ಸೊಸೈಟಿಯಲ್ಲಿನ ಬೆಳೆ ಸಾಲ ಹಾಗೂ ಇನ್ನಿತರ ಕಡೆಗಳಲ್ಲಿನ ಸಾಲದ ಹೊರೆ ಹೋರಲಾಗದ ಮುಂಡಗೋಡಿನ ಖೇಮಣ್ಣ ಲಮಾಣಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಆತ್ಮಹತ್ಯೆ ನಂತರ ಆ ಸಾಲ ತೀರಿಸುವ ಜವಾಬ್ದಾರಿ ಕುಟುಂಬದವರಿಗೆ ಬಂದಿದ್ದು, ತಂದೆ ಸಾವಿನ ನೋವಿನಲ್ಲಿರುವ ಆನಂದ ಲಮಾಣಿ ಅವರು ಇನ್ನಷ್ಟು ಹೈರಣಾಗಿದ್ದಾರೆ.
ಮುಂಡಗೋಡದ ಲಮಾಣಿತಾಂಡಾದಲ್ಲಿ ಖೇಮಣ್ಣ ಠಾಕರಪ್ಪ ಲಮಾಣಿ (55) ಅವರು ವಾಸವಾಗಿದ್ದರು. ಗದ್ದೆಯಲ್ಲಿ ಉಳುಮೆ ಮಾಡುವುದಕ್ಕಾಗಿ ಅವರು ಮುಂಡಗೋಡು ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಬೆಳೆ ಸಾಲ ಮಾಡಿದ್ದರು. ಅದರ ಜೊತೆ ಇನ್ನಿತರ ಸಂಘ-ಸAಸ್ಥೆಗಳಲ್ಲಿ ಸಾಲ ಮಾಡಿದ್ದು, ಅದನ್ನು ತೀರಿಸಲಾಗದೇ ಸಮಸ್ಯೆಯಲ್ಲಿದ್ದರು.
ಬೆಳೆ ಬೆಳೆಯುವುದಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದರು. ಆದರೆ, ಸರಿಯಾದ ಫಸಲು ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಅವರಿಗೆ ಮಾಡಿದ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲದ ಹೊರೆಯ ತಲೆಬಿಸಿಯಲ್ಲಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಸಾಲ ತೀರಿಸಲಾಗದ ಬೇಸರದಲ್ಲಿಯೇ ಅವರು ನವೆಂಬರ್ 19ರಂದು ನೇಣು ಹಾಕಿಕೊಂಡರು. ಮನೆಯೊಳಗೆ ನೇತಾಡುತ್ತಿದ್ದ ತಂದೆಯನ್ನು ನೋಡಿದ ಆನಂದ ಲಮಾಣಿ ಅವರು ತಕ್ಷಣ ಕೆಳಗಿಳಿಸಿ ಅವರ ಕೈ-ಕಾಲು ತಿಕ್ಕಿದರು. ಆದರೆ, ಅಷ್ಟರೊಳಗೆ ಖೇಮಣ್ಣ ಲಮಾಣಿ ಅವರು ಕೊನೆಯುಸಿರೆಳೆದಿದ್ದರು.
`ಆತ್ಮಹತ್ಯೆ ಅಪರಾಧ’