ಯಲ್ಲಾಪುರದ ಕಿರವತ್ತಿಯಲ್ಲಿ ವಿವಿಧ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಮಕ್ಕಳಿಬ್ಬರು ಸಿಕ್ಕಿ ಬಿದ್ದಿದ್ದಾರೆ. ಅಪ್ರಾಪ್ತರ ಬೈಕ್ ಚಾಲನೆ ಗುರುತಿಸಿದ ಪೊಲೀಸರು ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಒಪ್ಪಿಸಿದ್ದು, ಮಕ್ಕಳಿಗೆ ಬೈಕ್ ನೀಡಿದ ಪಾಲಕರಿಬ್ಬರಿಗೆ ತಲಾ 25 ಸಾವಿರ ರೂಪಾಯಿಗಳಂತೆ 50 ಸಾವಿರ ರೂ ದಂಡವಿಧಿಸಿದೆ.
ADVERTISEMENT
ಜೂನ್ 9ರಂದು ಯಲ್ಲಾಪುರ ಪಿಸೈ ರಾಜಶೇಖರ್ ವಂದಲಿ ಹಾಗೂ ಸಿದ್ದಪ್ಪ ಗುಡಿ ಅವರು ಕಿರವತ್ತಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರು. ಚೆಕ್ ಪೋಸ್ಟ್ ಬಳಿ ವೇಗದ ವಾಹನ ಚಾಲನೆ ಮಾಡುವವರನ್ನು ಹಿಡಿದು ಅವರಿಗೆ ಬುದ್ದಿ ಹೇಳುವ ಕೆಲಸ ಮಾಡುತ್ತಿದ್ದರು. ಜೊತೆಗೆ ಅತಿ ಬಾರ ಹೊತ್ತು ಸಾಗುವ ಲಾರಿಗಳನ್ನು ಹಿಡಿದು ದಂಡ ವಿಧಿಸುತ್ತಿದ್ದರು. ಈ ವೇಳೆ ಹುಬ್ಬಳ್ಳಿ ಕಡೆಯಿಂದ ಮಕ್ಕಳಿಬ್ಬರು ಬೈಕ್ ಓಡಿಸಿಕೊಂಡು ಬರುವುದನ್ನು ಅವರು ನೋಡಿದರು. ಸಿಬ್ಬಂದಿ ಸಹಕಾರದಲ್ಲಿ ಆ ಬೈಕನ್ನು ನಿಲ್ಲಿಸಿದರು. ಬೈಕ್ ಓಡಿಸುತ್ತಿದ್ದವರ ಬಳಿ ಲೈಸೆನ್ಸ ಇರಲಿಲ್ಲ. ಅವರಿಗೆ 18 ವರ್ಷವೂ ಆಗಿರಲಿಲ್ಲ.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಈ ಹಿನ್ನಲೆ ಆ ಮಕ್ಕಳಿಬ್ಬರ ಬಗ್ಗೆಯೂ ಪೊಲೀಸರು ಕೋರ್ಟಿಗೆ ಕೇಸು ಒಪ್ಪಿಸಿದರು. ಅಪ್ರಾಪ್ತರ ವಾಹನ ಚಾಲನೆಯಿಂದ ಆಗುವ ಅನಾಹುತದ ಬಗ್ಗೆ ಅವರ ಪಾಲಕರಿಗೂ ಫೋನ್ ಮಾಡಿ ತಿಳಿಸಿದರು. ಜೂನ್ 11ರಂದು ಯಲ್ಲಾಪುರ ನ್ಯಾಯಾಲಯ ಆ ಪಾಲಕರನ್ನು ಕರೆಯಿಸಿದ್ದು, ಮಕ್ಕಳು ಮಾಡಿದ ತಪ್ಪಿಗೆ ದಂಡ ಪಾವತಿಸುವಂತೆ ಸೂಚಿಸಿತು. ಅದರ ಪ್ರಕಾರ ಕಲಘಟಗಿಯ ಚಿತ್ರಗಿ ಓಣಿಯ ಬಾಬು ರಾವ್ ಆರ್ ಯಲ್ಲಾಪುರಕರ್ ಹಾಗೂ ಕಲಘಟಗಿಯ ರಾಮಣ್ಣ ಅಮೃತ ಕಲ್ಯಾಣಕರ್ ಅವರು 25 ಸಾವಿರ ರೂ ದಂಡ ಪಾವತಿಸಿದರು. 50 ಸಾವಿರ ರೂಪಾಯಿಗೆ ನ್ಯಾಯಾಲಯ ಪಾವತಿ ನೀಡಿದ್ದು, ಮಕ್ಕಳಿಗೆ ಬೈಕ್ ನೀಡದಂತೆ ಪಾಲಕರಿಗೆೆ ತಾಕೀತು ಮಾಡಿತು.