ಮುರುಡೇಶ್ವರದ R N S ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಶಂಕರ ನಾಯ್ಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ನಾನಕ್ಕೆ ಹೋಗಿದ್ದ ಅವರು ಅಲ್ಲಿದ್ದ ಶವರಿಗೆ ಹಗ್ಗ ಕಟ್ಟಿ ನೇಣು ಹಾಕಿಕೊಂಡಿದ್ದಾರೆ.
ಭಟ್ಕಳದ ಕಾಯ್ಕಿಣಿ ಬಳಿಯ ಮಠದಹಿತ್ಲ ಮೋಳೆಮನೆಯಲ್ಲಿ ಶಂಕರ ಜಟ್ಟಾ ನಾಯ್ಕ (50) ಅವರು ವಾಸವಾಗಿದ್ದರು. ಮುರುಡೇಶ್ವರದ ಆರ್ ಎನ್ ಎಸ್ ಹೊಟೇಲಿನಲ್ಲಿ ಅವರು ಅಡುಗೆ ಕೆಲಸ ಮಾಡಿಕೊಂಡಿದ್ದರು. ಪ್ಯಾರಾಲೀಸಿಸ್ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ದೊಡ್ಡ ದೊಡ್ಡ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಕೆಲಸ ಮಾಡಲು ಆಗದ ನೋವಿನಲ್ಲಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಡಿಸೆಂಬರ್ 8ರ ಮಧ್ಯಾಹ್ನ ಸ್ನಾನಕ್ಕೆ ಹೋಗಿದ್ದ ಅವರು ಅಲ್ಲಿ ಶವರ್ ನೋಡಿದರು. ಆ ಶವರಿಗೆ ಹಗ್ಗ ಕಟ್ಟಿ ಕೊರಳಿಗೆ ಸಿಕ್ಕಿಸಿಕೊಂಡು ನೇತಾಡಿದರು. ಅಣ್ಣನ ಸಾವಿನ ಬಗ್ಗೆ ಆಟೋ ಚಾಲಕ ವೆಂಕಟ್ರಮಣ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದರು.