ಕಾರವಾರದ ಕಿನ್ನರದಲ್ಲಿ ಲೈನ್ಮೆನ್ ಆಗಿದ್ದ ಅಂಕೋಲಾ ಮೊಗಟಾದ ಸುರೇಶ ನಾಯಕ ಅವರಿಗೆ ನಾಗರ ಹಾವು ಕಚ್ಚಿದೆ. ವಿಷ ನೆತ್ತಿಗೆರಿದ ಕಾರಣ ಅವರು ಸಾವನಪ್ಪಿದ್ದಾರೆ.
ಅಂಕೋಲಾ ಮೊಗಟಾದ ಶಾಂತಿಕಾ ಪರಮೇಶ್ವರಿ ದೇಗುಲದ ಬಳಿ ಸುರೇಶ ಗೋವಿಂದರಾಯ ನಾಯಕ ಅವರು ವಾಸವಾಗಿದ್ದರು. 48 ವರ್ಷದ ಅವರು ಕಾರವಾರದ ಕಿನ್ನರದಲ್ಲಿ ಲೈನ್ಮೆನ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದರು. ಪ್ರತಿ ದಿನ ಅವರು ರೈಲಿನ ಮೂಲಕ ಕೆಲಸಕ್ಕೆ ಹೋಗುತ್ತಿದ್ದರು. ಅದರಂತೆ, ಜೂನ್ 20ರಂದು ಸಹ ಅವರು ಅಂಕೋಲಾ ರೈಲು ನಿಲ್ದಾಣದ ಕಡೆ ಹೊರಟಿದ್ದರು.
ನಡೆದು ಹೋಗುತ್ತಿದ್ದ ಅವರು ಅಂಕೋಲಾದ ಬೋಗದ್ದೆ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆ ಕೂತಿದ್ದು, ಆ ವೇಳೆ ಅವರಿಗೆ ನಾಗರ ಹಾವು ಕಚ್ಚಿತು. ಕೈ ಬೆರಳಿಗೆ ಹಾವು ಕಚ್ಚಿದ ಪರಿಣಾಮ ಸುರೇಶ ನಾಯಕ ಅವರು ಅಸ್ವಸ್ಥಗೊಂಡರು. ಅಲ್ಲಿ ನರಳಾಡುತ್ತಿದ್ದ ಅವರನ್ನು ಜನ ಆಸ್ಪತ್ರೆಗೆ ಸೇರಿಸಿದರು. ಆದರೆ, ಆಸ್ಪತ್ರೆ ಸೇರುವುದರೊಳಗೆ ಅವರು ಸಾವನಪ್ಪಿದ್ದರು. 10.45ಕ್ಕೆ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಅವರನ್ನು ಕರೆ ತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಸಾವಿನ ಘೋಷಣೆ ಮಾಡಿದರು.
ಚಿಕ್ಕಪ್ಪನ ಸಾವಿನ ಬಗ್ಗೆ ಎಂ ಜಿ ಗೋಕುಲ ಗೌರೀಶ ನಾಯಕ ಅವರು ಪೊಲೀಸ್ ದೂರು ನೀಡಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರು ಶವಪಡೆದಿದ್ದಾರೆ.