಾಜಕಾರಣಕ್ಕೆ ಈಗಾಗಲೇ ಉತ್ತರ ನೀಡಿದ್ದಾರೆ. ಪೊಲೀಸರು ಇದೇ ರೀತಿ ಮುಂದುವರಿದರೆ ಸಾವಿರಾರು ಕಾರ್ಯಕರ್ತರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. `ಪೊಲೀಸರು ತನ್ನೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ದೂರು ನೀಡಲು ಹೋದಾಗ ಪೊಲೀಸರು ಹಗುರವಾಗಿ ಮಾತನಾಡಿಸಿ, ರಾತ್ರಿಯಿಡೀ ಠಾಣೆಯಲ್ಲಿ ಕೂಡಿಸಿ ದೂರು ಸ್ವೀಕರಿಸದೆ ಮಾನಸಿಕ ಹಿಂಸೆ ನೀಡಿದ್ದಾರೆ’ ಎಂದು ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುವ ನಾಗರತ್ನ ಹಳ್ಳೇರ ಅವರು ದೂರಿದ್ದಾರೆ.

ADVERTISEMENT

ಡಿಸೆಂಬರ್ 9ರಂದು ಹೊನ್ನಾವರ ಮಾವಿನಕೂರ್ವಾ ಬಳಿಯ ಮಂಡಲಕೂರ್ವದ ಜೊಯವಿನ್ ಬಸ್ತೇಂವ್ ಮೆಂಡೋನ್ಸಾ ಅವರು ಪೀಟರ್ ಎಂಬಾತರ ಸೂಚನೆ ಮೇರೆಗೆ ಕೂಲಿ ಕೆಲಸಕ್ಕೆ ಹೋಗಿದ್ದಾಗ ಅವರ ಮೇಲೆ ಹಲ್ಲೆ ನಡೆದಿತ್ತು. ಜೊಯವಿನ್ ಅವರ ಜೊತೆ ಅವರ ತಂದೆ ಬಸ್ತೇಂವ್ ಮೆಂಡೋನ್ಸಾ, ಪಾವ್ಲು ಡಿಕೋಸ್ತಾ ಅವರ ಮೇಲೆಯೂ ದಾಳಿ ನಡೆದಿತ್ತು. 25ಕ್ಕೂ ಅಧಿಕ ಜನ ಸೇರಿ ಜೊಯವಿನ್ ಅವರ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಜಿ ಜಿ ಶಂಕರ್ ಅವರ ಕೈವಾಡವಿರುವ ಆರೋಪವ್ಯಕ್ತವಾಗಿತ್ತು. ಜಿ ಜಿ ಶಂಕರ್ ಅವರ ಜೊತೆ ಅಂಗಡಿ ಹಿತ್ತಲದ ಮೋಹನ ತಿಮ್ಮಪ್ಪ ಗೌಡ, ಅರುಣ ಮಂಜುನಾಥ ಗೌಡ, ದುರ್ಗಾಕೇರಿಯ ಕಿರಣ ಆರ್ ಹೊನ್ನಾವರಕರ್, ಹೊಂಡಗದ್ದೆಯ ಸತೀಶ ಗೋವಿಂದ ಗೌಡ ಅವರು ಇನ್ನೂ 25 ಜನರ ಜೊತೆ ಸೇರಿ ಆಕ್ರಮಣ ನಡೆಸಿದ ಬಗ್ಗೆ ದೂರು ದಾಖಲಾಗಿದ್ದು, ಇದಕ್ಕೆ ಪ್ರತಿಯಾಗಿ ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುವ ಹೊನ್ನಾವರ ಮೂಡ್ಕಣಿಯ ನಾಗರತ್ನ ಗಣಪತಿ ಹಳ್ಳೇರ್ ಅವರು ತಮಗೆ ಬೆದರಿಕೆಯಿರುವ ಬಗ್ಗೆ ದೂರಿದ್ದರು.

ಜೋಯವಿನ್ ಮಂಡೋನ್ಸಾ ಹಾಗೂ ಪೀಟರ್ ಮಂಡೋನ್ಸಾ ಅವರ ವಿರುದ್ಧ ನಾಗರತ್ನ ಹಳ್ಳೇರ್ ಅವರು ಆರೋಪಿಸಿದ್ದರು. ಅದರ ಬೆನ್ನಲ್ಲೆ ಜೋಯವಿನ್ ಮಂಡೋನ್ಸಾ ಕಡೆಯವರು ಡಿಸೆಂಬರ್ 11ರಂದು ಸೇಫ್ ಸ್ಟಾರ್ ಸೊಸೈಟಿಯ ಅಳ್ಳಂಕಿ ಶಾಖೆಯ ಫಿಲ್ಡ್ ಆಫೀಸರ್ ಶ್ಯಾಮಲಾ ಮಂಜುನಾಥ ನಾಯ್ಕ ಅವರನ್ನು ಬೆದರಿಸಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ಎಲ್ಲದರ ನಡುವೆ ಶಾಸಕ ದಿನಕರ ಶೆಟ್ಟಿ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಅವರು ಜಿ ಜಿ ಶಂಕರ್ ಅವರ ಪರವಾಗಿ ಮಾತನಾಡಿದ್ದು, ಬಿಜೆಪಿಗರನ್ನು ಗುರಿಯನ್ನಾಗಿಸಿ ಕಾಂಗ್ರೆಸ್ ದ್ವೇಷ ಸಾಧಿಸುತ್ತಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The wicked ones who killed the cow and stole the meat!

ಆಕಳ ಕೊಂದು ಮಾಂಸ ಕದ್ದ ದುಷ್ಟರು!

March 23, 2026
Private resort on government land A good start!

ಸರ್ಕಾರಿ ಜಾಗದಲ್ಲಿ ಖಾಸಗಿ ರೆಸಾರ್ಟು: ಶುಭಾರಂಭ!

March 23, 2026
Manjuguni Chariot Festival Come on everyone!

ಮಂಜುಗುಣಿ ರಥೋತ್ಸವ: ಎಲ್ಲರೂ ಬನ್ನಿ!

March 23, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋