ಸೋಮವಾರ ಸಂಜೆ ಹಳಿಯಾಳದಲ್ಲಿ ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಡಿಕ್ಕಿಯಾಗಿದ್ದು, ಮಹಿಳೆಯೊಬ್ಬರು ಸಾವನಪ್ಪಿದ್ದಾರೆ.
ಹಳಿಯಾಳದ ಮಲವಡಿ ಗ್ರಾಮದಲ್ಲಿ ಈ ಅವಘಡ ನಡೆದಿದೆ. ದಾಂಡೇಲಿಯ ನವಗ್ರಾಮದ ನಾಗರಾಜ ಶಾಬಣ್ಣ ಕಾಂಬಳೆ ಅವರು ಟಿಪ್ಪರಿನಲ್ಲಿ ಬೂದಿ ಸಾಗಿಸುತ್ತಿದ್ದರು. ಮಲವಡಿಯ ಸುವರ್ಣ ಅಂತ್ರೋಳಕರ (30) ಅವರ ಜೊತೆ ಶೋಭಾ ಮಾರುತಿ ಕಶೀಲಕರ (38) ಮತ್ತು ಅವರಿಬ್ಬರ ಮಕ್ಕಳಾದ ಆರುಶ (5) ಹಾಗೂ ಗೋಕುಳ (3) ಸ್ಕೂಟಿಯಲ್ಲಿ ಸಂಚರಿಸುತ್ತಿದ್ದರು.
ಆ ವೇಳೆ ಟಿಪ್ಪರ್ ಸ್ಕೂಟಿಗೆ ಗುದ್ದಿದ್ದು, ಡಿಕ್ಕಿಯ ರಭಸಕ್ಕೆ ಸುವರ್ಣ ಅಂತ್ರೋಳಕರ ತಲೆಗೆ ಹೋಳಾಯಿತು. ಕೈಗೆ ಸಹ ಗಂಭೀರವಾಗಿ ಗಾಯವಾಯಿತು. ಕಣ್ಣು ಮಿಟುಕಿಸುವಷ್ಟರಲ್ಲಿ ಸುವರ್ಣ ಅಂತ್ರೋಳಕರ್ ಅವರು ಅಲ್ಲಿಯೇ ಸಾವನ್ನಪ್ಪಿದರು. ಅಪಘಾತದ ಪರಿಣಾಮ ಶೋಭಾ ಮತ್ತು ಆರುಶ ಸಹ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅಪಘಾತದ ಸ್ಥಳಕ್ಕೆ ಪೊಲೀಸರ ಆಗಮನವಾಗಿದ್ದು, ಗಾಯಗೊಂಡವರನ್ನು ಸದ್ಯ ಹುಬ್ಬಳ್ಳಿಯ ಆಸ್ಪತ್ರೆಗೆ ಸಾಗಿಸಲಾಗಿದೆ.