ಹೊನ್ನಾವರದ ದೇವಸ್ಥಾನಕೇರಿಯ ಪಾರ್ವತಿ ಪಟಗಾರ ಅವರ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿದೆ. ಅದೇ ಊರಿನ ಧನುಶ್ ಗೌಡ ಕಳ್ಳತನ ಮಾಡಿರುವ ಅನುಮಾನ ಕಾಡುತ್ತಿದೆ.
ಹೊನ್ನಾವರದ ದೇವಸ್ಥಾನಕೇರಿಯಲ್ಲಿ ಪಾರ್ವತಿ ನಾರಾಯಣ ಪಟಗಾರ ಅವರು ವಾಸವಾಗಿದ್ದಾರೆ. 35 ವರ್ಷದ ಅವರು ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಉಳಿತಾಯದ ಹಣದಲ್ಲಿ ಅವರು ವಿವಿಧ ಬಗೆಯ ಚಿನ್ನಾಭರಣ ಮಾಡಿಸಿದ್ದು, ಅದು ಇದೀಗ ಕಾಣುತ್ತಿಲ್ಲ. 40 ಗ್ರಾಂ ತೂಕದ ಮಂಗಳಸೂತ್ರ, 15 ಗ್ರಾಂ ತೂಕದ ಕರಿಮಣಿ ಮಂಗಳಸೂತ್ರ, 20 ಗ್ರಾಂ ತೂಕದ ನೆಕ್ಲೇಸ್, 35 ಗ್ರಾಂ ತೂಕದ ಹವಳದ ಸರ, ಎರಡು ಮಕ್ಕಳ ಚೈನುಗಳು, ಐದು ಚಿಕ್ಕ ಉಂಗುರ ಸೇರಿ 128 ಗ್ರಾಂ ಚಿನ್ನಾಭರಣ ಕಾಣೆಯಾಗಿದೆ. ಒಟ್ಟು 12.80 ಲಕ್ಷ ರೂ ಮೌಲ್ಯದ ಚಿನ್ನವನ್ನು ಅದೇ ಊರಿನ ಧನುಶ್ ಶ್ರೀಧರ ಗೌಡ ಅವರು ಕದ್ದಿರುವ ಅನುಮಾನ ಶುರುವಾಗಿದೆ.
ಮೇ 20ರ ರಾತ್ರಿ 8 ಗಂಟೆಯಿAದ ಜೂನ್ 7ರ ಸಂಜೆ 6 ಗಂಟೆಯ ಅವಧಿಯಲ್ಲಿ ಈ ಕಳ್ಳತನ ನಡೆದಿದೆ. ಪಾರ್ವತಿ ಪಟಗಾರ ಅವರ ಮನೆಯಲ್ಲಿದ್ದ ಕಬ್ಬಿಣದ ಟ್ರಂಕ್ನೊಳಗಿನ ಬೀಗ ಹಾಕಿದ ಪೆಟ್ಟಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ಚಿನ್ನಾಭರಣಗಳು ಕಣ್ಮರೆಯಾಗಿದೆ. ಅನುಮಾನಾಸ್ಪದ ವ್ಯಕ್ತಿಯ ವಿಚಾರಣೆ ನಡೆಸಬೇಕು ಎಂದು ಪಾರ್ವತಿ ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಅವರು ಕಳ್ಳತನವಾದ ವಸ್ತುಗಳನ್ನು ಹುಡುಕಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.