ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಅರಣ್ಯವಾಸಿಗಳ ಅಳಲಿನ ಬಗ್ಗೆ ಪ್ರಸ್ತಾಪಿಸಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರಾದ ಎಚ್ ಕೆ ಪಾಟೀಲ್ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.
ಪಂಚಾಯತ್ ರಾಜ್ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಡಿ ಆರ್ ಪಾಟೀಲ್ ಅವರ ಜೊತೆಗೂಡಿ ರವೀಂದ್ರ ನಾಯ್ಕ ಅವರು ಎಚ್ ಕೆ ಪಾಟೀಲ ಅವರನ್ನು ಭೇಟಿ ಮಾಡಿದರು. `ಬೆಳಗಾವಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಅರಣ್ಯವಾಸಿಗಳ ಪರ ನಿಲುವು ಪಡೆಯುವ ಉದ್ದೇಶದಿಂದ ವಿಶೇಷ ಕಲಾಪದ ಅವಧಿಯನ್ನ ನಿಗಧಿಗೊಳಿಸಬೇಕು’ ಎಂದವರು ಆಗ್ರಹಿಸಿದರು. ವಿವಿಧ ಅಂಕಿ-ಸoಖ್ಯೆಗಳ ಮೂಲಕ ಜಿಲ್ಲೆಯ ಜನ ತಮ್ಮ ಹಕ್ಕಿನಿ ನಿರೀಕ್ಷೆಯಲ್ಲಿರುವ ವಿಷಯ ಪ್ರಸ್ತಾಪಿಸಿದರು. ಕಾನೂನಿನಲ್ಲಿರುವ ಗೊಂದಲಗಳ ಬಗ್ಗೆಯೂ ವಿವರಿಸಿದರು.
`ಅರಣ್ಯ ಹಕ್ಕು ಕಾಯಿದೆ ಅನುಮೊದನೆಗೊಂಡು 20 ವರ್ಷ ಕಳೆದಿವೆ. ಕಾನೂನು ಅನುಷ್ಠಾನದಲ್ಲಿ ಗೊಂದಲ, ಸ್ಪಷ್ಟತೆ ಇಲ್ಲದ ಮಂಜೂರಿ ಪ್ರಕ್ರಿಯೆ, ಅರಣ್ಯವಾಸಿಗಳಿಗೆ ಪೂರ್ಣ ಪ್ರಮಾಣದ ಕಾನೂನು ಕೊರತೆ, ಆಡಳಿತಾತ್ಮಕ ವ್ಯವಸ್ಥೆಗೆ ಇಚ್ಚಾಶಕ್ತಿ ಇಲ್ಲದಿರುವ ಕಾರಣ ಅರ್ಜಿ ತಿರಸ್ಕಾರವಾಗುತ್ತಿದೆ. ಈವರೆಗೆ ಶೇ 5.2ರಷ್ಟು ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರೆತಿದೆ. ಈ ಎಲ್ಲಾ ಅಂಶಗಳು ಅಧಿವೇಶನದಲ್ಲಿ ಚರ್ಚೆಗೆ ಬರಬೇಕು’ ಎಂದು ಒತ್ತಾಯಿಸಿದರು.