ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ಬಾಲ್ಯ ಸ್ನೇಹಿತ ಶ್ರೀಧರ ನಾಯ್ಕ ಅವರು ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಅವರ ನಿಧನಕ್ಕೆ ಶಿವರಾಮ ಹೆಬ್ಬಾರ್ ಅವರು ಕಂಬನಿ ಮಿಡಿದಿದ್ದಾರೆ.
ಶ್ರೀಧರ ನಾರಾಯಣ ನಾಯ್ಕ ಅವರು ಯಲ್ಲಾಪುರದ ಅರಬೈಲಿನಲ್ಲಿ ವಾಸವಾಗಿದ್ದರು. ಶ್ರಮ ಜೀವಿ ಆಗಿದ್ದ ಅವರು ಅನೇಕರ ಪಾಲಿಗೆ ಆಪತ್ಬಾಂದವರಾಗಿದ್ದರು. ಅರಬೈಲ್ ಘಟ್ಟದಲ್ಲಿ ಅಪಘಾತಗಳು ನಡೆದಾಗ ತಕ್ಷಣ ಭೇಟಿ ನೀಡಿ ಜನರಿಗೆ ನೆರವಾಗುತ್ತಿದ್ದರು. ಅವರ ಸೇವಾ ಗುಣಗಳಿಂದಲೇ ಪ್ರಸಿದ್ದಿಪಡೆದಿದ್ದು, ಸ್ಥಳೀಯ ಗ್ರಾಮ ಪಂಚಾಯತ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದರು.
ಶ್ರೀಧರ ನಾಯ್ಕ ಅವರು ಶಿವರಾಮ ಹೆಬ್ಬಾರ್ ಅವರ ಬಾಲ್ಯದ ಗೆಳೆಯರಾಗಿದ್ದರು. ಶಿವರಾಮ ಹೆಬ್ಬಾರ್ ಅವರು ಲಾರಿ ಚಾಲಕಾಗಿದ್ದ ಅವಧಿಯಿಂದಲೂ ಶ್ರೀಧರ ನಾಯ್ಕ ಅವರು ಹೆಬ್ಬಾರ್ ಅವರ ಜೊತೆ ದುಡಿದಿದ್ದರು. ಈಚೆಗೆ ವಯೋಸಹಜ ಖಾಯಿಲೆಗೆ ತುತ್ತಾಗಿದ್ದ ಅವರು ಭಾನುವಾರ ತಮ್ಮ ಜೀವನದ ಪ್ರಯಾಣ ಮುಗಿಸಿದರು. ಮೂರು ಗಂಡು ಮಕ್ಕಳ ಜೊತೆ ಅಪಾರ ಪ್ರಮಾಣದ ಬಂಧು-ಬಳಗದವರನ್ನು ಶ್ರೀಧರ ನಾಯ್ಕ ಅವರು ಅಗಲಿದ್ದಾರೆ. ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ, ಸತೀಶ ನಾಯ್ಕ ಕೊಂಡೆಮನೆ ಸೇರಿ ಅನೇಕರು ಶ್ರೀಧರ ನಾಯ್ಕ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.