ಗೋಕರ್ಣದಿoದ ಭಟ್ಕಳದ ಕಡೆ ಹೊರಟಿದ್ದ ರೈಲಿನಲ್ಲಿ ದುರಂತವೊoದು ನಡೆದಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಭಟ್ಕಳದ ವಿದ್ಯಾರ್ಥಿಯೊಬ್ಬರನ್ನು ಸಹ ಪ್ರಯಾಣಿಕರು ರೈಲಿನಿಂದ ದೂಡಿ ಸಾಯಿಸಿದ ಅನುಮಾನ ಪಾಲಕರನ್ನು ಕಾಡುತ್ತಿದೆ. ರೈಲು ಹಳಿಗಳ ಮೇಲೆ ಯತೀನ್ ಮೊಗೇರ್ ಅವರು ರಕ್ತದ ಮಡುವಿನಲ್ಲಿ ಬಿದ್ದು ಸಾವನಪ್ಪಿದ್ದು, ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ.
ಭಟ್ಕಳದ ಹೆಬಳೆಯ ಬುಸಾರಮನೆಯಲ್ಲಿ ಯತೀನ್ ಲಕ್ಷಣ ಮೊಗೇರ್ ಅವರು ವಾಸವಾಗಿದ್ದರು. 18 ವರ್ಷದ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದು, ಜೂನ್ 12ರ ಸಂಜೆ ಗೋಕರ್ಣದಿಂದ ಭಟ್ಕಳದ ಕಡೆ ಸಾಗುವ ರೈಲಿನಲ್ಲಿ ಸಂಚರಿಸುತ್ತಿದ್ದರು. ಆ ರೈಲು ನುಶಿಕೋಟೆ ಬಳಿ ಬಂದಾಗ ಯತೀನ್ ಮೊಗೇರ್ ಅವರು ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಅಲ್ಲಿಯೇ ಅವರು ಗಾಯಗೊಂಡು ಸಾವನಪ್ಪಿದ್ದಾರೆ.
ಸಂಜೆ 5.30ರಿಂದ 7.30ರ ಅವಧಿಯಲ್ಲಿ ಈ ಅವಘಡ ನಡೆದಿದೆ. ಯತೀನ್ ಮೊಗೇರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ. ಕಾಲು ಜಾರಿ ರೈಲಿನಿಂದ ಬೀಳುವ ಸಾಧ್ಯತೆಗಳು ಹೆಚ್ಚಿನದಾಗಿಲ್ಲ. ಹೀಗಾಗಿ ಅವರ ಜೊತೆಯಿದ್ದವರೇ ರೈಲಿನಿಂದ ದೂಡಿ ಕೊಲೆ ಮಾಡಿರುವ ಅನುಮಾನಗಳಿವೆ. ಮಗನ ಸಾವಿನ ಬಗ್ಗೆ ಲಕ್ಷಣ ನಾರಾಯಣ ಮೊಗೇರ್ ಅವರು ಅನುಮಾನವ್ಯಕ್ತಪಡಿಸಿದ್ದಾರೆ. ಸಾವಿನ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅವರ ಅಳಲು ಆಲಿಸಿದ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.