ADVERTISEMENT
  • Home
Sunday, October 12, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಶಾಸಕರಿಗೆ ಸಂಕಟ-ಅಧಿಕಾರಿಗೆ ಕಂಟಕ: ಪತ್ರ ಬರೆದು ಪರಾರಿಯಾದ ಕಂದಾಯ ನಿರೀಕ್ಷಕ!

mobiletime .in by mobiletime .in
A A
ಕುಮಟಾ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ, ಶಾಸಕ ದಿನಕರ ಶೆಟ್ಟಿ ಹಾಗೂ ಕಾಣೆಯಾದ ಕಂದಾಯ ನಿರೀಕ್ಷಕ ವೆಂಕಟೇಶ್ ಆರ್ (ಎಡದಿಂದ ಬಲಕ್ಕೆ)

ಕುಮಟಾ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ, ಶಾಸಕ ದಿನಕರ ಶೆಟ್ಟಿ ಹಾಗೂ ಕಾಣೆಯಾದ ಕಂದಾಯ ನಿರೀಕ್ಷಕ ವೆಂಕಟೇಶ್ ಆರ್ (ಎಡದಿಂದ ಬಲಕ್ಕೆ)

Share on FacebookShare on WhatsappShare on Twitter
ADVERTISEMENT

ಅಕ್ರಮ ಕಟ್ಟಡವನ್ನು ಸಕ್ರಮ ಎಂದು ದಾಖಲೆ ಸೃಷ್ಠಿಸಲು ಸಾಧ್ಯವಾಗದ ಕಾರಣ ಕುಮಟಾ ಪುರಸಭೆಯಲ್ಲಿ ಕಂದಾಯ ನಿರೀಕ್ಷಕ ವೆಂಕಟೇಶ ಆರ್ ಅವರು ಕಣ್ಮರೆಯಾಗಿದ್ದಾರೆ. ಇದಕ್ಕೂ ಮುನ್ನ ಅವರು ಅಕ್ರಮ-ಅವ್ಯವಹಾರಗಳ ಬಗ್ಗೆ ಪತ್ರ ಬರೆದಿದ್ದು, ಅದರಲ್ಲಿ ಶಾಸಕ ದಿನಕರ ಶೆಟ್ಟಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ಹೆಸರು ಉಲ್ಲೇಖಿಸಿದ್ದಾರೆ.

Advertisement. Scroll to continue reading.
ADVERTISEMENT

ಪ್ರಾಥಮಿಕ ಮಾಹಿತಿಗಳ ಪ್ರಕಾರ, ವೆಂಕಟೇಶ ಆರ್ ಅವರು ಭಟ್ಕಳ ಮೂಲದವರಾಗಿದ್ದಾರೆ. ಅವರ ತಂದೆ ನಂತರ ಅನುಕಂಪದ ಆಧಾರದಲ್ಲಿ ಈ ಹುದ್ದೆಗೆ ಬಂದಿದ್ದರು. ರಾಷ್ಟಿಯ ಹೆದ್ದಾರಿ ಅಂಚಿನಲ್ಲಿರುವ ವಿನಾಯಕ ಹೊಟೇಲ್ ಅನಧಿಕೃತವಾಗಿದ್ದರೂ ಆ ಕಟ್ಟಡಕ್ಕೆ ಅಧಿಕೃತ ಮುದ್ರೆ ಒತ್ತುವಂತೆ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರು ಒತ್ತಡ ತಂದಿದ್ದರು. ಆದರೆ, ಇದಕ್ಕೆ ವೆಂಕಟೇಶ ಆರ್ ಅವರು ಒಪ್ಪಿರಲಿಲ್ಲ. ಹೀಗಾಗಿ ಎಂ ಆರ್ ಸ್ವಾಮಿ ಅವರು ವೆಂಕಟೇಶ್ ಆರ್ ಅವರನ್ನು ಸಾರ್ವಜನಿಕವಾಗಿ ನಿಂದಿಸಿದ್ದರು.

ADVERTISEMENT

ವೆoಕಟೇಶ್ ಆರ್ ಅವರು ಬರೆದ ಪತ್ರದ ಪ್ರಕಾರ, ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರಿಗೆ ಆ ಕಟ್ಟಡವನ್ನು ಅಧಿಕೃತಗೊಳಿಸಲು ಶಾಸಕ ದಿನಕರ ಶೆಟ್ಟಿ ಅವರ ಒತ್ತಡವಿತ್ತು. ಜೊತೆಗೆ ಈ ಕೆಲಸ ಆದರೆ ಎಂ ಆರ್ ಸ್ವಾಮಿ ಅವರಿಗೆ 4 ಲಕ್ಷ ರೂ ಹಣ ಸಿಗುತ್ತಿತ್ತು. ಹೀಗಾಗಿ ಎಂ ಆರ್ ಸ್ವಾಮಿ ಅವರು ತಮ್ಮ ಅಧೀನ ಅಧಿಕಾರಿ ವೆಂಕಟೇಶ ಆರ್ ಅವರ ಮೂಲಕ ಆ ಕೆಲಸ ಮಾಡಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ವೆಂಕಟೇಶ್ ಆರ್ ಅವರು ಒಪ್ಪದ ಕಾರಣ ಬೈಗುಳ ಸ್ವೀಕರಿಸುತ್ತಿದ್ದರು.

ADVERTISEMENT

ಕಳೆದ ಎರಡು ತಿಂಗಳಿನಿAದ ವೆಂಕಟೇಶ್ ಆರ್ ಅವರು ಇದೇ ವಿಷಯವಾಗಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು. ಪುರಸಭೆಗೆ ಮುಖ್ಯಾಧಿಕಾರಿಯಾಗಿ ಎಂ ಆರ್ ಸ್ವಾಮಿ ಬಂದ ದಿನದಿಂದಲೂ ವೆಂಕಟೇಶ್ ಆರ್ ಅವರನ್ನು ಹಿಯಾಳಿಸುತ್ತಿದ್ದರು. ಅಕ್ಟೊಬರ್ 7ರಂದು ಸಂಜೆ ಎಲ್ಲರ ಮುಂದೆ ಕಾನೂನುಬಾಹಿರ ಕೆಲಸ ಮಾಡುವಂತೆ ಸೂಚನೆ ನೀಡಿದ್ದು, ಆಗಲೂ ವೆಂಕಟೇಶ್ ಆರ್ ಅವರು ಒಪ್ಪಲಿಲ್ಲ. ಆಗ, `ನೀನು ಕೀಳು ಜಾತಿಯವ’ ಎಂದು ಎಂ ಆರ್ ಸ್ವಾಮಿ ಅವರು ನಿಂದಿಸಿದರು. ಜೊತೆಗೆ `ನಿನ್ನ ತಂದೆಯ ಹಾಗೇ ನಿನ್ನ ಬುದ್ದಿ’ ಎಂದು ಹಿಯಾಳಿಸಿದರು.

ಈ ವೇಳೆ ಎಂ ಆರ್ ಸ್ವಾಮಿ ಅವರು ಮದ್ಯಪಾನ ಮಾಡಿದ ಆರೋಪವನ್ನು ಎದುರಿಸುತ್ತಿದ್ದು, `ಈ ಕೆಲಸ ಮಾಡದೇ ಇದ್ದರೆ ನೋಟಿಸ್ ಕೊಡುವೆ. ನಿನ್ನ ಕೆಲಸದಿಂದ ತೆಗೆಯುವೆ’ ಎಂದು ಬೆದರಿಸಿದ ಬಗ್ಗೆ ವೆಂಕಟೇಶ್ ಆರ್ ಅವರು ತಾವು ಬರೆದಿಟ್ಟ ಪತ್ರದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. `ತಂದೆ-ತಾಯಿ ಬಗ್ಗೆ ಕೆಟ್ಟದಾಗಿ ಬೈದಿರುವುದನ್ನು ಸಹಿಸಲಾಗುತ್ತಿಲ್ಲ. ತಮ್ಮನನ್ನು ಚನ್ನಾಗಿ ನೋಡಿಕೋ’ ಎಂದು ವೆಂಕಟೇಶ್ ಆರ್ ಅವರು ತಾಯಿಗೆ ಬರೆದ ಪತ್ರ ಹರಿದಾಡುತ್ತಿದೆ.

ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A terrifying baby that woke up its parents!

ಪಾಲಕರ ನಿದ್ದೆಗೆಡಿಸಿದ ಭಯಾನಕ ಶಿಶು!

October 4, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The hole in the hole is a lifesaver!

ಹೊಂಡದ ಗುಂಡಿಯೇ ಜೀವ ರಕ್ಷಕ!

October 12, 2025
This syrup is the reason for the deterioration of children's health!

ಸರ್ಕಾರವೇ ಹೇಳಿದ ಸತ್ಯ: ಮಕ್ಕಳ ಆರೋಗ್ಯ ಹದಗೆಡಲು ಈ ಸಿರಪ್ ಕಾರಣ!

October 11, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೋಬರ್ 12ರ ದಿನ ಭವಿಷ್ಯ

October 11, 2025
ADVERTISEMENT
Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋