ಬಾವಿ ಕಟ್ಟೆಯ ಮೇಲೆ ಕುಳಿತು ಬೀಡಿ ಸೇದುತ್ತಿದ್ದ ಗೌಂಡಿಯೊಬ್ಬರು ಅದೇ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ.
ಕುಮಟಾದ ಹೊನ್ಮಾವ್ ಬ್ರಿಜ್ ಬಳಿ ಬಾಲಚಂದ್ರ ತಿಮ್ಮಪ್ಪ ಗಾವಡಿ (49) ಅವರು ವಾಸವಾಗಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಅವರು ಗೌಂಡಿ ಕೆಲಸ ಮಾಡುವಲ್ಲಿ ಪರಿಣಿತಿಪಡೆದಿದ್ದರು. ತಮ್ಮ ಮನೆಯಿಂದ 200 ಮೀ ದೂರದಲ್ಲಿರುವ ಬಾವಿ ಕಟ್ಟೆ ಮೇಲೆ ಕೂತು ಬೀಡಿ ಸೇದುವುದನ್ನು ಅವರು ರೂಢಿಸಿಕೊಂಡಿದ್ದರು.
ನವೆoಬರ್ 26ರಂದು ರಾತ್ರಿ ಮನೆಯಿಂದ ಹೊರ ಹೋದ ಅವರು ಎಂದಿನoತೆ ಪೋರ್ಸ ಮೋಟಾರ್ಸ ಗ್ಯಾರೇಜ್ ಬಳಿ ತೆರಳಿದ್ದರು. ಅಲ್ಲಿದ್ದ ಬಾವಿ ಕಟ್ಟೆ ಮೇಲೆ ಕುಳಿತು ಬೀಡಿಗೆ ಬೆಂಕಿ ಅಂಟಿಸಿದ್ದರು. ಬಾಲಚಂದ್ರ ಗಾವಡಿ ಅವರು ರಾತ್ರಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಅವರ ಅಣ್ಣ ದಾಮೋದರ್ ಗಾವಡಿ ನವೆಂಬರ್ 27ರ ಬೆಳಗ್ಗೆ ಹುಡುಕಾಟ ಶುರು ಮಾಡಿದರು.
ಆಯತಪ್ಪಿ ಬಾವಿಗೆ ಬಿದ್ದಿದ್ದ ಬಾಲಚಂದ್ರ ಗಾವಡಿ ಅವರ ಬಳಿ ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಬಾವಿಯಲ್ಲಿದ್ದ ನೀರು ಕುಡಿದು ಅವರು ಕೊನೆಯುಸಿರೆಳೆದಿದ್ದರು. ಬೆಳಗ್ಗೆ 11 ಗಂಟೆ ಅವಧಿಗೆ ಪೊಲೀಸರು ಬಂದು ಅವರ ಶವವನ್ನು ಮೇಲೆತ್ತಿದರು.