ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ಸಿದ್ದಾಪುರದ ಸಹೋದರರು ಸುಟ್ಟು ಕರಕಲಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಾರ್ಷಿಕ 5 ಲಕ್ಷ ರೂ ಆದಾಯವೇ ಇಲ್ಲದ ಹಸ್ಲರ್ ಸಹೋದರರು ವಾರ್ಷಿಕ 5 ಲಕ್ಷ ರೂ ಕಂತು ಪಾವತಿಸುವ ಪ್ರಯತ್ನ ಮಾಡಿದ ಮೊಬೈಲ್ ಮಿಡಿಯಾ ನೆಟ್ ವರ್ಕ ತನಿಖಾ ವರದಿ ಪ್ರಕಟಿಸಿದ್ದು, ಅನುಮಾನಾಸ್ಪದ ವ್ಯಕ್ತಿ ಇರುದ್ಧ ಇದೀಗ ಅವರ ಕುಟುಂಬದವರೇ ದೂರು ಸಲ್ಲಿಸಿದ್ದಾರೆ.
ಸಿದ್ದಾಪುರದ ಕುಡಗುಂದ ಬಳಿಯ ಆಲವಳ್ಳಿಯಲ್ಲಿ ವೀರಭದ್ರ ಹಸ್ಲೇರ್ ಅವರು ವಾಸವಾಗಿದ್ದು, ಅವರ ಮೂವರು ಮಕ್ಕಳಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ. ಮಂಜುನಾಥ ಹಸ್ಲೇರ್, ಚಂದ್ರಶೇಖರ ಹಸ್ಲೇರ್ ಅವರು ಮೀನು ಮಾರಾಟ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದು ಜನವರಿ 7ರಂದು ಅವರು ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ. ಕಾರು ಸುಡುವ ಮುನ್ನ ಪ್ರಮೋದ ನಾಯ್ಕ ಅವರು ಕ್ಯಾನಿನಲ್ಲಿ ಪೆಟ್ರೋಲ್ ಖರೀದಿಸಿದ್ದು ಹಾಗೂ ಘಟನೆಯಲ್ಲಿ ಪ್ರಮೋದ ನಾಯ್ಕ ಸಹ ಗಾಯಗೊಂಡಿರುವ ವಿಷಯ ಹೊರ ಬಿದ್ದಿದೆ. ಸುಟ್ಟುಹೋದ ಸಹೋದರರ ತಮ್ಮ ಉಮೇಶ ಹಸ್ಲರ್ ಈ ವಿಷಯವನ್ನು ಪೊಲೀಸರ ಎದುರು ಬಹಿರಂಗಪಡಿಸಿದ್ದಾರೆ.
ದುರ್ಘಟನೆ ನಡೆದ ನಂತರ ಪ್ರಮೋದ ನಾಯ್ಕ ಕಣ್ಮರೆಯಾಗಿದ್ದಾರೆ. ಪ್ರಮೋದ ನಾಯ್ಕ ಅವರ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಸಹೋದರರು ಸುಟ್ಟು ಕರಕಲಾದ ನಂತರ ಉಮೇಶ ಹಸ್ಲರ್ ಅವರು ಪ್ರಮೋದ ನಾಯ್ಕ ಅವರ ಮನೆಗೆ ಭೇಟಿ ನೀಡಿದ್ದಾರೆ. ಆದರೆ, ಆ ವೇಳೆ ಪ್ರಮೋದ ನಾಯ್ಕ ಅಲ್ಲಿರಲಿಲ್ಲ. ಇದೇ ಅವಧಿಯಲ್ಲಿ ಪ್ರಮೋದ ನಾಯ್ಕ ಹಾಗೂ ಸಾವನಪ್ಪಿದ ಹಸ್ಲರ್ ಸಹೋದರರ ನಡುವೆ ಹಣಕಾಸಿನ ವ್ಯವಹಾರ ನಡೆಯುತ್ತಿರುವುದು ಉಮೇಶ ಹಸ್ಲರ್ ಅವರಿಗೆ ನೆನಪಾಗಿದೆ. ಜನವರಿ 6ರಂದು ಪ್ರಮೋದ ನಾಯ್ಕ ಕ್ಯಾನಿನಲ್ಲಿ ಪೆಟ್ರೋಲ್ ಖರೀದಿಸಿದ ಬಗ್ಗೆ ಆಲಳ್ಳಿಯ ಆನಂದ ರಮೇಶ ಹಸ್ಲರ್ ಅವರು ಮಾಹಿತಿ ನೀಡಿದ್ದಾರೆ. ಮತ್ತೊಬ್ಬನ ಜೊತೆ ಸೇರಿ ಮಾವಿನಗುಂಡಿಯಲ್ಲಿರುವ ಪೆಟ್ರೋಲ್ ಬಂಕಿನಿAದ ಪೆಟ್ರೋಲ್ಪಡೆದ ಬಗ್ಗೆಯೂ ಅವರು ತಿಳಿಸಿದ್ದಾರೆ. ಕಾರು ಸುಟ್ಟು 8 ದಿನ ಕಳೆದರೂ ಪ್ರಮೋದ ನಾಯ್ಕ ಮನೆಗೆ ಬಾರದ ಕಾರಣ ಉಮೇಶ ಹಸ್ಲರ್ ಅವರಿಗೆ ಅನುಮಾನ ಶುರುವಾಗಿದೆ. ಪ್ರಕರಣ ನಡೆದು 17 ದಿನ ಕಳೆದರೂ ಪ್ರಮೋದ ನಾಯ್ಕ ಬಾರದ ಕಾರಣ ಪ್ರಮೋದ ನಾಯ್ಕ ಅವರ ಬಗ್ಗೆ ಕುಟುಂಬದವರು ವಿಚಾರಿಸಿದ್ದಾರೆ. ಆಗ, ಕಾರ್ಗಾಲ್’ದಲ್ಲಿ ಪ್ರಮೋದ ನಾಯ್ಕ ಅವರನ್ನು ವ್ಯಕ್ತಿಯೊಬ್ಬರು ನೋಡಿದ್ದು, ಪ್ರಮೋದ ನಾಯ್ಕ ಕೈ-ಕಾಲು ಸುಟ್ಟಿರುವುದನ್ನು ಗಮನಿಸಿದ್ದಾರೆ.
ಇದನ್ನು ಓದಿ: ಸುಟ್ಟ ಕಾರಿನ ಸುತ್ತ ಅನುಮಾನದ ಹುತ್ತ!
ಈ ಎಲ್ಲಾ ಹಿನ್ನಲೆ ಉಮೇಶ ಹಸ್ಲರ್ ಅವರು ಹೊನ್ನಾವರ ಪೊಲೀಸ್ ಠಾಣೆಗೆ ಹೋಗಿದ್ದು, ಪ್ರಮೋದ ನಾಯ್ಕ ಮಾಡಿದ ಕೊಲೆಯ ಬಗ್ಗೆ ವಿವರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ, ಪ್ರಮೋದ ನಾಯ್ಕ ಅವರ ಶೋಧ ನಡೆಸಿದ್ದಾರೆ. ಶೀಘ್ರದಲ್ಲಿಯೇ ಪ್ರಮೋದ ನಾಯ್ಕ ಅವರ ಬಂಧನದ ವಿಷಯ ಹೊರಬರುವ ಸಾಧ್ಯತೆಗಳಿವೆ.