ಶಿರಸಿಯ ಹೆಸ್ಕಾಂ ಸಿಬ್ಬಂದಿ ಅಕ್ಷಯ ಕುಲಕರ್ಣಿ ಅವರು ನಿಗೂಢವಾಗಿ ಕಾಣೆಯಾಗಿದ್ದಾರೆ. ಕಳೆದ ಎರಡು ದಿನದಿಂದ ಕುಟುಂಬದವರು ಅಕ್ಷಯ ಕುಲಕರ್ಣಿ ಅವರ ಹುಡುಕಾಟ ನಡೆಸಿದ್ದಾರೆ.
ಶಿರಸಿಯ ಚಿಪಗಿ ಬಳಿಯ ಜವಳಗುಂಡಿಯಲ್ಲಿ ಅಕ್ಷಯ ಕೃಷ್ಣಮೂರ್ತಿ ಕುಲಕರ್ಣಿ ಅವರು ವಾಸವಾಗಿದ್ದರು. 33 ವರ್ಷದ ಅವರು ಹೆಸ್ಕಾಂ ಮೀಟರ್ ರೀಡಿಂಗ್ ಕೆಲಸ ಮಾಡುತ್ತಿದ್ದರು. ಏಪ್ರಿಲ್ 6ರ ಮಧ್ಯಾಹ್ನ 3ಗಂಟೆಯವರೆಗೂ ಮನೆಯಲ್ಲಿದ್ದ ಅವರು ನಂತರ ಮನೆಯಿಂದ ಹೊರ ಹೋಗಿದ್ದರು. ಆದರೆ, ಅವರು ಮತ್ತೆ ಮನೆಗೆ ಬರಲಿಲ್ಲ.
ಅಣ್ಣ ಮನೆಗೆ ಬಾರದ ಕಾರಣ ಆಕಾಶ ಕುಲಕರ್ಣಿ ಅವರು ಆತಂಕಕ್ಕೆ ಒಳಗಾದರು. ಸ್ನೇಹಿತರು-ಸಂಬAಧಿಕರಿಗೆ ಫೋನ್ ಮಾಡಿಯೂ ಅವರು ಸಹೋದರನ ಬಗ್ಗೆ ವಿಚಾರಿಸಿದರು. ಆದರೆ, ಅಕ್ಷಯ ಕುಲಕರ್ಣಿ ಅವರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಚಿಪಗಿ ಜವಳಗುಂಡಿಯಲ್ಲಿರುವ ಮನೆಯಿಂದ ಹೊರಹೋದ ಅಕ್ಷಯ ಕುಲಕರ್ಣಿ ಅವರು ಮನೆಗೆ ಬಾರದ ಕಾರಣ ಅಕ್ಷಯ ಕುಲಕರ್ಣಿ ಅವರು ಪೊಲೀಸರ ಮೊರೆ ಹೋದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಅಕ್ಷಯ ಕುಲಕರ್ಣಿ ಅವರ ಹುಡುಕಾಟ ನಡೆಸಿದ್ದಾರೆ.