ಆಸ್ತಿಯಲ್ಲಿ ಪಾಲು ಕೇಳಿದ ಕಾರಣ ಮಗನನ್ನೇ ಕೊಲೆ ಮಾಡಿದ ಅಪ್ಪ-ಅಮ್ಮನ ಜೊತೆ ಅವರ ಮತ್ತೊಬ್ಬ ಮಗನಿಗೂ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಬಿದ್ರಳ್ಳಿಯಲ್ಲಿ 2019ರಲ್ಲಿ ಕೇಶವ ಕಿತ್ತೂರಕರ್ ಅವರ ಕೊಲೆ ನಡೆದಿತ್ತು. ಪಾಂಡುರAಗ ಕಿತ್ತೂರಕರ್ ಅವರು ತಮ್ಮ ಪತ್ನಿ ಲತಾ (ತುಳಸಾಯಿ) ಕಿತ್ತೂರಕರ್ ಹಾಗೂ ಕಿರಿಯ ಮಗ ಅಕ್ಷಯ (ಆಕಾಶ) ಕಿತ್ತೂರಕರ್ ಅವರ ಜೊತೆ ಸೇರಿ ಕೇಶವ ಕಿತ್ತೂರಕರ್ ಅವರ ಕೊಲೆ ಮಾಡಿದ್ದರು. ಅದಾದ ನಂತರ ಗಣಪತಿ ಯಲ್ಲಪ್ಪಾ ಕಿತ್ತೂರಕರ್ ಹಾಗೂ ಲಕ್ಷö್ಮಣ ಕೇದಾರಿ ಕಿತ್ತೂರಕರ್ ಎಂಬಾತರ ಸಹಾಯಪಡೆದು ಸಾಕ್ಷಿ ನಾಶದ ಪ್ರಯತ್ನ ಮಾಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸುಶೀಲಾ ನಾಗೇಂದ್ರ ಕುಲಿ ಎಂಬಾತರು ಈ ಕೊಲೆಯನ್ನು ಕಣ್ಣಾರೆ ನೋಡಿದ್ದು, ಅವರೇ ಪೊಲೀಸ್ ದೂರು ನೀಡಿದ್ದರು.
ಕೇಶವ ಕಿತ್ತೂರಕರ್ ಅವರು ಆಸ್ತಿಯಲ್ಲಿ ಭಾಗ ಕೇಳಿದ ಕಾರಣ ಅದನ್ನು ಅಕ್ಷಯ ಕಿತ್ತೂರಕರ್ ಅವರು ಸಹಿಸದೇ ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಯಿತು. 2019ರ ಸೆಪ್ಟೆಂಬರ್ 3ರ ಸಂಜೆ ಕೇಶವ ಕಿತ್ತೂರಕರ್ ಅವರ ಕೈಕಾಲು ಕಟ್ಟಿ ಕುಟುಂಬದವರು ಥಳಿಸಿದ್ದರು. ಅಕ್ಷಯ ಕಿತ್ತೂರಕರ್ ಅವರ ಜೊತೆ ಅವರ ತಂದೆ ಪಾಂಡುರAಗ ಕಿತ್ತೂರಕರ್ ಅವರು ತಮ್ಮ ಪತ್ನಿ ಲತಾ ಕಿತ್ತೂರಕರ್ ಅವರು ಸಹ ಮಗನ ಮೇಲೆ ಹಲ್ಲೆ ಮಾಡಿದ್ದರು. ಮನೆಯ ಕಂಬಕ್ಕೆ ಕೇಶವ ಕಿತ್ತೂರಕರ್ ಅವರನ್ನು ಕಟ್ಟಿಹಾಕಿ ಕಟ್ಟಿಗೆಯಿಂದ ಬಡಿದಿದ್ದರು. ಹಗ್ಗದಿಂದ ಅವರ ಕೇಶವ ಕಿತ್ತೂರಕರ್ ಅವರ ಕುತ್ತಿಗೆ ಅದುಮಿ ಕೊಲೆ ಮಾಡಿದ್ದರು. ಅದಾದ ನಂತರ ಗಣಪತಿ ಕಿತ್ತೂರಕರ್ ಹಾಗೂ ಲಕ್ಷö್ಮಣ ಕಿತ್ತೂರಕರ್ ಅವರ ಸಹಾಯಪಡೆದು ಶವದ ಮೇಲಿದ್ದ ಬಟ್ಟೆ ಬದಲಿಸಿ ಸಾಕ್ಷಿ ನಾಶ ಮಾಡಿದ ಆರೋಪದ ಬಗ್ಗೆ ತನಿಖೆ ನಡೆದಿತ್ತು.
ಸಮಗ್ರ ವಿಚಾರಣೆ ನಡೆಸಿದ ಅಂದಿನ ಪೊಲೀಸ್ ನಿರೀಕ್ಷಕ ಬಿ ಎಸ್ ಲೋಕಾಪುರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪೊಲೀಸ್ ಸಿಬ್ಬಂದಿ ಹನುಮಂತ ಬರ್ಗಿ ಅವರು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ದಾಖಲೆಗಳ ಆಧಾರದಲ್ಲಿ ವಾದ ಮಂಡಿಸಿದರು. `ಆಸ್ತಿ ಆಸೆಗಾಗಿ ಸ್ವಂತದವರನ್ನೇ ಕೊಂದವರಿಗೆ ಉಗ್ರ ಶಿಕ್ಷೆ ನೀಡಬೇಕು’ ಎಂದವರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಶುಕ್ರವಾರ ಪ್ರಕರಣದ ತೀರ್ಪು ಪ್ರಕಟಿಸಿದ್ದು, ಮೂವರ ಮೇಲಿನ ಆರೋಪ ಸಾಭೀತಾದ ಕಾರಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಪಾಂಡುರAಗ ಕಿತ್ತೂರಕರ್, ಲತಾ ಕಿತ್ತೂರಕರ್ ಹಾಗೂ ಅಕ್ಷಯ ಕಿತ್ತೂರಕರ್ ಅವರು ಜೈಲು ಪಾಲಾಗುವುದು ಖಚಿತವಾಯಿತು. ಸಾಕ್ಷಿ ಕೊರತೆ ಕಾರಣದಿಂದ ಗಣಪತಿ ಕಿತ್ತೂರಕರ್ ಹಾಗೂ ಲಕ್ಷö್ಮಣ ಕಿತ್ತೂರಕರ್ ಪ್ರಕರಣದಿಂದ ಪಾರಾದರು. ಯಲ್ಲಾಪುರ ಪೀಠಾಸಿನ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಈ ತೀರ್ಪು ನೀಡಿದರು.