ಬೆಂಗಳೂರಿನಿoದ ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಇಬ್ಬರು ಅಲ್ಲಿನ ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಜೀವರಕ್ಷಕ ಸಿಬ್ಬಂದಿ ತಮ್ಮ ಜೀವದ ಹಂಗು ಮರೆತು ಅವರಿಬ್ಬರನ್ನು ರಕ್ಷಿಸಿದ್ದಾರೆ.
ಬೆಂಗಳೂರಿನ ನೌಕರರ ಸೊಸೈಟಿಯ 9 ಜನ ಮಂಗಳವಾರ ಗೋಕರ್ಣಕ್ಕೆ ಬಂದಿದ್ದರು. ಎಲ್ಲಾ ಕಡೆ ಸುತ್ತಾಡಿ ಸಂಜೆ ಸಮುದ್ರಕ್ಕೆ ಇಳಿದಿದ್ದರು. ಆಗ, ನಾಗೇಶ ಸುಬ್ರಹ್ಮಣ್ಯ (31) ಹಾಗೂ ಗಣೇಶ ಕೃಷ್ಣಪ್ಪ (32) ಎಂಬಾತರು ನೀರಿನಲ್ಲಿ ಕೊಚ್ಚಿ ಹೋದರು. ಅಲ್ಲಿಯೇ ಇದ್ದ ನಾಗೇಂದ್ರ ಕುರ್ಲೆ ಹಾಗೂ ಮಂಜುನಾಥ ಹರಿಕಾಂತ ಸೇರಿ ಅವರನ್ನು ದಡಕ್ಕೆ ತಂದರು.
ಪ್ರವಾಸಿ ಮಿತ್ರ ಶೇಖರ ಹರಿಕಾಂತ ಜೊತೆ ಗೋಕರ್ಣ ಮೈ ಸ್ಟಿಕ್ ಅಡ್ವೆಂರ್ಸ ಸಿಬ್ಬಂದಿ ಸಹ ಈ ಕಾರ್ಯಾಚರಣೆಗೆ ಕೈ ಜೋಡಿಸಿದರು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದಿದ್ದ ಪ್ರವಾಸಿಗರಿಬ್ಬರೂ ತಮ್ಮ ಜೀವ ಕಾಪಾಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ಕಡಲತೀರದಲ್ಲಿದ್ದ ಜನರು ಈ ಕಾರ್ಯಾಚರಣೆಗೆ ಸಾಕ್ಷಿಯಾದರು.