ಕುಮಟಾದ ಹಳಕಾರ್ ಬಳಿಯ ಗುಣಗಣಕೊಪ್ಪದ ವಿಲೇಜ್ ಫಾರೆಸ್ಟ್ ಪ್ರದೇಶದಲ್ಲಿ ಹಿಂದಿನಿAದಲೂ ಭಗವಾಧ್ವಜವಿದ್ದು, ಸದ್ಯ ಆ ಕಟ್ಟೆಯ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಇದಕ್ಕೆ ಅದೇ ಭಾಗದ ನಾಗಶ್ರೀ ಪಟಗಾರ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದರಿಂದ ಅರಣ್ಯ ಇಲಾಖೆಯವರು ಭಗವಾಧ್ವಜಕ್ಕೆ ಕಟ್ಟೆ ಕಟ್ಟುವುದಕ್ಕೆ ತಕರಾರು ಮಾಡಿದ್ದಾರೆ.
ಹಳಕಾರ ವಿಲೇಜ್ ಪಾರೇಸ್ಟ ಪ್ರದೇಶದಲ್ಲಿ ಕಳೆದ 12 ವರ್ಷಗಳಿಂದ ಭಗವಾಧ್ವಜವಿದೆ. ಸದ್ಯ ಅಲ್ಲಿ ಚೀರೆಕಲ್ಲುಗಳನ್ನು ಕಟ್ಟಲಾಗುತ್ತಿದೆ. ಜೊತೆಗೆ ಆ ಕಟ್ಟೆಯನ್ನು ಇನ್ನಷ್ಟು ದೊಡ್ಡದಾಗಿಸಿ ಅಭಿವೃದ್ಧಿ ಮಾಡಲು ಕೆಲವರು ಶ್ರಮಿಸುತ್ತಿದ್ದಾರೆ. ಆದರೆ, ಅತಿಥಿ ಶಿಕ್ಷಕಿಯಾಗಿರುವ ನಾಗಶ್ರೀ ನೀಲಕಂಠ ಪಟಗಾರ್ ಅವರು ಇದಕ್ಕೆ ವಿರೋಧವ್ಯಕ್ತಪಡಿಸಿದ್ದಾರೆ. ಹಳಗಾರದ ವ್ಯಾಪಾರಿ ವಿಶ್ವನಾಥ ನಾಗೇಶ ಪಟಗಾರ, ವೈರಿಂಗ್ ಕೆಲಸ ಮಾಡುವ ನಾಗರಾಜ ಸುಕ್ರು ಪಟಗಾರ, ಗಣೇಶ ನಗರದ ವಾಟರ್ ಸಪ್ಲಾಯರ್ ಶಾಂತರಾಮ ಬಲಿಯಾ ಹರಿಕಂತ್ರ, ಹರಿಕಂತ್ರಕೇರಿಯ ವ್ಯಾಪಾರಿ ನಾಗಪ್ಪ ಈರಾ ಹರಿಕಂತ್ರ ಅವರು ಸಹ ಈ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸಿದ್ದಾರೆ.
ಸದ್ಯ ಆ ಆಕ್ಷೇಪಣಾ ಪತ್ರ ತಹಶೀಲ್ದಾರ್ ಕಚೇರಿ ಹಾಗೂ ಅರಣ್ಯ ಇಲಾಖೆಗೆ ರವಾನೆಯಾಗಿದೆ. ಈ ಹಿನ್ನಲೆ ಮಾರ್ಚ 12ರಂದು ಅರಣ್ಯ ಇಲಾಖೆಯವರು ಭಗವಾ ದ್ವಜ ಕಟ್ಟೆ ನಿರ್ಮಾಣ ಕೆಲಸ ತಡೆದಿದ್ದಾರೆ. ಕುಮಟಾ ಸೂಕ್ಷö್ಮ ಪ್ರದೇಶವಾಗಿದ್ದು, ಭಗವಾ ಧ್ವಜ ವಿಷಯವಾಗಿ ನಾಗರಿಕ ಸೌಹಾರ್ದತೆಗೆ ಧಕ್ಕೆ ಆಗುವ ಸಾಧ್ಯತೆ ಇದೆ. ಈ ಹಿನ್ನಲೆ ಆಕ್ಷೇಪಣೆ ಸಲ್ಲಿಸಿದ ನಾಗಶ್ರೀ ಪಟಗಾರ ಅವರ ಜೊತೆ ವಿಶ್ವನಾಥ ಪಟಗಾರ, ನಾಗರಾಜ ಪಟಗಾರ, ಶಾಂತರಾಮ ಹರಿಕಂತ್ರ, ನಾಗಪ್ಪ ಹರಿಕಂತ್ರ ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.