ಕನ್ನಡದ ಕಾಂತಾರ ಚಲನಚಿತ್ರದಲ್ಲಿ ಅಭಿನಯಿಸಿರುವ ರಮ್ಯಾ ಕೃಷ್ಣ ಅವರು ಭಟ್ಕಳದ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡಿದ್ದಾರೆ. ರಮ್ಯಾ ಕೃಷ್ಣ ಅವರು ಭಟ್ಕಳದವರೇ ಆಗಿದ್ದು, ತಮ್ಮ ಹುಟ್ಟೂರಿನ ಮಕ್ಕಳಿಗೆ ಅವರು ನೆರವಾಗಿದ್ದಾರೆ.
ಭಟ್ಕಳದ ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆರಬುಡುಕಿ, ನೂಜ್, ಕೆಕ್ಕೋಡನ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಮ್ಯಾ ಕೃಷ್ಣ ಅವರು ಬ್ಯಾಗ್ ಹಾಗೂ ಮಾರುಕೇರಿಯ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆ ಹಾಗೂ ಬೆಳಕೆಯ ಪೌಢಶಾಲಾ ವಿದ್ಯಾರ್ಥಿನಿಯರಿಗೆ ನ್ಯಾಪ್ ಕಿನ್, ನೋಟ್ ಬುಕ್ ಸೇರಿ ವಿವಿಧ ಪರಿಕ್ಕರಗಳನ್ನು ವಿತರಿಸಿದ್ದಾರೆ. `ತಾನು ಭಟ್ಕಳದಲ್ಲಿ ಪ್ರಾಥಮಿಕ ಶಾಲೆ ಕಲಿತು ಬೆಂಗಳೂರಿನಲ್ಲಿ (ಃeಟಿgಚಿಟuಡಿu) ಇಂಜಿನಿಯರಿAಗ್ ಮುಗಿಸಿದ ನಂತರ ಚಿತ್ರರಂಗ ಪ್ರವೇಶಿಸಿದೆ. ಸಮಾಜ ಸೇವೆ ಮಾಡುವುದು ನನ್ನ ಜೀವನದ ಮುಖ್ಯ ಗುರಿ’ ಎಂದು ಈ ವೇಳೆ ಅವರು ಹೇಳಿದ್ದಾರೆ.
`ಆಹಾರ ಇಂಡಿಯಾ’ ಎಂಬ ಸಂಸ್ಥೆ ಮೂಲಕ ಅವರು ವಿದ್ಯಾರ್ಥಿಗಳಿಗೆ ನೆರವಾಗಿದ್ದು, ಮುಂದೆಯೂ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಸದ್ಯ ರಮ್ಯಾ ಕೃಷ್ಣ ಅವರು ತಮಿಳು, ತೆಲಗು ಸೇರಿ ವಿವಿಧ ಭಾಷೆಗಳ ಚಿತ್ರದಲ್ಲಿ ಸಹ ನಟಿಯಾಗಿದ್ದಾರೆ. ಮಾರುಕೇರಿ ಪೌಢಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶ್ರೀಕಂಠ ಹೆಬ್ಬಾರ, ನಾರಾಯಣ ಹೆಬ್ಬಾರ ಹಾಗೂ ಇತರರು ಚಿತ್ರನಟಿ ರಮ್ಯಾ ಕೃಷ್ಣ ಅವರನ್ನು ಗೌರವಿಸಿದ್ದಾರೆ.