ಫೆಬ್ರವರಿ 14ಂದು ಕಾರವಾರದ ಅಮದಳ್ಳಿ ಬಳಿ ನಡೆದಿದ್ದ ಅಪಘಾತದಲ್ಲಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಫೋಟೋಗ್ರಾಫರ್ ಸಚಿನ್ ತಳೇಕರ ಅವರು ಶುಕ್ರವಾರ ಸಾವನಪ್ಪಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಆರು ದಿನಗಳ ಕಾಲ ನಿರಂತರ ಚಿಕಿತ್ಸೆ ನಡೆದರೂ ಅದು ಪ್ರಯೋಜನಕ್ಕೆ ಬಂದಿಲ್ಲ.
ಅoಕೋಲಾ ತಾಲೂಕಿನ ಅವರ್ಸಾ ಮೂಲದ ಸಚಿನ್ ತಳ್ಳೆಕರ್ ಅವರು ಕಳೆದ 23 ವರ್ಷಗಳಿಂದ ಜೋಯಿಡಾದಲ್ಲಿ ನೆಲೆಸಿದ್ದರು. ಅಲ್ಲಿಯೇ ಅವರು ಫೋಟೋಗ್ರಾಫರ್ ಆಗಿ ಪ್ರಸಿದ್ಧಿಪಡೆದಿದ್ದರು. ತಮ್ಮ ಸರಳತೆ, ವಿನಯತೆ ಮತ್ತು ಸ್ನೇಹಮಯಿ ಸ್ವಭಾವದಿಂದ ಊರಿನವರ ಮೆಚ್ಚುಗೆಗಳಿಸಿದ್ದರು. ತಮ್ಮ ಕಲಾತ್ಮಕ ಪ್ರತಿಭೆಯಿಂದ ಅನೇಕ ಕುಟುಂಬಗಳ ಶುಭ ಸಮಾರಂಭಗಳ ಸಂತಸದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಶಾಶ್ವತವಾಗಿ ಸೆರೆಹಿಡಿದಿದ್ದರು. ತಮ್ಮ ವೃತ್ತಿಪರತೆ ಹಾಗೂ ಪ್ರೀತಿಯ ಬಂಧದಿAದ ಅವರು ಎಲ್ಲರ ಹೃದಯ ಗೆದ್ದಿದ್ದರು.
ಫೆ 14ರಂದು ಅಮದಳ್ಳಿ ಹೆದ್ದಾರಿಯಲ್ಲಿ ನಡೆದಿದ್ದ ಬೈಕ್-ಸ್ಕೂಟಿ ನಡುವಿನ ರಸ್ತೆ ಅಪಘಾತದಲ್ಲಿ ಸಚಿನ್ ತಳ್ಳೇಕರ್ ಅವರು ಗಂಭೀರ ಗಾಯಗೊಂಡಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಸಹ ತಲೆಗೆ ಗಂಭೀರ ಗಾಯಗಳಾಗಿದ್ದ ಹಿನ್ನಲೆ ಬದುಕಿಸುವುದು ಕಷ್ಟ ಎಂದು ವೈದ್ಯರು ಹೇಳಿದರು. ಈ ಹಿನ್ನಲೆ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಗಿದ್ದು, ಶುಕ್ರವಾರ ಕೊನೆಯುಸಿರೆಳೆದರು.