ಕಾಲೇಜು ಆಡಳಿತ ಮಂಡಳಿ ಸದಸ್ಯರೊಬ್ಬರು ಪ್ರಾಚಾರ್ಯಯನ್ನು ಮಂಚಕ್ಕೆ ಕರೆದಿದ್ದು, ತಮ್ಮ ಬಯಕೆ ಈಡೇರಿಸಿದರೆ ಉನ್ನತ ಸ್ಥಾನಮಾನ ನೀಡುವ ಆಮೀಷ ಒಡ್ಡಿದ್ದಾರೆ. ಇದಕ್ಕೆ ಆ ಪ್ರಾಚಾರ್ಯೆ ಒಪ್ಪದ ಕಾರಣ ಪ್ರಾಚಾರ್ಯೆಯ ವಿರುದ್ಧ ಅಕ್ರಮ ಸಂಬoಧದ ವದಂತಿ ಹಬ್ಬಿಸಿದ್ದಾರೆ!
ಭಟ್ಕಳದ ಅಂಜುಮಾನ್ ಕಾಲೇಜಿನ ಬಿಎಡ್ ವಿಭಾಗದ ಪ್ರಾಚಾರ್ಯೆ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು ಆಡಳಿತ ಮಂಡಳಿಯ ಮೂವರು ಸದಸ್ಯರಿಂದ ಸಮಸ್ಯೆಗೆ ಸಿಲುಕಿದ್ದಾರೆ. ಮಧೀನಾ ಕಾಲೋನಿಯಲ್ಲಿ ವಾಸವಾಗಿರುವ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು ವಿಚ್ಚೇದಿತರಾಗಿದ್ದು, 2003ರಿಂದ ಅಂಜುಮಾನ್ ಹಮಿ-ಎ-ಮುಸ್ಲಿಮಿನ್ ಟ್ರಸ್ಟಿದಲ್ಲಿ ಸಹಾಯಕ ವಿಜ್ಞಾನ ಶಿಕ್ಷಕಿ ಹಾಗೂ ಸಹಾಯಕ ವಿಜ್ಞಾನ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2016ರಲ್ಲಿ ಅವರು ಬಿಎಡ್ ವಿಭಾಗದ ಪ್ರಾಚಾರ್ಯರಾಗಿದ್ದಾರೆ.
ಅಂಜುಮಾನ್ ಹಮಿ-ಎ-ಮುಸ್ಲೀಂ ಟ್ರಸ್ಟಿನ ಸದಸ್ಯರಾಗಿರುವ ಅಹಿದ್ ಮೊಹ್ತೆಶಾಮ್ ಅವರು ಜಿಕ್ರಿಯಾ ಸುಲ್ತಾನ್ ಹಜಾರಿ ಅವರಿಗೆ ಕಾಡಿಸುತ್ತಿದ್ದಾರೆ. 2024ರಲ್ಲಿ ಅಹಿದ್ ಮೊಹ್ತೆಶಾಮ್ ಅವರು ಬಿಎಡ್ ಕಾಲೇಜಿನ ಕಾರ್ಯದರ್ಶಿಯಾಗಿ ಅಧಿಕಾರವಹಿಸಿಕೊಂಡಿದ್ದು, ಆ ದಿನದಿಂದಲೇ ಜಿಕ್ರಿಯಾ ಸುಲ್ತಾನ್ ಹಜಾರಿ ಅವರಿಗೆ ಸಮಸ್ಯೆ ಶುರುವಾಗಿದೆ. ಅಹಿದ್ ಮೊಹ್ತೆಶಾಮ್ ಅವರು ಕಾಲೇಜು ಕೊಠಡಿಗೆ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಸಹಿಸದ ಜಿಕ್ರಿಯಾ ಸುಲ್ತಾನ್ ಹಜಾರಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ನಿಂದಿಸುತ್ತಿದ್ದಾರೆ. ಬೇರೆ ಪುರುಷರ ಜೊತೆ ಅಕ್ರಮ ಸಂಬoಧದ ವದಂತಿ ಹಬ್ಬಿಸಿ ಜಿಕ್ರಿಯಾ ಸುಲ್ತಾನ್ ಹಜಾರಿ ಅವರ ಮಾನ ಹರಾಜು ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.
ಸಹಕಾರ ನೀಡಿದರೆ ಉದ್ಯೋಗದಲ್ಲಿ ಆದ್ಯತೆಯ ಭರವಸೆ ನೀಡಿದ ಅಹಿದ್ ಮೊಹ್ತೆಶಾಮ್ ಅವರು ತಮ್ಮ ಕುಕೃತ್ಯಕ್ಕೆ ಕಮಿಟಿ ಸದಸ್ಯರಾದ ಸಜ್ಜದ್ ಕೋಲಾ ಹಾಗೂ ಇಸಾಕ್ ಶಬಂದ್ರಿ ಖಾಜಾ ಮಹ್ಮದ್ ಗೌಸ್ ಅವರ ಸಹಕಾರಪಡೆದಿದ್ದಾರೆ. ಈ ಮೂವರು ಸೇರಿ ಹಿಂಸೆ ನೀಡುತ್ತಿರುವ ಬಗ್ಗೆ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾರ್ಚ 9ರಂದು ಕಾಲೇಜಿಗೆ ಬಂದು ಕೈ ಹಿಡಿದು ಎಳೆದಾಡಿದ ಬಗ್ಗೆ ಅವರು ದೂರಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಭಟ್ಕಳ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.