• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi Festival Kageri Meeting in Kumta

ಶಿರಸಿ ಜಾತ್ರೆ: ಕುಮಟಾದಲ್ಲಿ ಕಾಗೇರಿ ಸಭೆ

January 18, 2026
A blessing for the food!

ಅನ್ನ ಭಾಗ್ಯಕ್ಕೆ ಕನ್ನ!

January 18, 2026

ಮದುವೆಗೆ ಬಂದವ ಮೆಸೆಜ್ ಮಾಡಿದ: ಮಹಿಳೆ ಮನಸ್ಸು ನೋಯಿಸಿದ!

January 18, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi Festival Kageri Meeting in Kumta

ಶಿರಸಿ ಜಾತ್ರೆ: ಕುಮಟಾದಲ್ಲಿ ಕಾಗೇರಿ ಸಭೆ

January 18, 2026
A blessing for the food!

ಅನ್ನ ಭಾಗ್ಯಕ್ಕೆ ಕನ್ನ!

January 18, 2026

ಮದುವೆಗೆ ಬಂದವ ಮೆಸೆಜ್ ಮಾಡಿದ: ಮಹಿಳೆ ಮನಸ್ಸು ನೋಯಿಸಿದ!

January 18, 2026
  • Home
  • Janamata
Monday, January 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಧ್ಯಕ್ಷರ ಮೇಲಿನ ಸಿಟ್ಟಿಗೆ ಸಿಬ್ಬಂದಿಗೆ ಹಿಂಸೆ!

Achyutkumar by Achyutkumar
December 18, 2025
President's infidelity Safe Star Society staff have no safety!
Share on FacebookShare on WhatsappShare on Twitter
ADVERTISEMENT

ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಅವರು 25ಕ್ಕೂ ಅಧಿಕ ಜನರ ತಂಡ ಕಟ್ಟಿಕೊಂಡು ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ. ಜಾಗದ ವಿಷಯವಾಗಿ ಗಲಾಟೆ ನಡೆದ ನಂತರ ಜಿ ಜಿ ಶಂಕರ್ ಅವರು ಆ ಕಾರ್ಮಿಕರ ತಂಡಕ್ಕೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದು, ಅದೇ ಸಿಟ್ಟಿಗೆ ಜಾಗದ ಮಾಲಕ ಪೀಟರ್ ಹಾಗೂ ಕಾರ್ಮಿಕ ಜೋಯವಿನ್ ತಂಡದವರು ಸೇಫ್ ಸ್ಟಾರ್ ಸೊಸೈಟಿ ಸಿಬ್ಬಂದಿಗೆ ಬೆದರಿಕೆ ಒಡ್ಡುತ್ತಿದ್ದಾರೆ.

ಜಿ ಜಿ ಶಂಕರ್ ಅವರು ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ತಪ್ಪಿಗೆ ಅವರ ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಷ್ಟ ಅನುಭವಿಸುತ್ತಿದ್ದಾರೆ. ಸೇಫ್ ಸ್ಟಾರ್ ಸೊಸೈಟಿಯ ಉದ್ಯೋಗಿಯಾಗಿರುವ ನಾಗರತ್ನ ಹಳ್ಳೇರ್ ಹಾಗೂ ಶ್ಯಾಮಲಾ ನಾಯ್ಕ ಅವರಿಗೆ ಜೀವ ಬೆದರಿಕೆ ಬಂದಿದೆ. ಅದರಲ್ಲಿಯೂ ಶ್ಯಾಮಲಾ ನಾಯ್ಕ ಅವರಿಗೆ ಅಪರಿಚಿತರು `ಟಿಪ್ಪರ್ ಹಾಯಿಸಿ ಕೊಲೆ ಮಾಡುವೆ‘ ಎಂದು ಹೆದರಿಸಿದ್ದಾರೆ.

ADVERTISEMENT

ಡಿಸೆಂಬರ್ 9ರಂದು ಹೊನ್ನಾವರ ಮಾವಿನಕೂರ್ವಾ ಬಳಿಯ ಮಂಡಲಕೂರ್ವದ ಜೊಯವಿನ್ ಬಸ್ತೇಂವ್ ಮೆಂಡೋನ್ಸಾ ಅವರು ಪೀಟರ್ ಎಂಬಾತರ ಸೂಚನೆ ಮೇರೆಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ಜೊಯವಿನ್ ಅವರ ಜೊತೆ ಅವರ ತಂದೆ ಬಸ್ತೇಂವ್ ಮೆಂಡೋನ್ಸಾ, ಪಾವ್ಲು ಡಿಕೋಸ್ತಾ ಸಹ ಇದ್ದರು. ಅವರೆಲ್ಲರೂ ಸೇರಿ ತಾರಿಬಾಗಿಲ ಬಳಿಯಿರುವ ಚರ್ಚಿನ ಬಳಿ ಅವರು ಕೆಲಸ ಮಾಡುತ್ತಿದ್ದರು. ಅಲ್ಲಿದ್ದ ಖಾಲಿ ಜಾಗವೊಂದನ್ನು ಸ್ವಚ್ಛ ಮಾಡುತ್ತಿರುವಾಗ ಅಲ್ಲಿ ಜಿ ಜಿ ಶಂಕರ್ ಅವರು ಆಗಮಿಸಿದರು. ಜಿ ಜಿ ಶಂಕರ್ ಅವರ ಜೊತೆ ಅಂಗಡಿ ಹಿತ್ತಲದ ಮೋಹನ ತಿಮ್ಮಪ್ಪ ಗೌಡ, ಅರುಣ ಮಂಜುನಾಥ ಗೌಡ, ದುರ್ಗಾಕೇರಿಯ ಕಿರಣ ಆರ್ ಹೊನ್ನಾವರಕರ್, ಹೊಂಡಗದ್ದೆಯ ಸತೀಶ ಗೋವಿಂದ ಗೌಡ ಬಂದಿದ್ದರು. ಕಾರಿನಲ್ಲಿ ಬಂದ ಅವರೆಲ್ಲರೂ ಏಕಾಏಕಿ ಕೆಲಸ ಮಾಡುತ್ತಿದ್ದವರನ್ನು ದಬಾಯಿಸಿದರು. ಸ್ವಚ್ಚತಾ ಕೆಲಸಕ್ಕೆ ಅಡ್ಡಿಪಡಿಸಿದ ಅವರೆಲ್ಲರೂ ಜಿ ಜಿ ಶಂಕರ್ ಅವರ ಜೊತೆಗೂಡಿ ಅಲ್ಲಿದ್ದವರ ಮೇಲೆ ದಾಳಿ ಮಾಡಿದರು.

ADVERTISEMENT

ಅದಾದ ನಂತರ ಜಿ ಜಿ ಶಂಕರ್ ಅವರು ಮತ್ತೆ 25 ಜನರನ್ನು ಫೋನ್ ಮಾಡಿ ಕರೆಯಿಸಿಕೊಂಡರು. ಅವರೆಲ್ಲರೂ ಸೇರಿ ಅಲ್ಲಿದ್ದ ಪಾವ್ಲು ಅವರಿಗೆ ಹೊಡೆಯಲು ಶುರು ಮಾಡಿದರು. ಮೋಹನ ಗೌಡ ಅವರು ಪಾವ್ಲು ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಕಾರಣ ಅವರ ಕತ್ತು ಊದಿಕೊಂಡಿದ್ದು, ಪಾವ್ಲು ಅವರನ್ನು ತಪ್ಪಿಸಲು ಹೋದ ಜೊಯವಿನ್ ಅವರಿಗೂ ಅಲ್ಲಿದ್ದವರು ಥಳಿಸಿದರು. ಕೊನೆಗೆ ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರೂ ಹಾಗೂ ಹೀಗೋ ಮಾಡಿ ತಪ್ಪಿಸಿಕೊಂಡು ಆಸ್ಪತ್ರೆ ಸೇರಿದರು. ನಂತರ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದು, ಬಿಜೆಪಿ ಮುಖಂಡರೂ ಆಗಿರುವ ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಜೊತೆ ಇನ್ನಿತರರ ವಿರುದ್ಧ ದೂರು ಸಲ್ಲಿಸಿದರು. ಅದಾದ ನಂತರ ಜಿ ಜಿ ಶಂಕರ್ ಅವರು ಜೋಯವಿನ್ ಅವರ ಕೈಗೆ ಸಿಗಲಿಲ್ಲ. ಆದರೆ, ನಿತ್ಯವೂ ಕಚೇರಿಗೆ ಬರುತ್ತಿದ್ದ ಸೇಫ್ ಸ್ಟಾರ್ ಸೊಸೈಟಿ ಉದ್ಯೋಗಿಗಳು ಜೋಯವಿನ್ ಕಡೆಯವರ ಕಣ್ಣಿಗೆ ಬಿದ್ದರು. ಜಿ ಜಿ ಶಂಕರ್ ಅವರ ಮೇಲಿನ ಸಿಟ್ಟಿಗೆ ಜೋಯವಿನ್ ಕಡೆಯವರು ಸೇಫ್ ಸ್ಟಾರ್ ಸೊಸೈಟಿ ಸಿಬ್ಬಂದಿಗೆ ಕಾಟ ಕೊಡಲು ಶುರು ಮಾಡಿದರು. ಹೊನ್ನಾವರ ಮೂಡ್ಕಣಿಯ ನಾಗರತ್ನ ಗಣಪತಿ ಹಳ್ಳೇರ್ ಅವರು ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿರುವುದನ್ನು ಅರಿತ ಜೋಯವಿನ್ ಮಂಡೋನ್ಸಾ ಹಾಗೂ ಪೀಟರ್ ಮಂಡೋನ್ಸಾ ಅವರು ನಾಗರತ್ನ ಹಳ್ಳೇರ್ ಅವರನ್ನು ಕಾಡಿಸಿದರು.

ಅನಾರೋಗ್ಯದಿಂದ ಬಳಲುತ್ತಿರುವ ನಾಗರತ್ನ ಅವರಿಗೆ ಅವರಿಬ್ಬರು ಬೆದರಿಕೆ ಒಡ್ಡಿದರು. ನಾಗರತ್ನ ಹಳ್ಳೇರ್ ಅವರು ಸಾಲ ವಸೂಲಿಗಾಗಿ ಪ್ರಭಾತನಗರದ ಅಮೋಘ ಸೇಫ್ ಸ್ಟಾರ್ ಜಂಟಿ ಭದ್ರತಾ ಸಂಘದ ಬಳಿ ಹೊರಟಾಗ ಅವರನ್ನು ಹಿಂಬಾಲಿಸಿದರು. ನಾಗರತ್ನ ಹಳ್ಳೇರ್ ಅವರು ಸಾಲ ವಸೂಲಾತಿ ಮುಗಿಸಿ ಕೆಳಗಿನಪಾಳ್ಯ ಮಜಿರೆಯಲ್ಲಿದ್ದ ಜಿ ಜಿ ಶಂಕರ್ ಅವರನ್ನು ಮಾತನಾಡಿಸಲು ಹೋದಾಗ ಅಲ್ಲಿ ಜಗಳ ಶುರು ಮಾಡಿದರು. ನಾಗರತ್ನ ಹಳ್ಳೇರ್ ಅವರು `ಏಕೆ ಜಗಳ ಮಾಡುತ್ತೀರಿ?’ ಎಂದು ಪ್ರಶ್ನಿಸಿದ ಕಾರಣ ಜೋಯವಿನ್ ಮಂಡೋನ್ಸಾ ಅವರು ಮುಗಿಬಿದ್ದರು. ಪೀಟರ್ ಮಂಡೋನ್ಸಾ ಅವರು ನಾಗರತ್ನ ಅವರ ಕೂದಲು ಹಿಡಿದು ಎಳೆದಾಡಿದರು. ಜನ ಈ ಜಗಳ ತಪ್ಪಿಸಿದರು. ಅದಾದ ನಂತರ ಜೋಯವಿನ್ ಮಂಡೋನ್ಸಾ ಕಡೆಯವರು ಸೇಫ್ ಸ್ಟಾರ್ ಸೊಸೈಟಿಯ ಅಳ್ಳಂಕಿ ಶಾಖೆಯ ಫಿಲ್ಡ್ ಆಫೀಸರ್ ಶ್ಯಾಮಲಾ ಮಂಜುನಾಥ ನಾಯ್ಕ ಅವರನ್ನು ಹಿಂಬಾಲಿಸಿದರು. ಜಲವಳ್ಳಿ ಹಿರೆಹಿತ್ಲದಲ್ಲಿ ವಾಸವಾಗಿರುವ ಶ್ಯಾಮಲಾ ನಾಯ್ಕ ಅವರಿಗೂ ಬೆದರಿಕೆ ಒಡ್ಡಿದರು. ಡಿಸೆಂಬರ್ 11ರಂದು ಶ್ಯಾಮಲಾ ನಾಯ್ಕ ಅವರು ದಿಬ್ಬಣಗಲ್ ಕಡೆಯಿಂದ ಆಳಂಕಿ ಕಡೆ ಸ್ಕೂಟಿ ಮೇಲೆ ಹೋಗುವಾಗ ಅಪರಿಚಿತರು ಅವರನ್ನು ಅಡ್ಡಗಟ್ಟಿದರು. ಕವಲಕೇರಿಯ ನಿರ್ಜನ ಪ್ರದೇಶದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ಇಬ್ಬರು ಶ್ಯಾಮಲಾ ಅವರನ್ನು ಕೆಟ್ಟದಾಗಿ ನಿಂದಿಸಿದರು. `ಜೋಯವಿನ್ ಹಾಗೂ ಪೀಟರ್ ವಿರುದ್ಧ ಸಾಕ್ಷಿ ಹೇಳುತ್ತೀಯಾ?’ ಎಂದು ಪ್ರಶ್ನಿಸಿದ ಆ ಆಗಂತುಕರು `ಈ ದೂರು ಹಿಂಪಡೆಯದೇ ಇದ್ದರೆ ಜೀವ ತೆಗೆಯುವೆ’ ಎಂದು ಬೆದರಿಸಿದರು. `ಟಿಪ್ಪರ್ ಲಾರಿ ಹಾಯಿಸಿ ಕೊಲೆ ಮಾಡುವೆ’ ಎಂಬ ಎಚ್ಚರಿಕೆ ನೀಡಿದರು. ಸದ್ಯ ಈ ಪ್ರಕರಣ ಪೊಲೀಸ್ ತನಿಖೆಯಲ್ಲಿದ್ದು, ಎರಡು ಕಡೆಯವರನ್ನು ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi Festival Kageri Meeting in Kumta

ಶಿರಸಿ ಜಾತ್ರೆ: ಕುಮಟಾದಲ್ಲಿ ಕಾಗೇರಿ ಸಭೆ

January 18, 2026
A blessing for the food!

ಅನ್ನ ಭಾಗ್ಯಕ್ಕೆ ಕನ್ನ!

January 18, 2026

ಮದುವೆಗೆ ಬಂದವ ಮೆಸೆಜ್ ಮಾಡಿದ: ಮಹಿಳೆ ಮನಸ್ಸು ನೋಯಿಸಿದ!

January 18, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋