ಬೆಂಗಳೂರಿನಿoದ ಗೋಕರ್ಣಕ್ಕೆ ಬರುತ್ತಿದ್ದ ಸೀಬರ್ಡ ಬಸ್ ಬೆಂಕಿಗೆ ಆಹುತಿಯಾಗಿದ್ದು, 9 ಜನರ ಸಜೀವ ದಹನ ದೃಢವಾಗಿದೆ. ಈ ಬಸ್ಸಿನಲ್ಲಿ ಈ ಬಸ್ಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರೂ ಇದ್ದು, ಜಿಲ್ಲೆಯ ಪ್ರಯಾಣಿಕರ ಸಾವು-ಬದುಕಿನ ಸ್ಥಿತಿಯ ಬಗ್ಗೆ ಖಚಿತ ಮಾಹಿತಿ ಸಿಗುತ್ತಿಲ್ಲ.
ಬುಧವಾರ ರಾತ್ರಿ ಬೆಂಗಳೂರಿನಿoದ ಸೀಬರ್ಡ ಬಸ್ಸು ಹೊರಟಿತು. ಪ್ರಯಾಣಿಕರು ಗಾಂಧೀನಗರ, ಯಶವಂತಪುರ, ಮೆಜೆಸ್ಟಿಕ್ ಕಡೆಯಿಂದ ಬಸ್ ಹತ್ತಿದ್ದರು. ಆ ಬಸ್ಸಿನಲ್ಲಿ 32 ಜನ ಪ್ರಯಾಣಿಸುತ್ತಿದ್ದರು. ಬಹುತೇಕ ಎಲ್ಲರೂ ಗೋಕರ್ಣಕ್ಕೆ ಬರುವವರಾಗಿದ್ದರು. ಅದರಂತೆ, ಭಟ್ಕಳದ ಶಿರಾಲಿಯ ರಶ್ಮಿ ಮಹಾಲೆ ಅವರು ಸಹ ಈ ಬಸ್ಸಿನಲ್ಲಿದ್ದರು. ಸಾಪ್ಟವೇರ್ ಇಂಜಿನಿಯರ್ ಆಗಿರುವ ರಶ್ಮಿ ಮಹಾಲೆ ಅವರು ಬೆಂಗಳೂರಿನಲ್ಲಿ ಕೆಲಸಕ್ಕಿದ್ದು, ಕ್ರಿಸ್ ಮಸ್ ರಜೆ ಪ್ರಯುಕ್ತ ಊರಿಗೆ ಬರುತ್ತಿದ್ದರು. ನಾಲ್ಕು ದಿನ ಹೆಚ್ಚುವರಿ ರಜೆ ಬೇಕು ಎಂದು ಪಟ್ಟುಹಿಡಿದು ಅವರು ರಜೆಪಡೆದಿದ್ದರು.
ತಮ್ಮ ಸ್ನೇಹಿತರಾದ ಗಗನಾ ಮತ್ತು ರಕ್ಷಿತಾ ಅವರ ಜೊತೆ ರಶ್ಮಿ ಮಹಾಲೆ ಅವರು ಬಸ್ಸು ಏರಿದ್ದರು. ಸ್ನೇಹಿತೆಯರ ಜೊತೆ ಗೋಕರ್ಣಕ್ಕೆ ಬರಲು ಅವರು ಚಿಂತಿಸಿದ್ದು, ಆ ಬಸ್ಸು ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವರಗೊಂಡದಲ್ಲಿ ಅಪಘಾತಕ್ಕೀಡಾಯಿತು. ಬಸ್ಸಿಗೆ ಲಾರಿ ಗುದ್ದಿದ ಪರಿಣಾಮ ಬಸ್ಸು ಹೊತ್ತಿ ಉರಿಯಿತು. ಈ ಅವಘಡದಲ್ಲಿ ರಶ್ಮಿ ಮಹಾಲೆ ಅವರು ಕಣ್ಮರೆಯಾಗಿದ್ದು, ರಶ್ಮಿ ಮಹಾಲೆ ಅವರ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಗಗನಾ ಹಾಗೂ ರಕ್ಷಿತಾ ಅವರು ಬಸ್ಸಿನ ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. `ರಶ್ಮಿ ಅವರು ಸುರಕ್ಷಿತವಾಗಿದ್ದಾರೆ’ ಎಂದು ಮೊದಲು ಅವರ ಮಾವ ಮಾಹಿತಿ ನೀಡಿದ್ದರು. ಆದರೆ, ಇದೀಗ ಕುಟುಂಬದವರು `ರಶ್ಮಿ ಮಹಾಲೆ ಅವರಿಂದ ಯಾವುದೇ ಫೋನ್ ಬಂದಿಲ್ಲ’ ಎಂದು ಸಹ ಹೇಳಿದ್ದಾರೆ.
ಸ್ಥಳದಲ್ಲಿ ಸಿಕ್ಕಿರುವ ಶವಗಳ ಡಿಎನ್ಎ ಪರೀಕ್ಷೆಗೆ ಸರ್ಕಾರ ಮುಂದಾಗಿದೆ. ಅದಾದ ನಂತರವೇ ಸಾವನಪ್ಪಿದವರ ಗುರುತು ಪತ್ತೆಯಾಗಲಿದೆ.