ಯಲ್ಲಾಪುರದ ಕಿರವತ್ತಿ ಗ್ರಾಮ ಪಂಚಾಯತ ಕಟ್ಟಡ ಸೋರುತ್ತಿದೆ. ಮಳೆಯಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಅಧಿಕಾರಿಗಳು ಕಚೇರಿಗೆ ತಾಡಪತ್ರೆ ಹೊದೆಸಿದ್ದಾರೆ!
ADVERTISEMENT
ಕಿರವತ್ತಿ ಯಲ್ಲಾಪುರ ತಾಲೂಕಿನಲ್ಲಿಯೇ ಅತಿ ದೊಡ್ಡ ಊರಾಗಿದ್ದು, ಇಲ್ಲಿನ ಗ್ರಾಮ ಪಂಚಾಯತಗೆ ಸಾಕಷ್ಟು ಆದಾಯವೂ ಇದೆ. ಅದಾಗಿಯೂ, ಕಚೇರಿ ಸೋರದ ಹಾಗೇ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯತ ಕಟ್ಟಡ ಹಳೆಯದಾಗಿದ್ದರೂ ಬಳಕೆಗೆ ತೊಂದರೆ ಇಲ್ಲ. ಸದ್ಯದ ಮಟ್ಟಿಗೆ ಗಟ್ಟಿಮುಟ್ಟಾಗಿಯೇ ಇದೆ. ಕಚೇರಿ ಮೇಲ್ಚಾವಣಿಗೆ ಹಂಚು ಹೊದೆಸಲಾಗಿದ್ದು, ಅಲ್ಲಿಂದ ಒಳಗೆ ನೀರು ನುಗ್ಗುತ್ತಿದೆ. ಕಚೇರಿಯೊಳಗಿರುವ ಕಂಪ್ಯುಟರ್ ಹಾಗೂ ಕಡತಗಳ ರಕ್ಷಣೆಗಾಗಿ ಇದೀಗ ಅಧಿಕಾರಿಗಳು ತಾಡಪತ್ರೆಯ ಮೊರೆ ಹೋಗಿದ್ದಾರೆ.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಈಗಲೂ ಗ್ರಾಮ ಪಂಚಾಯತದ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂ ದುಡ್ಡಿದೆ. ನಿನ್ನೆ-ಮೊನ್ನೆಯವರೆಗೂ ಗ್ರಾಮ ಪಂಚಾಯತವೂ ವಿವಿಧ ಅಭಿವೃದ್ದಿ ಕೆಲಸಗಳಿಗಾಗಿ ಹಣ ವೆಚ್ಚ ಮಾಡಿದೆ. ವಿವಿಧ ಯೋಜನೆಗಳ ಅಡಿ ಕಿರವತ್ತಿ ಗ್ರಾಮ ಪಂಚಾಯತದಿoದ ಕುಡಿಯುವ ನೀರು, ರಸ್ತೆ ರಿಪೇರಿ, ಬೀದಿ ದೀಪಗಳ ನಿರ್ವಹಣೆಗಾಗಿ ಲಕ್ಷಾಂತರ ರೂ ವ್ಯಯಿಸಲಾಗಿದೆ. ಆದರೆ, ಗ್ರಾಮ ಪಂಚಾಯತ ಕಟ್ಟಡ ಸೋರದ ಹಾಗೇ ಮುನ್ನಚ್ಚರಿಕೆವಹಿಸಿಲ್ಲ.
ಸದ್ಯ ಜೋರು ಮಳೆ ಶುರುವಾಗಿದ್ದು, ತರಾತರಿಯಲ್ಲಿ ಗ್ರಾಮ ಪಂಚಾಯತ ಕಟ್ಟಡಕ್ಕೆ ತಾಡಪತ್ರೆ ಹೊದಿಸಲಾಗಿದೆ. ತಾಡಪತ್ರೆ ಹೊದಸಿದರೂ ಕಚೇರಿಯಲ್ಲಿನ ತೇವಾಂಶ ಹಾಗೇ ಇದೆ. ಅಲ್ಲಲ್ಲಿ ಗೋಡೆಗಳು ಒದ್ದೆಯಾಗಿದ್ದು, ಬೀಸುವ ಗಾಳಿಗೆ ತಾಡಪತ್ರೆ ಹಾರಿ ಹೋಗುವ ಪರಿಸ್ಥಿತಿಯಲ್ಲಿದೆ. ಜೋರಾಗಿ ಮಳೆ ಬಂದಾಗ ಒಳಗೆ ನೀರು ನುಗ್ಗುವುದರಿಂದ ಅಧಿಕಾರಿ-ಸಿಬ್ಬಂದಿಗೆ ಕೆಲಸ ಮಾಡಲು ಸಹ ಆಗುತ್ತಿಲ್ಲ. ಹೀಗಾಗಿ ಸದ್ಯ ತುರ್ತಾಗಿ ಇಲ್ಲಿ ತಾಡಪತ್ರೆ ಹೊದಿಸಿ, ಮಳೆ ನೀರು ನುಗ್ಗದ ಹಾಗೇ ಮಾಡಲಾಗಿದೆ.