10ನೇ ತರಗತಿಯವರೆಗೆ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದಿದ ಯಲ್ಲಾಪುರದ ನಂದೂಳ್ಳಿಯ ಶಶಾಂಕ ಗೌಡ ಅವರು ಡಾಕ್ಟರ್ ಆಗಿದ್ದಾರೆ. MBBS ಪೂರ್ಣಗೊಳಿಸಿ ವೈದ್ಯಕೀಯ ಸೇವೆಗೆ ಅವರು ಸಜ್ಜಾಗಿರುವ ಅವರು ಬಡತನ, ಸರ್ಕಾರಿ ಶಾಲೆ, ಕನ್ನಡ ಕಲಿಕೆ, ಕಷ್ಟದ ಜೀವನ ಎಂಬುವುದನ್ನೆಲ್ಲ ಮೀರಿ ಸಾಧನೆ ಮಾಡಿದ್ದಾರೆ.
ADVERTISEMENT
ನಂದೊಳ್ಳಿಯ ಜನತಾ ಕಾಲೋನಿಯಲ್ಲಿ ಶಾಂತರಾಮ ಗೌಡ ಅವರು ವಾಸವಾಗಿದ್ದರು. ರಿಕ್ಷಾ ಓಡಿಸಿ ಅವರು ತಮ್ಮ ಕುಟುಂಬ ನಡೆಸುತ್ತಿದ್ದರು. `ಮಗನನ್ನು ಡಾಕ್ಟರ್ ಮಾಡಬೇಕು’ ಎಂದು ಶಾಂತರಾಮ ಗೌಡ ಅವರು ಕನಸು ಕಂಡಿದ್ದರು. ಆದರೆ, ಎರಡು ವರ್ಷದ ಹಿಂದೆ ಶಾಂತರಾಮ ಗೌಡ ಅವರು ಹೃದಯಘಾತದಿಂದ ಸಾವನಪ್ಪಿದರು. ಕುಟುಂಬಕ್ಕೆ ಆಧಾರವಾಗಿದ್ದ ಶಾಂತರಾಮ ಗೌಡ ಅವರು ನಿಧನರಾದಾಗ ಅವರ ಪುತ್ರ ಶಶಾಂಕ ಗೌಡ ಅವರಿಗೆ 22 ವರ್ಷ. ವೈದ್ಯಕೀಯ ಸೇವೆಯ ಕನಸು ಕಟ್ಟಿಕೊಂಡು ಓದುತ್ತಿದ್ದ ಶಶಾಂಕ ಗೌಡ ಅವರು ಓದಿಗೆ ವಿರಾಮ ಹೇಳಿ ಮರಳಿ ಮನೆ ಸೇರುವ ಪರಿಸ್ಥಿತಿ ಎದುರಾಗಿತ್ತು. ಕೈ-ಕಾಲು ಆಡದ ಸ್ಥಿತಿಯಲ್ಲಿಯೂ ಶಶಾಂಕ ಗೌಡ ಅವರು ತಂದೆಯ ಕನಸು ಈಡೇರಿಸುವ ನಿರ್ಧಾರ ಮಾಡಿದರು. ನಿರಂತರ ಅಭ್ಯಾಸದ ಪರಿಣಾಮವಾಗಿ ಅವರು 24ನೇ ವಯಸ್ಸಿಗೆ ಎಂ ಬಿ ಬಿ ಎಸ್ ಪೂರ್ಣಗೊಳಿಸಿದರು.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಶಶಾಂಕ ಗೌಡ ಅವರ ಮನೆಯಲ್ಲಿ ಮೊದಲಿನಿಂದಲೂ ಬಡತನವಿತ್ತು. ಅವರ ತಂದೆ ಖರೀದಿಸಿದ ರಿಕ್ಷಾದಲ್ಲಿಯೇ ಇಡೀ ಕುಟುಂಬ ನಡೆಯಬೇಕಿತ್ತು. ಬಂದ ಆದಾಯದಲ್ಲಿಯೇ ಅಲ್ಪ ಉಳಿಸುತ್ತಿದ್ದ ಶಾಂತರಾಮ ಗೌಡ ಅವರು ತಮ್ಮ ಮಗ ಶಶಾಂಕ ಗೌಡ ಅವರನ್ನು ಮೊದಲು ನಂದೂಳ್ಳಿಯ ಕನ್ನಡ ಶಾಲೆಗೆ ಸೇರಿಸಿದ್ದರು. ಹೈಸ್ಕೂಲ್ ವಿದ್ಯಾಬ್ಯಾಸವನ್ನು ಸಹ ಅದೇ ಊರಿನಲ್ಲಿ ಕೊಡಿಸಿದ್ದರು. ಅದಾದ ನಂತರ YTSS ಪಿಯು ವಿಜ್ಞಾನ ವಿಭಾಗ ಆಯ್ದುಕೊಂಡರು. ಅದಾದ ನಂತರ ನೀಟ್ ಪರೀಕ್ಷೆ ಬರೆದು ಬೆಂಗಳೂರಿನ ವೈದೇಹಿ ಇನ್ಸುಟುOಟ್ ಆಪ್ ಮೆಡಿಕಲ್ ಕಾಲೇಜಿಗೆ ಪ್ರವೇಶಪಡೆದರು. ಅಲ್ಲಿ ಅವರು ಪೂರ್ಣಗೊಳಿಸಿದರು. ಸದ್ಯ ಅವರು ತರಬೇತಿಯಲ್ಲಿ ನಿರತರಾಗಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ಶಶಾಂಕ ಗೌಡ ಅವರು ಬೇರೆ ಊರಿಗೆ ತೆರಳಿದ್ದು, ತಂದೆ ತೀರಿಕೊಂಡ ದುಖಃದಲ್ಲಿಯೂ ಅವರು ಪರೀಕ್ಷೆ ಎದುರಿಸಿದರು. ಅದೆಲ್ಲದರ ಪರಿಣಾಮವಾಗಿ ಶಶಾಂಕ ಗೌಡ ಅವರು 24ನೇ ವಯಸ್ಸಿನಲ್ಲಿಯೇ ಡಾಕ್ಟರ್ ಆಗಿದ್ದಾರೆ.
ನಂದೂಳ್ಳಿ ಜನತಾ ಕಾಲೋನಿಯ ಮೊದಲ ಡಾಕ್ಟರ್ ಆಗಿ ಶಶಾಂಕ ಗೌಡ ಅವರು ಹೊರಹೊಮ್ಮಿದ್ದಾರೆ. ಅವರ ಸಾಧನೆ ಹಿಂದೆ ಕುಟುಂಬದ ತ್ಯಾಗ, ಪರಿಶ್ರಮ ಮತ್ತು ಶಶಾಂಕ್ ಅವರ ನಿರಂತರ ಪ್ರಯತ್ನ ಅಡಗಿದೆ.