ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಶಿವಾನಂದ ಶೆಟ್ಟಿ ಅವರು `ಶಿಕ್ಷಣ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇಂಜಿನಿಯರ್ ಆಗಿರುವ ಶಿವಾನಂದ ಶೆಟ್ಟಿ ಅವರು ಸ್ವಿಟ್ ಹೊಮ್ ಕನ್ಸಟ್ರಕ್ಸನ್ ಎಂಬ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಅನೇಕ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಮನೆಗಳನ್ನು ನಿರ್ಮಿಸುವ ಗುತ್ತಿಗೆದಾರರಾಗಿಯೂ ಶಿವಾನಂದ ಶೆಟ್ಟಿ ಅವರು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ತಮಗೆ ಸಿಗುವ ಲಾಭದಲ್ಲಿ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆ ಮಾಡುತ್ತಿದ್ದಾರೆ.
ಲಯನ್ಸ ಕ್ಲಬ್ ಸದಸ್ಯರಾಗಿಯೂ ಶಿವಾನಂದ ಶೆಟ್ಟಿ ಅವರು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜೊತೆಗೆ ವಿವಿಧ ಸಂಘ-ಸAಸ್ಥೆಗಳಲ್ಲಿ ಅವರು ಸಕ್ರೀಯವಾಗಿದ್ದಾರೆ. ಅವರ ಈ ಸೇವೆಯನ್ನು ಸ್ಮೀತಾ ಆರ್ ಪ್ರಭು ಫೌಂಡೇಶನ್ ಗುರುತಿಸಿದೆ. ಈ ಪೌಂಡೇಶನ್ ಸಹ ಕಳೆದ ಅನೇಕ ವರ್ಷಗಳಿಂದ ಶೈಕ್ಷಣಿಕ ಸೇವಾ ಮನೋಭಾವನೆ ಹೊಂದಿದವರನ್ನು ಪ್ರೋತ್ಸಾಹಿಸುತ್ತಿದ್ದು, ಈ ವರ್ಷ ಶಿವಾನಂದ ಶೆಟ್ಟಿ ಅವರಿಗೆ `ಶಿಕ್ಷಣ ಸೇವಾ ರತ್ನ’ ಪ್ರಶಸ್ತಿ ನೀಡಲು ನಿರ್ಧರಿಸಿದೆ.
`ಬಡವರ ಮಕ್ಕಳಿಗೆ ಶಿಕ್ಷಣ, ವಿದವೆಯರು, ದುರ್ಬಲರಿಗೆ ನೆರವು ನೀಡುತ್ತಿರುವ ಸ್ಮೀತಾ ಆರ್ ಪ್ರಭು ಫೌಂಡೇಶನ್ ಅಸ್ನೋಟಿಯ ಶಿವಾಜಿ ವಿದ್ಯಾಮಂದರದ ಮೂಲಕ ಈ ಪ್ರಶಸ್ತಿ ನೀಡುತ್ತಿದೆ. ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವವರಿಗೆ ಉತ್ತೇಜನ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶ’ ಎಂದು ಆಯ್ಕೆ ಸಮಿತಿಯ ಸಂಚಾಲಕರಾದ ಆರ್ ಜಿ ಪ್ರಭು ಅವರು ತಿಳಿಸಿದರು.