ಮುಂಡಗೋಡಿನ ಮಾರಿಕಾಂಬಾ ಪೆಟ್ರೋಲ್ ಬಂಕಿನಲ್ಲಿ ಮಾರಾಮಾರಿ ನಡೆದಿದೆ. ಅಲ್ಲಿ ಕೆಲಸ ಮಾಡುವ ಹೇಮಂತ ಭೋವಿ ಅವರ ಮೇಲೆ ಏಳು ಜನ ಒಟ್ಟಿಗೆ ಆಕ್ರಮಣ ಮಾಡಿದ್ದಾರೆ.
Advertisement. Scroll to continue reading.
ಮುಂಡಗೋಡದ ಭಾರತ ನಗರದಲ್ಲಿ ಹೇಮಂತ ಭೋವಿ ಅವರು ವಾಸವಾಗಿದ್ದಾರೆ. ಶಿರಸಿ ರಸ್ತೆಯಲ್ಲಿರುವ ಮಾರಿಕಾಂಬಾ ಪೆಟ್ರೋಲ್ ಬಂಕ್ ಸಿಬ್ಬಂದಿಯಾಗಿ ಅವರು ಜೀವನ ನಡೆಸುತ್ತಿದ್ದಾರೆ. ನವೆಂಬರ್ 18ರಂದು ಚವಡಳ್ಳಿಯ ಏಳು ಜನ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ. ಹೇಮಂತ ಭೋವಿ ಅವರ ಮೇಲೆ ಹಲ್ಲೆ ನಡೆಸಿದ ಅವರು ಜಾತಿ ನಿಂದನೆ ಮಾಡಿ ಬೆದರಿಕೆ ಒಡ್ಡಿದ್ದಾರೆ.
ಪೆಟ್ರೋಲ್ ಬಂಕಿಗೆ ಬಂದ ಅರ್ಜುನ ಜೊತೆಪ್ಪನವರ್ ಅವರು ಮಧ್ಯಾಹ್ನ ಹೇಮಂತ ಭೋವಿ ಅವರ ಜೊತೆ ಮೊದಲು ಜಗಳು ಶುರು ಮಾಡಿದ್ದಾರೆ. ನಂತರ ಅರ್ಜುನ ಜೊತೆಪ್ಪನವರ್ ಅವರು `ನಿನ್ನ ನಂತರ ನೋಡಿಕೊಳ್ಳುವೆ’ ಎಂದು ಹೆದರಿಸಿ ಅಲ್ಲಿಂದ ಹೋಗಿದ್ದಾರೆ. ಅದಾದ ನಂತರ ರಾತ್ರಿ ಮತ್ತೆ ಅರ್ಜುನ ಜೊತೆಪ್ಪನವರ್ ಅವರು ಪೆಟ್ರೋಲ್ ಬಂಕಿಗೆ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಅರ್ಜುನ ಅವರ ಜೊತೆ ಚವಡಳ್ಳಿ ಗ್ರಾಮದ ಪ್ರಜ್ವಲ್, ದರ್ಶನ್, ರಾಹುಲ್, ಲಕ್ಷ್ಮಣ, ಸತೀಶ್ ಹಾಗೂ ರಾಮ ಎಂಬಾತರು ಬಂದಿದ್ದು, ಅವರೆಲ್ಲರೂ ಸೇರಿ ಹೇಮಂತ ಭೋವಿ ಅವರನ್ನು ಥಳಿಸಿದ್ದಾರೆ.
ಪೆಟ್ರೋಲ್ ಹಾಕುತ್ತಿದ್ದ ಹೇಮಂತ್ ಭೋವಿ ಅವರನ್ನು ಆ ಏಳು ಜನ ಅಡ್ಡಗಟ್ಟಿ ಕಾಲಿನಿಂದ ತುಳಿದಿದ್ದಾರೆ. ನಂತರ ಕೈಯಿಂದ ಹೊಡೆದಿದ್ದಾರೆ. `ನಮ್ಮ ಅರ್ಜುನನ ಬಳಿಯೇ ಜಗಳ ಮಾಡುತ್ತೀಯಾ?’ ಎಂದು ಪ್ರಶ್ನಿಸಿ ಇನ್ನಷ್ಟು ಥಳಿಸಿದ್ದಾರೆ. ಜಾತಿ ವಿಷಯವಾಗಿಯೂ ನಿಂದಿಸಿ ಬೈದಿದ್ದಾರೆ. ಜೊತೆಗೆ ಎಲ್ಲರೂ ಸೇರಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಈ ಎಲ್ಲಾ ವಿಷಯವನ್ನು ಹೇಮಂತ ಭೋವಿ ಅವರು ಪೊಲೀಸರಿಗೆ ಹೇಳಿದ್ದು, ಪೊಲೀಸರು ಪ್ರಕರಣದ ವಿಚಾರಣೆ ಶುರು ಮಾಡಿದ್ದಾರೆ.