ಶಿರಸಿ ಗೌಡಳ್ಳಿಯ ಖಾಲಿದ್ ಸಾಬ್ ಅವರು ಮಹಿಳೆಯೊಬ್ಬರ ಅಂಗಾಗ ಸ್ಪರ್ಶಿಸಿದ್ದಾರೆ. ಅದಾದ ನಂತರ `ನೀನೇ ಬೇಕು’ ಎಂದು ಗಲಾಟೆ ಮಾಡಿದ್ದಾರೆ. ಮಹಿಳೆ ಓಡಿ ಹೋಗಿ ತಪ್ಪಿಸಿಕೊಂಡರೂ ಬಿಡದೇ ಬೆದರಿಕೆ ಹಾಕಿದ್ದಾರೆ.
ADVERTISEMENT
ಶಿರಸಿ ಇಸಳೂರು ಬಳಿಯ ಗೌಡಳ್ಳಿಯ ಖಾಲಿದ್ ರೆಹೆಮಾನ್ ಅಬ್ದುಲ್ ಗಫರ್ ಸಾಬ್ ಅವರು ಮನೆಗಳ ಬಾಗಿಲು ರಿಪೇರಿ ಮಾಡುವ ಕೆಲಸ ಮಾಡಿಕೊಂಡಿದ್ದಾರೆ. ಮೇ 30ರಂದು ಅವರು ಮರಾಠಿಕೊಪ್ಪದ ಮನೆಯೊಂದಕ್ಕೆ ಹೋಗಿದ್ದಾರೆ. ಈ ಮೊದಲು ಗೌಡಳ್ಳಿಯಲ್ಲಿ ವಾಸವಾಗಿದ್ದ ಕುಟುಂಬ ಇದೀಗ ಮರಾಠಿಕೊಪ್ಪದ ವಿದ್ಯಾನಗರದ ಬಳಿ ವಾಸವಾಗಿದ್ದು, ಅವರ ಮನೆ ಬಾಗಿಲಿಗೆ ಪಾಲೀಶ್ ಹಾಕುವುದಕ್ಕಾಗಿ ಖಾಲಿದ್ ಸಾಬ್ ಅವರು ಹೇಳಿದ್ದಾರೆ. ಆಗ, ಮಹಿಳೆ ಮನೆಯಲ್ಲಿ ಇನ್ನಿತರರು ಇದ್ದ ಕಾರಣ `ನಂತರ ಬರುವೆ’ ಎಂದು ಅಲ್ಲಿಂದ ಹೊರಟಿದ್ದಾರೆ.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಆ ದಿನ ಮಧ್ಯಾಹ್ನ 3 ಗಂಟೆ ವೇಳೆಗೆ ಮತ್ತೆ ಆ ಮನೆಗೆ ಬಂದ ಖಾಲಿದ್ ರೆಹೆಮಾನ್ ಅಬ್ದುಲ್ ಗಫರ್ ಸಾಬ್ ಅವರು ಮನೆಯಲ್ಲಿ ಒಂಟಿ ಮಹಿಳೆಯಿರುವುದನ್ನು ನೋಡಿದ್ದಾರೆ. ಬಾಗಿಲಿಗೆ ಪಾಲೀಶ್ ಹಾಕುವ ಕೆಲಸ ಶುರು ಮಾಡಿದ್ದು, ನಂತರ `ಕುಡಿಯಲು ನೀರು ಬೇಕು’ ಎಂದು ಕೇಳಿದ್ದಾರೆ. ಮನೆಯಲ್ಲಿದ್ದ ಮಹಿಳೆ ಅಡುಗೆ ಮನೆಗೆ ಹೋಗಿ ನೀರು ತಂದು ಕೊಟ್ಟಿದ್ದು, ನೀರು ಪಡೆಯುವ ಮುನ್ನ ಖಾಲಿದ್ ಸಾಬ್ ಅವರು ಮಹಿಳೆಯ ಎದೆ ಮುಟ್ಟಿದ್ದಾರೆ. ನಂತರ ಮಹಿಳೆಯನ್ನು ಗಟ್ಟಿಯಾಗಿ ಹಿಡಿದು ಚುಂಬಿಸಿದ್ದಾರೆ. ಮಹಿಳೆಗೆ ಕಚ್ಚಿ ಗಾಯಗೊಳಿಸಿದ್ದಾರೆ. ಖಾಲಿದ್ ರೆಹೆಮಾನ್ ಅಬ್ದುಲ್ ಗಫರ್ ಸಾಬ್ ಅವರಿಂದ ತಪ್ಪಿಸಿಕೊಂಡ ಮಹಿಳೆ ಮನೆಯ ಬೆಡ್ ರೂಮಿನ ಕಡೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.
ಅದಾದ ನಂತರ `ನನಗೆ ನೀನು ಬೇಕು’ ಎಂದು ಖಾಲಿದ್ ರೆಹೆಮಾನ್ ಅಬ್ದುಲ್ ಗಫರ್ ಸಾಬ್ ಕೂಗಿದ್ದಾರೆ. `ನಿನ್ನ ಅನುಭವಿಸದೇ ಬಿಡುವುದಿಲ್ಲ’ ಎಂದು ಸಹ ಹೇಳಿದ್ದಾರೆ. ಇದರಿಂದ ಕಂಗಾಲಾದ ಮಹಿಳೆ ಬೆಡ್ ರೂಮಿನಲ್ಲಿಯೇ ದಿನ ಕಳೆದಿದ್ದು, ಸಂಜೆ ಪತಿ ಮನೆಗೆ ಬಂದ ನಂತರ ನಡೆದ ಎಲ್ಲಾ ವಿಷಯ ಹೇಳಿದ್ದಾರೆ. ಈ ವಿಷಯ ಜಮಾತ್’ಗೆ ತಿಳಿಸಲು ಕುಟುಂಬದವರು ನಿರ್ಧರಿಸಿದ್ದು, ಅದೇ ದಿನ ರಾತ್ರಿ ಖಾಲಿದ್ ಸಾಬ್ ಅವರ ಅಣ್ಣ ಅಬ್ದುಲ್ ರಫೀಕ್ ಗಫರ್ ಸಾಬ್ ಅವರು ಅಲ್ಲಿಗೆ ಆಗಮಿಸಿ `ಜಮಾತ್ ಸಹ ನಮಗೆ ಏನೂ ಮಾಡಲು ಆಗುವುದಿಲ್ಲ’ ಎಂದು ಬೆದರಿಸಿದ್ದಾರೆ.
`ಈ ವಿಷಯ ಎಲ್ಲಾದರೂ ಹೇಳಿದರೆ ನಿನ್ನ ಮರ್ಯಾದೆ ಹೋಗುತ್ತದೆ. ನಮಗೆ ರಾಜಕೀಯ ಬೆಂಬಲವಿದೆ. ನಿಮ್ಮಿಂದ ಏನೂ ಮಾಡಲಾಗುವುದಿಲ್ಲ’ ಎಂದು ಅಣ್ಣ-ತಮ್ಮ ಸೇರಿ ಹೆದರಿಸಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಮಹಿಳೆ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ಸತ್ಯಾಸತ್ಯತೆಯ ಶೋಧ ನಡೆಸಿದ್ದಾರೆ.