ಪ್ರತಿಷ್ಠಿತ ಪಿಯು ಕಾಲೇಜಿನಲ್ಲಿ ಉನ್ನತ ಹುದ್ದೆ ಗಿಟ್ಟಿಸಿಕೊಂಡಿರುವ ಹನುಂತ ಕುಂಬಾರ ಅವರು ಆ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಮೈ ಮುಟ್ಟುವ ಮೂಲಕ ಕಾಲೇಜಿನ ಪ್ರಾಚಾರ್ಯ ಸ್ಥಾನಕ್ಕೆ ಅವರು ಧಕ್ಕೆ ತಂದಿದ್ದಾರೆ. ಆ ಅಯೋಗ್ಯ ಪ್ರಾಚಾರ್ಯರ ವಿರುದ್ಧ ವಿದ್ಯಾರ್ಥಿಗಳು ಅಸಮಧಾನವ್ಯಕ್ತಪಡಿಸಿದ್ದಾರೆ.
ದಾಂಡೇಲಿಯ ಕನ್ಯಾ ವಿದ್ಯಾಲಯದಲ್ಲಿ ಹನುಮಂತ ಬಿ ಕುಂಬಾರ್ ಅವರು ಪ್ರಾಚಾರ್ಯರಾಗಿದ್ದಾರೆ. 2022ರಲ್ಲಿ ಪ್ರಾಚಾರ್ಯರಾಗಿ ಅಧಿಕಾರವಹಿಸಿಕೊಂಡ ಅವರು ಅಲ್ಲಿ ಉಪನ್ಯಾಸಕಾರಿಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಪಾಠ ಮಾಡುವ ವೇಳೆ ಮಕ್ಕಳ ಮೈ ಮುಟ್ಟುವುದು ಅವರ ಹವ್ಯಾಸ. ಅದರ ಜೊತೆ ಹೆಣ್ಣು ಮಕ್ಕಳನ್ನು ಉದ್ದೇಶಿಸಿ ಅಶ್ಲೀಲ ಶಬ್ದಗಳ ಪ್ರಯೋಗ ಅವರ ಸಂಪ್ರದಾಯ. ತಮ್ಮ ಮಾತು ಒಪ್ಪಿಕೊಳ್ಳದ ವಿದ್ಯಾರ್ಥಿನಿಯರಿಗೆ ನಿಂದಿಸುವುದು ಅವರ ಹುಟ್ಟು ಗುಣ.
ಪ್ರಾಚಾರ್ಯ ಹನುಮಂತ ಬಿ ಕುಂಬಾರ್ ಅವರ ವರ್ತನೆಗೆ ಆ ಕಾಲೇಜಿನ ವಿದ್ಯಾರ್ಥಿನಿಯರು ಬೇಸರಿಸಿದ್ದಾರೆ. ತಮಗಾದ ಹಿಂಸೆ ಬಗ್ಗೆ ಪಾಲಕರಿಗೆ ತಿಳಿಸಿದ್ದು, ಪಾಲಕರು ವಿದ್ಯಾರ್ಥಿಗಳ ಜೊತೆ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಾಚಾರ್ಯರ ವಿರುದ್ಧ ಪಾಲಕರು ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಕಾಲೇಜಿನ ಆಡಳಿತ ಮಂಡಳಿಯವರು ಪ್ರಾಚಾರ್ಯರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ತಮಗಾದ ಕೆಟ್ಟ ಅನುಭವಗಳನ್ನು ಲಿಖಿತವಾಗಿ ತಿಳಿಸಿದ್ದಾರೆ.
ಈ ಎಲ್ಲಾ ಹಿನ್ನಲೆ ದಾಂಡೇಲಿ ವೆಲ್ ಪೆರ್ ಸೊಸೈಟಿಯವರು ಪ್ರಾಚಾರ್ಯ ಹನುಮಂತ ಕುಂಬಾರ್ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಕಾರಣ ಹನುಂತ ಕುಂಬಾರರ ವಿರುದ್ಧ ದಾಂಡೇಲಿ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಪಿಸೈ ಅಮೀನ್ ಅತ್ತಾರ್ ಅವರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ.