ವೇಗವಾಗಿ ಬಂದ ಟೆಂಪೋ ಟ್ರಾವೆಲರ್ ಒಂದು ಬೈಕು ಹಾಗೂ ಕಾರಿಗೆ ಗುದ್ದಿದ ಪರಿಣಾಮ ಬೈಕಿನಲ್ಲಿ ಹೋಗುತ್ತಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ.
Advertisement. Scroll to continue reading.
ಅಂಕೋಲಾದ ಹಿಲ್ಲೂರಿನ ಹಿಲ್ಲೂರಬೈಲಿನಲ್ಲಿ ರಾಮಕೃಷ್ಣ ಗಣಪತಿ ಹೆಗಡೆ (24)ಅವರು ಕ್ಯಾಟರಿಂಗ್ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ನವೆಂಬರ್ 23ರ ಸಂಜೆ ಅವರು ಹೊಸಕಂಬಿಯಿoದ ಮಾದನಗೇರಿ ಮಾರ್ಗವಾಗಿ ಬೈಕಿನಲ್ಲಿ ಹೋಗುತ್ತಿದ್ದರು. ಆಗ, ಹುಬ್ಬಳ್ಳಿಯ ಪ್ರಜ್ವಲಕುಮಾರ ದೇಸಾಯಿ ಅವರು ಅಂಕೋಲಾ ಹಿಲ್ಲೂರು ಮಾರ್ಗವಾಗಿ ಟೆಂಪೋ ಟ್ರಾವಲರ್ ಓಡಿಸಿಕೊಂಡು ಬಂದರು.
ಬೈಕಿಗೆ ಗುದ್ದಿದ ಆ ಟೆಂಪೋ ಟ್ರಾವೆಲ್ಲರ್ ನಂತರ ಕಾರಿಗೆ ಗುದ್ದಿತು. ಬೈಕ್ ಓಡಿಸುತ್ತಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಪೆಟ್ಟಾಯಿತು. ತಮ್ಮನಿಗೆ ಅಪಘಾತವಾದ ಸುದ್ದಿ ಕೇಳಿದ ಯಲ್ಲಾಪುರ ಆನಗೋಡಿನ ಯಲ್ಲಾರಗದ್ದೆ ಭಾಗ್ಯಲಕ್ಷ್ಮೀ ಮಹೇಶ ಹೆಗಡೆ ಅವರು ಆಸ್ಪತ್ರೆಗೆ ದೌಡಾಯಿಸಿದರು. ಸದ್ಯ ಕುಮಟಾದ ಹೈಟೆಕ್ ಆಸ್ಪತ್ರೆಯಲ್ಲಿ ರಾಮಕೃಷ್ಣ ಹೆಗಡೆ ಅವರು ಚಿಕಿತ್ಸೆಪಡೆಯುತ್ತಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾಗ್ಯಲಕ್ಷ್ಮೀ ಹೆಗಡೆ ಅವರು ಪ್ರಕರಣ ದಾಖಲಿಸಿದರು.