ಹೊಟ್ಟೆ ನೋವು ಸಹಿಸಿಕೊಳ್ಳಲು ಆಗದ ಮಹಿಳೆಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಅಗ್ನಿಗೆ ಆಹುತಿಯಾಗಿದ್ದಾರೆ. ಕುಟುಂಬದವರು ನೋಡುವುದರೊಳಗೆ ದೇವಿ ಗೊಂಡ ಅವರು ಬೂದಿಯಾಗಿದ್ದಾರೆ.
ಭಟ್ಕಳದ ತೆಂಗಿನಗುoಡಿ ಬಳಿಯ ಜಟಗೇಶ್ವರ ದೇವಾಲಯ ಸಮೀಪ ದೇವಿ ಕೃಷ್ಣ ಗೊಂಡ (52) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಕುಟುಂಬ ಅದೇ ಆದಾಯದಲ್ಲಿ ಕುಟುಂಬ ನಡೆಸುತ್ತಿದ್ದರು. ಈಚೆಗೆ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಎಲ್ಲಿ ತೋರಿಸಿದರೂ ಗುಣಮುಖವಾಗಿರಲಿಲ್ಲ.
ಅದೇ ನೋವಿನಲ್ಲಿದ್ದ ದೇವಿ ಗೊಂಡ ಅವರು 15 ದಿನದ ಹಿಂದೆಯೇ ಮನೆ ಮುಂದಿನ ಬಾವಿಗೆ ಹಾರಿದ್ದರು. ತಕ್ಷಣ ಕುಟುಂಬದವರು ಅವರನ್ನು ರಕ್ಷಿಸಿ ಜೀವ ಕಾಪಾಡಿದ್ದರು. ಅದಾದ ನಂತರವೂ ದೇವಿ ಗೊಂಡ ಅವರು ವಿವಿಧ ಬಗೆಯ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಅವರ ಹೊಟ್ಟೆ ನೋವು ಮಾತ್ರ ಕಡಿಮೆ ಆಗಿರಲಿಲ್ಲ.
ಡಿಸೆಂಬರ್ 19ರಂದು ಜಟಗೇಶ್ವರ ದೇವಾಲಯ ಹಿಂದೆ ಹೋದ ದೇವಿ ಗೊಂಡ ಅವರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡರು. ಅದಾದ ನಂತರ ಬೆಂಕಿ ಹಚ್ಚಿಕೊಂಡು ನರಳಾಟ ನಡೆಸಿ ಸಾವನಪ್ಪಿದರು. ಅನಪಾಲ್ ಸೂಪರ್ ಮಾರ್ಟನಿಲ್ಲಿ ಕೆಲಸ ಮಾಡುವ ಮಗಳು ಹೇಮಲತ ಗೊಂಡ ಅವರು ಬಂದು ನೋಡುವಷ್ಟರಲ್ಲಿ ದೇವಿ ಗೊಂಡ ಅವರು ಬೂದಿಯಾಗಿದ್ದರು.
`ಆತ್ಮಹತ್ಯೆ ಅಪರಾಧ’