ಅoಕೋಲಾದ ಬಾಳೆಗುಳಿ ಕ್ರಾಸಿನಲ್ಲಿ ಶಿಪ್ಟ್ ಕಾರು ಹಾಗೂ ಶ್ರೀಕುಮಾರ ಲಾರಿ ನಡುವೆ ಅಪಘಾತವಾಗಿದೆ. ಕಾರಿನಲ್ಲಿದ್ದವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಈ ವೇಳೆ ಅಲ್ಲಿಯೇ ಇದ್ದ ಲಾರಿ ಮಾಲಕರ ಸಂಘದ ಸದಸ್ಯರು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಸೋಮವಾರ ಸಂಜೆ ಗೋವಾ ನೋಂದಣಿಯ ಶಿಪ್ಟ್ ಕಾರು ಅಂಕೋಲಾದಿoದ ಕಾರವಾರ ಕಡೆ ವೇಗವಾಗಿ ಸಂಚರಿಸುತ್ತಿತ್ತು. ಬಾಳೆಗುಳಿ ಬಳಿಯ ಗ್ಯಾರೇಜಿನಲ್ಲಿದ್ದ ಶ್ರೀಕುಮಾರ ಲಾರಿ ಈ ವೇಳೆ ಯಲ್ಲಾಪುರದ ಕಡೆ ಸಂಚರಿಸುವ ಸಿದ್ಧತೆ ನಡೆಸಿದ್ದು, ಆ ಕಾರು ಲಾರಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ರಭಸಕ್ಕೆ ಕಾರು ನುಚ್ಚು ನೂರಾಗಿದ್ದು, ಕಾರಿನಲ್ಲಿದ್ದ ಐದು ಜನ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಗಾಯಗೊಂಡವರ ಹೆಸರು-ವಿಳಾಸ ಪತ್ತೆಯಾಗಲಿಲ್ಲ.
ಈ ವೇಳೆ ಅಲ್ಲಿದ್ದ ಜನ ಆಂಬುಲೆನ್ಸಿಗೆ ಫೋನ್ ಮಾಡಿದರು. ಈ ವೇಳೆ ಲಾರಿ ಮಾಲಕರ ಸಂಘದ ಜಿಲ್ಲಾಧ್ಯಕ್ಷ ವಿಶ್ವಜಿತ್ ನಾಯಕ ಅವರು ಅಲ್ಲಿಗೆ ಆಗಮಿಸಿದ್ದು, ಆಂಬುಲೆನ್ಸ ಬರಲು ತಡವಾಗುವುದನ್ನು ಅರಿತು ಬುಲೇರೋ ಜೀಪಿನ ಮೂಲಕ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರು. ಸಾವು-ಬದುಕಿನ ನಡುವೆ ಹೋರಾಟುತ್ತಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ವಿಶ್ವಜಿತ್ ನಾಯಕ ಅವರ ಜೊತೆಗಿದ್ದ ಯಲ್ಲಾಪುರ ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಜಯ ಮರಾಠ, ಬ್ರೀಜೇಶ್ ನಾಯಕ ಅವರ್ಸಾ, ಗೋಪೇಶ ನಾಯಕ ಅವರ್ಸ, ರೋಷನ್ ಡಯಸ್ ಅವರು ಸಹಕರಿಸಿದರು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಗಾಯಾಳುವನ್ನು ಆದಿತ್ಯ ಕಲ್ಗುಟ್ಕರ್ ಅವರು ತಮ್ಮ ಜೀಪಿನಲ್ಲಿ ಆಸ್ಪತ್ರೆಯವರೆಗೆ ಸಾಗಿಸಿದರು.