22 ವರ್ಷದ ಯುವಕನೊಬ್ಬ ಕಾರವಾರ ಪ್ರವೇಶಿಸಿದ್ದು, ಕಂಡ ಕಂಡವರ ಮೊಬೈಲ್ ಕದಿಯುತ್ತಿದ್ದಾನೆ. ಸಂತೋಷ ತಾಮಸೆ ಅವರ ಮೊಬೈಲನ್ನು ಆತ ಕದ್ದಿದ್ದು, ಕಳ್ಳನ ಬೆನ್ನತ್ತಿದಾಗ ಮೊಬೈಲ್ ಎಸೆದು ಆತ ಪರಾರಿಯಾಗಿದ್ದಾನೆ.
ಕಾರವಾರದ ಕೋಡಿಭಾಗದ ಶಿವಾಜಿವಾಡದಲ್ಲಿ ಸಂತೋಷ ಗೋವಿಂದ ತಾಮಸೆ (54) ಅವರು ವಾಸವಾಗಿದ್ದಾರೆ. ಅಂಗಡಿ ವ್ಯಾಪಾರ ನಡೆಸಿಕೊಂಡಿರುವ ಅವರು ಒಪ್ಪೋ ಎ17 ಮೊಬೈಲ್ ಹೊಂದಿದ್ದಾರೆ. ಡಿಸೆಂಬರ್ 2ರಂದು ಆ ಮೊಬೈಲ್ ಮೇಲೆ ಕಳ್ಳನ ಕಣ್ಣು ಬಿದ್ದಿದೆ.
ನಿನ್ನೆ ಮಧ್ಯಾಹ್ನ ಸಂತೋಷ ತಾಮಸೆ ಅವರು ತಮ್ಮ ಶರ್ಟಿನ ಮೇಲ್ಬಾಗದಲ್ಲಿ ಮೊಬೈಲ್ ಇರಿಸಿಕೊಂಡಿದ್ದರು. ತೆಳ್ಳಗಿನ ವ್ಯಕ್ತಿ ಅವರ ಕಿಸೆಗೆ ಕೈ ಹಾಕಿ ಮೊಬೈಲ್ ಕದಿಯಲು ಪ್ರಯತ್ನಿಸಿದರು. ಇದಕ್ಕೆ ಸಂತೋಷ ತಾಮಸೆ ಅಡ್ಡಿಪಡಿಸಿದರು. ಅದಾಗಿಯೂ ಆ ಪರಿಚಿತ ಕಿಸೆಯೊಗೆ ಕೈ ಹಾಕಿ ಮೊಬೈಲ್ ಎಗರಿಸಿದರು. ಆಗ, ಸಂತೋಷ ತಾಮಸೆ ಅವರು ದೊಡ್ಡದಾಗಿ ಬೊಬ್ಬೆ ಹಾಕಿದರು.
`ಮೊಬೈಲ್ ಕಳ್ಳ.. ಮೊಬೈಲ್ ಕಳ್ಳ’ ಎಂದು ಸಂತೋಷ ತಾಮಸೆ ಕೂಗಿದನ್ನು ನೋಡಿ ಇನ್ನಿಬ್ಬರು ಕಳ್ಳನ ಬೆನ್ನಟ್ಟಿದರು. ಸಂತೋಷ ತಾಮಸೆ ಅವರು ಕಳ್ಳನನ್ನು ಹಿಂಬಾಲಿಸಿದರು. ಆಗ, ಆ ಕಳ್ಳ ಮೊಬೈಲನ್ನು ಬಿಸಾಡಿ ಪರಾರಿಯಾಗಿದ್ದು, ಅದಾಗಿಯೂ ಸಂತೋಷ ತಾಮಸೆ ಅವರು ಆತನ ಹುಡುಕಾಟ ನಡೆಸಿದರು.
ಕಾರವಾರ ಎಲ್ಲಾ ಕಡೆ ತಿರುಗಾಡಿದರೂ ಮೊಬೈಲ್ ಕಳ್ಳ ಕಾಣಲಿಲ್ಲ. ತಮಗಾದ ಕೆಟ್ಟ ಅನುಭವದ ಬಗ್ಗೆ ಅವರು ಪೊಲೀಸರಲ್ಲಿ ಹೇಳಿದ್ದು, ಆ ಅಪರಿಚಿತ ಕಳ್ಳನ ವಿರುದ್ಧ ಕಾರವಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.