ಶಿರಸಿಯಲ್ಲಿ ನ್ಯಾಯ ಕೊಡಿಸಬೇಕಾದ ನ್ಯಾಯವಾದಿಗಳಿಗೆ ಅನ್ಯಾಯವಾದ ಬಗ್ಗೆ ಚರ್ಚೆ ನಡೆದಿದೆ. ಸಂಘಟನೆಯಲ್ಲಿದ್ದವರ ಅಧಿಕಾರ ಅವಧಿ ಮುಗಿದರೂ ಆಗದ ಹೊಸ ನೇಮಕಾತಿ, ಸದಸ್ಯತ್ವ ರದ್ಧತಿಯ ಬಗ್ಗೆ ಪ್ರಶ್ನೆ ಸೇರಿ ವಿವಿಧ ಕಾರಣಗಳಿಂದ ವಿವಾದ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ಕೆಲವರ ನಡುವೆ ಹೊಡೆದಾಟವಾಗಿದ್ದು, ಎಲ್ಲವೂ ಗಪ್-ಚುಪ್ ಆಗಿದೆ.
ಸಭೆಯೊಂದರಲ್ಲಿ ನಡೆದ ವಾದ ವಿವಾದದ ಸ್ವರೂಪಪಡೆದಿದ್ದು, ಈ ಬಗ್ಗೆ ಸಭೆಯಲ್ಲಿದ್ದವರನ್ನು ಹೊರತುಪಡಿಸಿ ಯಾರಿಗೂ ಸ್ಪಷ್ಟ ಚಿತ್ರಣವಿಲ್ಲ. ಅದಾಗಿಯೂ ಲಭ್ಯ ಮಾಹಿತಿಗಳ ಪ್ರಕಾರ, ನವೆಂಬರ್ 15ರಂದು ಈ ಗಲಾಟೆ ನಡೆದಿದೆ. ಸಭೆ ನಡುವೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ತಿರುಗಿದ್ದು ಹೊಡೆದಾಟದ ಸ್ವರೂಪಪಡೆದಿದೆ. ಈ ವಿಷಯವಾಗಿ ನೊಂದವರು ದೂರು ನೀಡಿದ್ದು, ಪೊಲೀಸರು ಪ್ರಕರಣದಲ್ಲಿ ಪ್ರವೇಶಿಸಿದ್ದಾರೆ.
ಈ ಘಟನಾವಳಿಗಳು ಕೆಲವರ ನಡುವಿನ ಆಂತರಿಕ ವಿಷಯ, ಸಂಘಟನೆಯ ಒಳ ವಿಚಾರದ ಬಗ್ಗೆ ಸುತ್ತುವರೆದಿದೆ. ಅವಧಿ ಮುಗಿದರೂ ಹುದ್ದೆಯಲ್ಲಿದ್ದವರ ಬದಲಾವಣೆ ಆಗದಿರುವುದು, ಆ ಹುದ್ದೆಗೆ ಬೇರೆ ಬೇರೆ ಆಕಾಂಕ್ಷಿಗಳಿರುವುದು ಹಾಗೂ ಸಂಘದಲ್ಲಿ ಕೆಲವರ ಸದಸ್ಯತ್ವ ರದ್ಧಾಗಿರುವುದು ಸೇರಿ ಅನೇಕ ಕಾರಣಗಳಿಂದ ಈ ಕಲಹ ಸೃಷ್ಠಿಯಾಗಿದೆ.
ಜಾತಿ ನಿಂದನೆ, ಹಲ್ಲೆ ಹಾಗೂ ಮಹಿಳೆಯ ಮೈ ಮುಟ್ಟಿದ ಬಗ್ಗೆ ದೂರುಗಳಿವೆ. ಎಲ್ಲರನ್ನು ಕೂತು ಮಾತನಾಡಿಸಿದರೆ ಭವಿಷ್ಯದಲ್ಲಿ ಬಗೆಹರಿಸುವ ಸಾಧ್ಯತೆಗಳು ಇವೆ. ಹೀಗಾಗಿ ಈ ವಿಷಯದ ಬಗ್ಗೆ ಅರಿವಿದ್ದವರು ಸಹ `ಊರ ಉಸಾಬರಿ ನಮಗೇತಕೆ?’ ಎಂದು ಮೌನವಾಗಿದ್ದಾರೆ. `ಎಲ್ಲವರೂ ತಮ್ಮವೇ ಆಗಿರುವಾಗ ತಪ್ಪು ಯಾರದ್ದು? ಎಂದು ಹೇಳುವುದು ಕಷ್ಟ’ ಎಂಬ ನಿಲುವನ್ನು ಹಿರಿಯರು ಹೊಂದಿದ್ದಾರೆ.
`ಅದು ಹಾಗಂತೆ.. ಇದು ಹೀಗಂತೆ’ ಎಂಬ ಊಹಾಪೋಹಗಳು ಅಂದಿನಿ0ದಲೂ ಹಬ್ಬುತ್ತಲೇ ಇದ್ದು, ನಿವಾಗಿಯೂ ನಡೆದಿದ್ದು ಏನು? ಎನ್ನುವುದನ್ನು ಸಂಬoಧಿಸಿದವರೇ ಬಹಿರಂಗಪಡಿಸಿಬೇಕಿದೆ. ಸಾಮಾನ್ಯ ಜನರಿಗೆ ಸತ್ಯದ ಅರಿವಾಗದ ಕಾರಣ ಜಾಲತಾಣದ ಜೊತೆ ಊರು-ಕೇರಿಯಲ್ಲಿಯೂ ಒಂದಷ್ಟು ರೆಕ್ಕೆ-ಪುಕ್ಕದ ಜೊತೆ ಈ ವಿಷಯ ಹರಿದಾಡುತ್ತಿದೆ.