ಕೃಷಿ, ಹೈನುಗಾರಿಕೆ ಮಾಡಿಕೊಂಡಿದ್ದ ವಿಶ್ವೇಶ್ವರ ಭಟ್ಟ ಅವರು ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ್ದಾರೆ.
ಯಲ್ಲಾಪುರದ ಬಿಸಗೋಡಿನ ನಾಗರಖಾನ್ ಬಳಿ ವಿಶ್ವೇಶ್ವರ ಗಣಪತಿ ಭಟ್ಟ (73) ಅವರು ವಾಸವಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲಿಯೂ ಅವರು ಉತ್ಸಾಹದಿಂದ ಕೃಷಿ ಕಾಯಕದಲ್ಲಿ ತೊಡಗಿದ್ದರು. ಡಿಸೆಂಬರ್ 3ರಂದು ಅವರು ವಿದ್ಯುತ್ ಚಾಲಿತ ಮಜ್ಜಿಗೆ ಕಡಿಯುವ ಯಂತ್ರವನ್ನು ಬಳಸಿದ್ದರು. ಆ ಯಂತ್ರವೇ ಅವರ ಜೀವಕ್ಕೆ ಮುಳುವಾಗಿದೆ.
ಮಧ್ಯಾಹ್ನ 12.35ರ ಆಸುಪಾಸಿನಲ್ಲಿ ಅವರು ಎಂದಿನoತೆ ಮಿಶನ್ ಚಾಲು ಮಾಡಿದ್ದರು. ಆದರೆ, ಆ ಮಿಶನ್ ಮೂಲಕ ಪ್ರವಹಿಸಿದ ವಿದ್ಯುತ್ ವಿಶ್ವೇಶ್ವರ ಭಟ್ಟ ಅವರ ದೇಹ ಸೇರಿತು. ಅಲ್ಲಿಯೇ ಕುಸಿದು ಬಿದ್ದ ವಿಶ್ವೇಶ್ವರ ಭಟ್ಟ ಅವರು ಕೊನೆಯುಸಿರೆಳೆದರು. `ಆಕಸ್ಮಿಕ ವಿದ್ಯುತ್ ಅವಘಡವೇ ಈ ಮರಣಕ್ಕೆ ಕಾರಣ’ ಎಂದು ವಿಶ್ವೇಶ್ವರ ಭಟ್ಟ ಅವರ ಪುತ್ರ ಗಣಪತಿ ಭಟ್ಟ ಅವರು ಹೇಳಿದ್ದಾರೆ. ಈ ಸಾವಿನ ಬಗ್ಗೆ ಅರಿತು ಯಲ್ಲಾಪುರ ಪಿಎಸ್ಐ ಮಹಾವೀರ ಕಾಂಬಳೆ ಅವರು ಪ್ರಕರಣ ದಾಖಲಿಸಿದ್ದಾರೆ.
`ಯಂತ್ರೋಪಕರಣ ಬಳಕೆ ಮಾಡುವಾಗ ಎಚ್ಚರಿಕೆವಹಿಸಿ’