ಅಪಘಾತದ ನಂತರ ಗಾಯಾಳುವನ್ನು ಚಾಲಕ ಆಸ್ಪತ್ರೆಗೆ ಸಾಗಿಸದೇ ಪರಾರಿಯಾದ ಪರಿಣಾಮ ವ್ಯಕ್ತಿಯೊಬ್ಬರ ಜೀವ ಹೋಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಸುರೇಶ ಗಾಂವ್ಕರ್ ಅವರು ತಡವಾಗಿ ಆಸ್ಪತ್ರೆ ಸೇರಿದ್ದರಿಂದ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಅಂಕೋಲಾದ ಬೇಳಾಬಂದರಿನಲ್ಲಿ ಸುರೇಶ ಹಿರಿಯಾ ಗಾಂವ್ಕರ್ (61) ಅವರು ವಾಸವಾಗಿದ್ದರು. ಡಿಸೆಂಬರ್ 19ರ ಸಂಜೆ 7.20ರ ವೇಳೆಗೆ ಅವರು ತಮ್ಮ ಬೈಕಿನಲ್ಲಿ ಸಂಚಾರ ನಡೆಸಿದ್ದರು. ಕಾರವಾರ-ಅಂಕೋಲಾ ಮಾರ್ಗದಲ್ಲಿ ಸುರೇಶ ಗಾಂವ್ಕರ್ ಅವರು ಹೊರಟಿರುವಾಗ ಹಿಂದಿನಿAದ ಬಂದ ವಾಹನವೊಂದು ಅವರ ಬೈಕಿಗೆ ಗುದ್ದಿತು.
ಬಾಳೆಗುಳಿ ಮೇಲ್ಸೆತುವೆ ಹತ್ತಿರ ಬಿಳಿ ಬಣ್ಣದ ಸಣ್ಣ ವಾಹನ ಗುದ್ದಿದ ರಭಸಕ್ಕೆ ಸುರೇಶ ಗಾಂವ್ಕರ್ ಅವರು ರಸ್ತೆ ಮೇಲೆ ಬಿದ್ದರು. ಅಪಘಾತ ನೋಡಿದ ಬಿಳಿ ವಾಹನದ ಚಾಲಕ ತಕ್ಷಣ ಅಲ್ಲಿಂದ ಪರಾರಿಯಾದರು. ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಆ ಚಾಲಕ ಮಾಡಲಿಲ್ಲ. ಅಪಘಾತದ ಬಗ್ಗೆ ಪೊಲೀಸರಿಗೆ ಸಹ ಮಾಹಿತಿ ಕೊಡಲಿಲ್ಲ.
ಸುರೇಶ ಗಾಂವ್ಕರ್ ಅವರ ತಲೆ, ಕೈ-ಕಾಲಿಗೆ ಗಾಯವಾಗಿ ನರಳಾಡುತ್ತಿದ್ದರು. ಇದನ್ನು ನೋಡಿದ ಕೆಲವರು ಸುರೇಶ ಗಾಂವ್ಕರ್ ಅವರನ್ನು ಅಂಕೋಲಾದ ಆರ್ಯ ಮೆಡಿಕಲ್’ಗೆ ಕಳುಹಿಸಿದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು
ಅದಾದ ನಂತರ ಉಡುಪಿ ಆದರ್ಶ ಆಸ್ಪತ್ರೆ ಕರೆದೊಯ್ಯಲಾಯಿತು.
ಅದಾಗಿಯೂ, ಡಿಸೆಂಬರ್ 20ರಂದು ಅವರು ಸಾವನಪ್ಪಿದರು. ಐ ಆರ್ ಬಿಯಲ್ಲಿ ಕೆಲಸ ಮಾಡುವ ಅವರ್ಸಾ ಸಕಲಬೇಣದ ನವೀನ ಪಡ್ತಿ ಅವರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸುರೇಶ ಗಾಂವ್ಕರ್ ಅವರು ಸಾವನಪ್ಪಿದ ಬಗ್ಗೆ ಆದರ್ಶ ಆಸ್ಪತ್ರೆಯವರು ತಿಳಿಸಿದರು.
`ಅಪಘಾತದ ನಂತರ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವುದೇ ಧರ್ಮ’