ತಗಡು ಹೊದಕೆಯ ಮುರಕಲು ಮನೆ ಅಂಚಿನ ಗೋಣಿಚೀಲದ ತುಂಬ ಶ್ರೀಗಂಧದ ತುಂಡು ಸಿಕ್ಕದೆ. ಪರಶುರಾಮ ಲಮಾಣಿ ಎಂಬಾತರು ಶೇಖರಿಸಿದ್ದ ಶ್ರೀಗಂಧದ ತುಂಡುಗಳನ್ನು ಅರಣ್ಯಾಧಿಕಾರಿಗಳು ಜಪ್ತು ಮಾಡಿದ್ದಾರೆ.
Advertisement. Scroll to continue reading.
ಮುಂಡಗೋಡದ ಅಗಡಿಯಲ್ಲಿ ವಾಸವಾಗಿದ್ದ ಪರಶುರಾಮ ಲಮಾಣಿ ಅವರು ತಮ್ಮ ಮನೆ ಬದಿಗೆ ಚೀಲದಲ್ಲಿ ಶ್ರೀಗಂಧದ ತುಂಡುಗಳನ್ನು ದಾಸ್ತಾನು ಮಾಡಿದ್ದರು. ಆ ಪ್ರಮಾಣದಲ್ಲಿ ಶ್ರೀಗಂಧಹೊAದಲು ಅವರ ಬಳಿ ಅನುಮತಿಯಿರಲಿಲ್ಲ. ಆ ಮರಗಳನ್ನು ಅವರು ಕದ್ದು ತಂದ ಆರೋಪದ ಹಿನ್ನಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದರು.
ಮನೆ ಸುತ್ತ ಶೋಧ ನಡೆಸಿದಾಗ ಅಲ್ಲಿ ಅನುಮಾನಾಸ್ಪದ ಗೋಣಿ ಚೀಲಗಳು ಕಾಣಿಸಿದವು. ಅದರ ಒಳಗೆ ಪರಿಶೀಲಿಸಿದಾಗ ಬರಪೂರ ಮರದ ತುಂಡುಗಳಿದ್ದವು. ಶ್ರೀಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಪರಶುರಾಮ ಆಚಾರಿ ಅವರನ್ನು ವಶಕ್ಕೆಪಡೆಯಲು ಅರಣ್ಯಾಧಿಕಾರಿಗಳು ಮುಂದಾದರು. ಆದರೆ, ಪರಶುರಾಮ ಆಚಾರಿ ಅವರು ಪಕ್ಕದ ಕಬ್ಬಿನಗದ್ದೆಗೆ ಓಡಿ ಹೋಗಿ ಪರಾರಿಯಾದರು.
ಅರಣ್ಯಾಧಿಕಾರಿಗಳು ಬೆನ್ನತ್ತಿದರೂ ಸಹ ಪರಶುರಾಮ ಆಚಾರಿ ಅವರು ಸಿಕ್ಕಿ ಬೀಳಲಿಲ್ಲ. ಹೀಗಾಗಿ ನಾಲ್ಕು ಚೀಲದ ಶ್ರೀಗಂಧದ ತುಂಡುಗಳನ್ನು ಅಧಿಕಾರಿಗಳು ಜಪ್ತು ಮಾಡಿದರು.